<p><strong>ಮೈಸೂರು:</strong> ಕೈಗಾರಿಕಾ ಉದ್ಯಮಗಳು (ಎಲ್ಟಿ5 ಮತ್ತು ಎಚ್ಟಿ2ಎ ಸಂಪರ್ಕ) ಬಳಸುವ ಪ್ರತಿ ಎಚ್ಪಿಗೆ ಕಡ್ಡಾಯ ಶುಲ್ಕವನ್ನು ₹15ರಿಂದ ₹20ಕ್ಕೆ ಹಾಗೂ ಪ್ರತಿ ಯೂನಿಟ್ಗೆ 10 ಪೈಸೆಯಿಂದ 70 ಪೈಸೆವರೆಗೆ ಏರಿಸಿ ಪರಿಷ್ಕರಿಸುವ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತವಾಯಿತು.</p><p>ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಅಧ್ಯಕ್ಷ ರವಿಕುಮಾರ್ ಅವರು ಬೆಂಗಳೂರಿನಿಂದ ಆನ್ಲೈನ್ನಲ್ಲಿ ನಡೆಸಿದ ವಿಚಾರಣಾ ಸಭೆಯಲ್ಲಿ ಮೈಸೂರಿನ ಉದ್ಯಮಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.</p><p>ಇಲ್ಲಿನ ಸೆಸ್ಕ್ ಕಚೇರಿಯಿಂದ ಮೈಸೂರು ಕೈಗಾರಿಕೆಗಳ ಸಂಘ ಮತ್ತು ಎಂಎಸ್ಎಂಇ ಕೌನ್ಸಿಲ್ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸುರೇಶ್ಕುಮಾರ್ ಜೈನ್ ಅವರು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದರು.</p><h3>ಒತ್ತಡ ಹಾಕುವುದು ಸಲ್ಲದು: </h3><p>‘ನಮ್ಮ ಮೇಲೆ ಹೊರೆ ಹಾಕಿ, ಒತ್ತಡಕ್ಕೆ ಸಿಲುಕಿಸುವುದು ಸರಿಯಲ್ಲ. 2022ರಿಂದ ಹಂತ ಹಂತವಾಗಿ ಕೈಗಾರಿಕೆ ಹಾಗೂ ವಾಣಿಜ್ಯ ಘಟಕಕ್ಕೆ ದರ ಕಡಿಮೆ ಮಾಡುತ್ತಾ ಬರಲಾಗಿತ್ತು. ಹೋದ ವರ್ಷ ₹ 1.60ವರೆಗೂ ಇಳಿಸಲಾಗಿತ್ತು. ಈಗ ಏರಿಕೆಗೆ ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದರು.</p><p>‘ಎಸ್ಕಾಂಗಳ ಅಧ್ಯಕ್ಷರು ಸರ್ಕಾರದ ಭಾಗ. ಅವರು ಬಜೆಟ್ನಲ್ಲಿ ಅನುದಾನ ತರಲಾಗದೇ, ಅವರ ದೋಷದ ಕಾರಣದಿಂದಾಗಿ ನಮ್ಮ ಮೇಲೆ ಹೊರೆ ಹೊರಿಸಲು ಮುಂದಾಗಿದ್ದಾರೆ’ ಎಂದು ದೂರಿದರು. ‘ನೀರಾವರಿಗೆ ಕಡಿಮೆ ಮಾಡುವುದು ಬೇಡ, ನಮಗೆ ಹೆಚ್ಚಿಸಲೂಬಾರದು’ ಎಂದು ಕೋರಿದರು.</p><h3>ಬಜೆಟ್ನಲ್ಲಿ ಪಡೆದುಕೊಳ್ಳಿ: </h3><p>‘₹ 4,619 ಕೋಟಿ ಖೋತಾ ಆಗಿರುವುದನ್ನು ಸರ್ಕಾರದಿಂದ ಪಡೆದುಕೊಳ್ಳಬೇಕಾಗಿತ್ತು. ಪೂರಕ ಬಜೆಟ್ನಲ್ಲಿಯಾದರೂ ತೆಗೆದುಕೊಳ್ಳಬೇಕಿತ್ತು. ಆದರೆ, ಆಗಲಿಲ್ಲ. ಈಗ ಮುಂಬರುವ ಬಜೆಟ್ನಲ್ಲಾದರೂ ಪಡೆದುಕೊಳ್ಳಬೇಕು. ನಮ್ಮ ಮೇಲೆ ವಿಧಿಸಬಾರದು’ ಎಂದು ಮನವಿ ಮಾಡಿದರು.</p><p>‘ಎಸ್ಕಾಂಗಳಿಗೆ ಸ್ಥಳೀಯ ಸಂಸ್ಥೆಗಳಿಂದ, ಗೃಹಜ್ಯೋತಿ ಮೊದಲಾದ ಯೋಜನೆಗಳಿಂದ ಸರ್ಕಾರಕ್ಕೆ ಹಳೆಯ ಬಾಕಿಯೇ ₹ 1,398 ಕೋಟಿ ಇದೆ. ಅದನ್ನು ವಸೂಲಿ ಮಾಡಿಲ್ಲ. ಅದರ ಬಡ್ಡಿಯನ್ನೆಲ್ಲಾ ನಮ್ಮ ಮೇಲೆ ಹಾಕುತ್ತಿದ್ದಾರೆ. ಎಲ್ಟಿ5 ಮತ್ತು ಎಚ್ಟಿ2ಎ ಸಂಪರ್ಕ ಪಡೆದಿರುವ ಕೈಗಾರಿಕೆಗಳಿಂದ ಬರಬೇಕಾದ ಬಡ್ಡಿ ₹ 85 ಕೋಟಿ ಮಾತ್ರ. ಹಲವು ಕಾರಣದಿಂದ ಕೈಗಾರಿಕೆಗಳು ಮುಚ್ಚಿ ಹೋಗಿರುವುದರಿಂದಾಗಿ ಬಾಕಿ ಇದೆ. ಹಾಗೆಂದು ಎಸ್ಕಾಂಗಳು ಬಿಡುವುದಿಲ್ಲ. ಬಡ್ಡಿ, ಚಕ್ರಬಡ್ಡಿ ಸೇರಿಸಿ ವಸೂಲಿ ಮಾಡಿಯೇ ಮಾಡುತ್ತವೆ. ಆದರೆ, ಸರ್ಕಾರದಿಂದ ಬರಬೇಕಾಗಿರುವ ₹ 1,398 ಕೋಟಿ ವಸೂಲಿಗೆ ಕ್ರಮ ಕೈಗೊಳ್ಳದಿರುವುದು ಎಸ್ಕಾಂಗಳ ಲೋಪವೇ ಹೊರತು ಕೈಗಾರಿಕೆಯವರದು ಅಥವಾ ಗ್ರಾಹಕರದಲ್ಲ’ ಎಂದು ತಿಳಿಸಿದರು.</p><p>‘ವಿದ್ಯುತ್ ದರ ಪರಿಷ್ಕರಿಸಿದಲ್ಲಿ ಕೈಗಾರಿಕೆಗಳು ಸಂಕಷ್ಟಕ್ಕೆ ಒಳಗಾಗಲಿವೆ. ಮೈಸೂರು ವಿಭಾಗದಲ್ಲಿ ಶೇ 30ರಷ್ಟು ಮುಚ್ಚಿವೆ. ಶೇ 40ರಷ್ಟು ಮಾತ್ರ ನಡೆಯುತ್ತಿವೆ. ಹೀಗಾಗಿ, ಯಾವುದೇ ಕಾರಣಕ್ಕೂ ಎಸ್ಕಾಂಗಳ ಅರ್ಜಿಯನ್ನು ಪರಿಗಣಿಸಬಾರದು. ಒಂದೊಮ್ಮೆ ದರ ಏರಿಕೆಯಾದಲ್ಲಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ’ ಎಂದು ಹೇಳಿದರು.</p><p>ಕೈಗಾರಿಕೋದ್ಯಮಿ ಅಶ್ವತ್ಥನಾರಾಯಣ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಕೈಗಾರಿಕಾ ಉದ್ಯಮಗಳು (ಎಲ್ಟಿ5 ಮತ್ತು ಎಚ್ಟಿ2ಎ ಸಂಪರ್ಕ) ಬಳಸುವ ಪ್ರತಿ ಎಚ್ಪಿಗೆ ಕಡ್ಡಾಯ ಶುಲ್ಕವನ್ನು ₹15ರಿಂದ ₹20ಕ್ಕೆ ಹಾಗೂ ಪ್ರತಿ ಯೂನಿಟ್ಗೆ 10 ಪೈಸೆಯಿಂದ 70 ಪೈಸೆವರೆಗೆ ಏರಿಸಿ ಪರಿಷ್ಕರಿಸುವ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತವಾಯಿತು.</p><p>ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಅಧ್ಯಕ್ಷ ರವಿಕುಮಾರ್ ಅವರು ಬೆಂಗಳೂರಿನಿಂದ ಆನ್ಲೈನ್ನಲ್ಲಿ ನಡೆಸಿದ ವಿಚಾರಣಾ ಸಭೆಯಲ್ಲಿ ಮೈಸೂರಿನ ಉದ್ಯಮಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.</p><p>ಇಲ್ಲಿನ ಸೆಸ್ಕ್ ಕಚೇರಿಯಿಂದ ಮೈಸೂರು ಕೈಗಾರಿಕೆಗಳ ಸಂಘ ಮತ್ತು ಎಂಎಸ್ಎಂಇ ಕೌನ್ಸಿಲ್ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸುರೇಶ್ಕುಮಾರ್ ಜೈನ್ ಅವರು ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿದರು.</p><h3>ಒತ್ತಡ ಹಾಕುವುದು ಸಲ್ಲದು: </h3><p>‘ನಮ್ಮ ಮೇಲೆ ಹೊರೆ ಹಾಕಿ, ಒತ್ತಡಕ್ಕೆ ಸಿಲುಕಿಸುವುದು ಸರಿಯಲ್ಲ. 2022ರಿಂದ ಹಂತ ಹಂತವಾಗಿ ಕೈಗಾರಿಕೆ ಹಾಗೂ ವಾಣಿಜ್ಯ ಘಟಕಕ್ಕೆ ದರ ಕಡಿಮೆ ಮಾಡುತ್ತಾ ಬರಲಾಗಿತ್ತು. ಹೋದ ವರ್ಷ ₹ 1.60ವರೆಗೂ ಇಳಿಸಲಾಗಿತ್ತು. ಈಗ ಏರಿಕೆಗೆ ಮುಂದಾಗಿರುವುದು ಖಂಡನೀಯ’ ಎಂದು ತಿಳಿಸಿದರು.</p><p>‘ಎಸ್ಕಾಂಗಳ ಅಧ್ಯಕ್ಷರು ಸರ್ಕಾರದ ಭಾಗ. ಅವರು ಬಜೆಟ್ನಲ್ಲಿ ಅನುದಾನ ತರಲಾಗದೇ, ಅವರ ದೋಷದ ಕಾರಣದಿಂದಾಗಿ ನಮ್ಮ ಮೇಲೆ ಹೊರೆ ಹೊರಿಸಲು ಮುಂದಾಗಿದ್ದಾರೆ’ ಎಂದು ದೂರಿದರು. ‘ನೀರಾವರಿಗೆ ಕಡಿಮೆ ಮಾಡುವುದು ಬೇಡ, ನಮಗೆ ಹೆಚ್ಚಿಸಲೂಬಾರದು’ ಎಂದು ಕೋರಿದರು.</p><h3>ಬಜೆಟ್ನಲ್ಲಿ ಪಡೆದುಕೊಳ್ಳಿ: </h3><p>‘₹ 4,619 ಕೋಟಿ ಖೋತಾ ಆಗಿರುವುದನ್ನು ಸರ್ಕಾರದಿಂದ ಪಡೆದುಕೊಳ್ಳಬೇಕಾಗಿತ್ತು. ಪೂರಕ ಬಜೆಟ್ನಲ್ಲಿಯಾದರೂ ತೆಗೆದುಕೊಳ್ಳಬೇಕಿತ್ತು. ಆದರೆ, ಆಗಲಿಲ್ಲ. ಈಗ ಮುಂಬರುವ ಬಜೆಟ್ನಲ್ಲಾದರೂ ಪಡೆದುಕೊಳ್ಳಬೇಕು. ನಮ್ಮ ಮೇಲೆ ವಿಧಿಸಬಾರದು’ ಎಂದು ಮನವಿ ಮಾಡಿದರು.</p><p>‘ಎಸ್ಕಾಂಗಳಿಗೆ ಸ್ಥಳೀಯ ಸಂಸ್ಥೆಗಳಿಂದ, ಗೃಹಜ್ಯೋತಿ ಮೊದಲಾದ ಯೋಜನೆಗಳಿಂದ ಸರ್ಕಾರಕ್ಕೆ ಹಳೆಯ ಬಾಕಿಯೇ ₹ 1,398 ಕೋಟಿ ಇದೆ. ಅದನ್ನು ವಸೂಲಿ ಮಾಡಿಲ್ಲ. ಅದರ ಬಡ್ಡಿಯನ್ನೆಲ್ಲಾ ನಮ್ಮ ಮೇಲೆ ಹಾಕುತ್ತಿದ್ದಾರೆ. ಎಲ್ಟಿ5 ಮತ್ತು ಎಚ್ಟಿ2ಎ ಸಂಪರ್ಕ ಪಡೆದಿರುವ ಕೈಗಾರಿಕೆಗಳಿಂದ ಬರಬೇಕಾದ ಬಡ್ಡಿ ₹ 85 ಕೋಟಿ ಮಾತ್ರ. ಹಲವು ಕಾರಣದಿಂದ ಕೈಗಾರಿಕೆಗಳು ಮುಚ್ಚಿ ಹೋಗಿರುವುದರಿಂದಾಗಿ ಬಾಕಿ ಇದೆ. ಹಾಗೆಂದು ಎಸ್ಕಾಂಗಳು ಬಿಡುವುದಿಲ್ಲ. ಬಡ್ಡಿ, ಚಕ್ರಬಡ್ಡಿ ಸೇರಿಸಿ ವಸೂಲಿ ಮಾಡಿಯೇ ಮಾಡುತ್ತವೆ. ಆದರೆ, ಸರ್ಕಾರದಿಂದ ಬರಬೇಕಾಗಿರುವ ₹ 1,398 ಕೋಟಿ ವಸೂಲಿಗೆ ಕ್ರಮ ಕೈಗೊಳ್ಳದಿರುವುದು ಎಸ್ಕಾಂಗಳ ಲೋಪವೇ ಹೊರತು ಕೈಗಾರಿಕೆಯವರದು ಅಥವಾ ಗ್ರಾಹಕರದಲ್ಲ’ ಎಂದು ತಿಳಿಸಿದರು.</p><p>‘ವಿದ್ಯುತ್ ದರ ಪರಿಷ್ಕರಿಸಿದಲ್ಲಿ ಕೈಗಾರಿಕೆಗಳು ಸಂಕಷ್ಟಕ್ಕೆ ಒಳಗಾಗಲಿವೆ. ಮೈಸೂರು ವಿಭಾಗದಲ್ಲಿ ಶೇ 30ರಷ್ಟು ಮುಚ್ಚಿವೆ. ಶೇ 40ರಷ್ಟು ಮಾತ್ರ ನಡೆಯುತ್ತಿವೆ. ಹೀಗಾಗಿ, ಯಾವುದೇ ಕಾರಣಕ್ಕೂ ಎಸ್ಕಾಂಗಳ ಅರ್ಜಿಯನ್ನು ಪರಿಗಣಿಸಬಾರದು. ಒಂದೊಮ್ಮೆ ದರ ಏರಿಕೆಯಾದಲ್ಲಿ ನ್ಯಾಯಾಲಯಕ್ಕೆ ಹೋಗಬೇಕಾಗುತ್ತದೆ’ ಎಂದು ಹೇಳಿದರು.</p><p>ಕೈಗಾರಿಕೋದ್ಯಮಿ ಅಶ್ವತ್ಥನಾರಾಯಣ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>