ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ತಲೆಮಾರು ಪ್ರಭಾವಿಸಿದ ತೇಜಸ್ವಿ: ಪ್ರೊ.ಎಸ್. ಶಿವರಾಜಪ್ಪ

Published 14 ಸೆಪ್ಟೆಂಬರ್ 2023, 5:42 IST
Last Updated 14 ಸೆಪ್ಟೆಂಬರ್ 2023, 5:42 IST
ಅಕ್ಷರ ಗಾತ್ರ

ಮೈಸೂರು: ‘ಕನ್ನಡದ ನವ ತಲೆಮಾರಿನ ಲೇಖಕರು, ಓದುಗರನ್ನು ಪ್ರಭಾವಿಸಿದ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ’ ಎಂದು ಪ್ರೊ.ಎಸ್. ಶಿವರಾಜಪ್ಪ ಹೇಳಿದರು.

ಅಗ್ರಹಾರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ‘ಪೂರ್ಣಚಂದ್ರ ತೇಜಸ್ವಿ ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಥೆ, ಕಾದಂಬರಿಗಳಲ್ಲಿ ಪ್ರಕೃತಿ ಹಾಗೂ ವಿಜ್ಞಾನದ ವಿಸ್ಮಯಗಳನ್ನು ಓದುಗರಿಗೆ ದಾಟಿಸಿದರು. ಛಾಯಾಗ್ರಾಹಕ, ಪಕ್ಷಿ ವಿಜ್ಞಾನಿ, ಪ್ರಕಾಶಕ, ವರ್ಣಚಿತ್ರಕಾರ ಮತ್ತು ಪರಿಸರವಾದಿಯಾಗಿಯೂ ಪ್ರಸಿದ್ಧರಾಗಿದ್ದರು’ ಎಂದರು.

ಉಪ ಪ್ರಾಂಶುಪಾಲ ಜಿ.ಪ್ರಸಾದಮೂರ್ತಿ ಮಾತನಾಡಿ, ‘ತೇಜಸ್ವಿ ಬರಹದಲ್ಲಿ ಸ್ವಂತಿಕೆ ಮತ್ತು ಸರಳತೆಯಿತ್ತು. ತಂದೆ ಕುವೆಂಪು ಅವರನ್ನು ಮೀರಿಸಿದ ವ್ಯಕ್ತಿತ್ವ ಅವರದು. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಸಾಕ್ಷಿಪ್ರಜ್ಞೆಯಾಗಿದ್ದರು.

ಎನ್.ಜಿ.ಲೋಕೇಶ್, ಬಿ.ಆರ್. ಶುಭ ಅರಸ್, ಎಂ.ಎಸ್.ಸಂಧ್ಯಾರಾಣಿ, ಎಚ್.ಬಿ.ಬಸಪ್ಪ, ಟಿ.ಎ.ಚಂದನಾ, ದಿವ್ಯಾ, ಅನುಷಾ, ಮೇಘಾ, ವಿವರ್ಷ, ಗಗನಾ, ಕೃತಿಕಾ, ಲಖಿತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT