<p><strong>ಮೈಸೂರು:</strong> ‘ರಾಜಕಾರಣ- ರಾಜಕಾರಣಿ ಇವೆರಡನ್ನು ಗೌರವದಿಂದ ಸಂಪಾದಿಸಬೇಕು. ಅದನ್ನು ನಾವೆಲ್ಲ ಉಳಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಶಿಸಿದರು.</p>.<p>ಜೆ.ಪಿ.ನಗರದ ಒಡನಾಡಿ ಸೇವಾ ಸಂಸ್ಥೆಯ ಜೀವ ಸಂಗಮ ರಾಜಶೇಖರ ಕೋಟಿ ಸಭಾಂಗಣದಲ್ಲಿ ಶನಿವಾರ ‘ಎ.ಎಚ್.ವಿಶ್ವನಾಥ್ ಬದುಕು-ಬರಹಗಳ ಮೆಲುಕು’, ಸಹಭೋಜನ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಇಂದು ಅಧಿಕಾರಿಗಳು, ರಾಜಕಾರಣಿಗಳು ಒಬ್ಬೊಬ್ಬರು ತಲಾ 20 ನಿವೇಶನ ನಡೆಯುತ್ತಿದ್ದಾರೆ. ರಾಜಕಾರಣಿಗಳಿಗೆ ಜನ ಅಧಿಕಾರ ನೀಡಿದ್ದಾರೆ ಎಂದರೆ ಅವರಿಗೆ ಏನು ಮಾಡಬೇಕು ಎಂದು ತಿಳಿದಿರಬೇಕು’ ಎಂದರು.</p>.<p>‘ಕಲಬುರ್ಗಿಯಲ್ಲಿ ಒಮ್ಮೆ ಕಾರಿನಲ್ಲಿ ಹೋಗುವಾಗ ಒಂದು ಹೆಣ್ಣು ಮಕ್ಕಳು ಕಾಲಿಗೆ ಚಪ್ಪಲಿ ಇಲ್ಲದೇ ಬಿರುಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಕಾರನ್ನು ನಿಲ್ಲಿಸಿ ಆಕೆ ಜೊತೆ ಚರ್ಚಿಸಿದಾಗ, ಅಕ್ಷರದ ಮಹತ್ವದ ಅರಿವಾಯಿತು. ನಂತರದಲ್ಲಿ ಶಿಕ್ಷಣ ಸಚಿವನಾಗಿ ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಿದೆ’ ಎಂದು ನೆನೆದರು.</p>.<p>ಬಿಜೆಪಿ ಮುಖಂಡ ರಘು ಕೌಟಿಲ್ಯ, ‘ವಿಶ್ವನಾಥ್ ಬಹುಮಖ ಪ್ರತಿಭೆ. ಇದ್ದದ್ದನ್ನು ಇದ್ದಹಾಗೇ ಮಾತನಾಡುವ ನೇರ ವ್ಯಕ್ತಿ’ ಎಂದರು.</p>.<p>ನಿವೃತ್ತ ಅಧಿಕಾರಿ ಎಂ.ಎನ್.ನಟರಾಜು, ಒಡನಾಡಿ ಸಂಸ್ಥೆಯ ಪರಶು– ಸ್ಟ್ಯಾನ್ಲಿ ಮಾತನಾಡಿದರು. ಮುಖಂಡರಾದ ಪ್ರಶಾಂತ್ ಗೌಡ, ಬಸವೇಗೌಡ, ಚಂದ್ರಶೇಖರ್, ಜಾಕೀರ್ ಅಹಮ್ಮದ್, ಅಮಿತ್, ಪೂರ್ವಜ್, ನಟೇಶ್, ಶೌಕತ್ ಆಲಿಖಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ರಾಜಕಾರಣ- ರಾಜಕಾರಣಿ ಇವೆರಡನ್ನು ಗೌರವದಿಂದ ಸಂಪಾದಿಸಬೇಕು. ಅದನ್ನು ನಾವೆಲ್ಲ ಉಳಿಸಿಕೊಳ್ಳಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಶಿಸಿದರು.</p>.<p>ಜೆ.ಪಿ.ನಗರದ ಒಡನಾಡಿ ಸೇವಾ ಸಂಸ್ಥೆಯ ಜೀವ ಸಂಗಮ ರಾಜಶೇಖರ ಕೋಟಿ ಸಭಾಂಗಣದಲ್ಲಿ ಶನಿವಾರ ‘ಎ.ಎಚ್.ವಿಶ್ವನಾಥ್ ಬದುಕು-ಬರಹಗಳ ಮೆಲುಕು’, ಸಹಭೋಜನ ಹಾಗೂ ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಇಂದು ಅಧಿಕಾರಿಗಳು, ರಾಜಕಾರಣಿಗಳು ಒಬ್ಬೊಬ್ಬರು ತಲಾ 20 ನಿವೇಶನ ನಡೆಯುತ್ತಿದ್ದಾರೆ. ರಾಜಕಾರಣಿಗಳಿಗೆ ಜನ ಅಧಿಕಾರ ನೀಡಿದ್ದಾರೆ ಎಂದರೆ ಅವರಿಗೆ ಏನು ಮಾಡಬೇಕು ಎಂದು ತಿಳಿದಿರಬೇಕು’ ಎಂದರು.</p>.<p>‘ಕಲಬುರ್ಗಿಯಲ್ಲಿ ಒಮ್ಮೆ ಕಾರಿನಲ್ಲಿ ಹೋಗುವಾಗ ಒಂದು ಹೆಣ್ಣು ಮಕ್ಕಳು ಕಾಲಿಗೆ ಚಪ್ಪಲಿ ಇಲ್ಲದೇ ಬಿರುಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಕಾರನ್ನು ನಿಲ್ಲಿಸಿ ಆಕೆ ಜೊತೆ ಚರ್ಚಿಸಿದಾಗ, ಅಕ್ಷರದ ಮಹತ್ವದ ಅರಿವಾಯಿತು. ನಂತರದಲ್ಲಿ ಶಿಕ್ಷಣ ಸಚಿವನಾಗಿ ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡಿದೆ’ ಎಂದು ನೆನೆದರು.</p>.<p>ಬಿಜೆಪಿ ಮುಖಂಡ ರಘು ಕೌಟಿಲ್ಯ, ‘ವಿಶ್ವನಾಥ್ ಬಹುಮಖ ಪ್ರತಿಭೆ. ಇದ್ದದ್ದನ್ನು ಇದ್ದಹಾಗೇ ಮಾತನಾಡುವ ನೇರ ವ್ಯಕ್ತಿ’ ಎಂದರು.</p>.<p>ನಿವೃತ್ತ ಅಧಿಕಾರಿ ಎಂ.ಎನ್.ನಟರಾಜು, ಒಡನಾಡಿ ಸಂಸ್ಥೆಯ ಪರಶು– ಸ್ಟ್ಯಾನ್ಲಿ ಮಾತನಾಡಿದರು. ಮುಖಂಡರಾದ ಪ್ರಶಾಂತ್ ಗೌಡ, ಬಸವೇಗೌಡ, ಚಂದ್ರಶೇಖರ್, ಜಾಕೀರ್ ಅಹಮ್ಮದ್, ಅಮಿತ್, ಪೂರ್ವಜ್, ನಟೇಶ್, ಶೌಕತ್ ಆಲಿಖಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>