<p><strong>ಮೈಸೂರು</strong>: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ ಎರಡು ತಾಸು ಉತ್ತಮ ಮಳೆಯಾಯಿತು. ಮೈಸೂರು ನಗರದಲ್ಲಿ ಮಧ್ಯರಾತ್ರಿ ಜೋರು ವರ್ಷಧಾರೆಯಾಯಿತು.</p>.<p>ಬೇಸಿಗೆಯ ಆರಂಭದಲ್ಲೇ ಮಧ್ಯರಾತ್ರಿ ಅಕಾಲಿಕ ಮಳೆಯಿಂದ ಜನರು ಪುಳಕಗೊಂಡರು. ರಸ್ತೆಗಳು ಮಳೆನೀರಿನಿಂದ ತುಂಬಿದವು. ಶಿವರಾತ್ರಿ ನಂತರದಲ್ಲಿ ಸೆಖೆ ಹೆಚ್ಚಾಗಿದ್ದು, ವರುಣ ಸಿಂಚನವು ಬೇಗೆ ನೀಗಿಸಿತು.</p>.<p>ಗ್ರಾಮೀಣ ಭಾಗದಲ್ಲಿಯೂ ಉತ್ತಮ ಮಳೆ ಬಿದ್ದಿದ್ದು, ಹೊಲಗಳಲ್ಲಿ ನೀರು ನಿಂತಿತ್ತು. ಮಾವಿನ ಮರಗಳಲ್ಲಿ ಕಾಯಿಗಳು ಬಲಿಯುವ ಹಂತದಲ್ಲಿದ್ದು, ಮಾವು ಕೃಷಿಗೆ ಮಳೆ ವರದಾನವಾಗಿದೆ.</p>.<p>ಮಂಡ್ಯ ಜಿಲ್ಲೆಯ ವಿವಿಧೆಡೆ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರು ಭಾಗದಲ್ಲಿ ಜೋರು ಗಾಳಿ ಸಹಿತ ತುಂತುರು ಮಳೆಯಾಯಿತು. ಕೊಡಗು ಜಿಲ್ಲೆಯ ಸುಂಟಿಕೊಪ್ಪ ತುಂತುರು ಮಳೆ ಬಿದ್ದಿತು.</p>
<p><strong>ಮೈಸೂರು</strong>: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ ಎರಡು ತಾಸು ಉತ್ತಮ ಮಳೆಯಾಯಿತು. ಮೈಸೂರು ನಗರದಲ್ಲಿ ಮಧ್ಯರಾತ್ರಿ ಜೋರು ವರ್ಷಧಾರೆಯಾಯಿತು.</p>.<p>ಬೇಸಿಗೆಯ ಆರಂಭದಲ್ಲೇ ಮಧ್ಯರಾತ್ರಿ ಅಕಾಲಿಕ ಮಳೆಯಿಂದ ಜನರು ಪುಳಕಗೊಂಡರು. ರಸ್ತೆಗಳು ಮಳೆನೀರಿನಿಂದ ತುಂಬಿದವು. ಶಿವರಾತ್ರಿ ನಂತರದಲ್ಲಿ ಸೆಖೆ ಹೆಚ್ಚಾಗಿದ್ದು, ವರುಣ ಸಿಂಚನವು ಬೇಗೆ ನೀಗಿಸಿತು.</p>.<p>ಗ್ರಾಮೀಣ ಭಾಗದಲ್ಲಿಯೂ ಉತ್ತಮ ಮಳೆ ಬಿದ್ದಿದ್ದು, ಹೊಲಗಳಲ್ಲಿ ನೀರು ನಿಂತಿತ್ತು. ಮಾವಿನ ಮರಗಳಲ್ಲಿ ಕಾಯಿಗಳು ಬಲಿಯುವ ಹಂತದಲ್ಲಿದ್ದು, ಮಾವು ಕೃಷಿಗೆ ಮಳೆ ವರದಾನವಾಗಿದೆ.</p>.<p>ಮಂಡ್ಯ ಜಿಲ್ಲೆಯ ವಿವಿಧೆಡೆ, ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರು ಭಾಗದಲ್ಲಿ ಜೋರು ಗಾಳಿ ಸಹಿತ ತುಂತುರು ಮಳೆಯಾಯಿತು. ಕೊಡಗು ಜಿಲ್ಲೆಯ ಸುಂಟಿಕೊಪ್ಪ ತುಂತುರು ಮಳೆ ಬಿದ್ದಿತು.</p>