‘ಮಳೆಗೆ ಸಿಲುಕಿದ ತಂಬಾಕು ಸಸಿ ನೀರಿನಲ್ಲಿ ಕರಗಿದ್ದು, ರೈತರಿಗೆ ಮರು ನಾಟಿ ಮಾಡಲು ಸಸಿಗಳಿಲ್ಲದೆ ಒಂದಕ್ಕೆ ಎರಡಷ್ಟು ಬೆಲೆ ನೀಡಿ ಖರೀದಿಸಿ ಮರು ನಾಟಿ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಮೇ ತಿಂಗಳಲ್ಲಿ ವಾಡಿಕೆ ಮಳೆ 17 ಸೆ.ಮಿ. ಬೀಳಬೇಕಿತ್ತು, ಈಗಾಗಲೇ 21 ಸೆ.ಮಿ ಮಳೆಯಾಗಿದೆ. ಈ ವರ್ಷಧಾರೆಗೆ ಕೆರೆಕಟ್ಟೆಗಳು ಬಹುತೇಕ ಭರ್ತಿಯಾಗಿ ತಾಲ್ಲೂಕಿನಲ್ಲಿ 5 ರಿಂದ 6 ಕೆರೆಗಳು ಕೋಡಿ ಬಿದ್ದು ತಗ್ಗು ಪ್ರದೇಶಕ್ಕೆ ಹರಿದ ಪರಿಣಾಮ ಭಾರಿ ಪ್ರಮಾಣದ ಹಾನಿಯಾಗಿದೆ’ ಎಂದು ತಾಲ್ಲೂಕು ರೈತ ಸಂಘದ ಉಪಾಧ್ಯಕ್ಷ ರಾಮೇಗೌಡ ಅಳಲು ತೋಡಿಕೊಂಡಿದ್ದಾರೆ.