ನಾಗರಹೊಳೆಯಲ್ಲಿ ಸಫಾರಿ ಆರಂಭಿಸಲು ಸರ್ಕಾರ ಆದೇಶಿಸಿದ್ದು ಆದೇಶ ಪತ್ರ ಇಲಾಖೆ ಫೆ. 21ರಂದು ಕೈ ಸೇರಿದೆ. ಈ ಸಂಬಂಧ ಇಲಾಖೆ ಸಭೆ ನಡೆಸಿ ಹಿರಿಯ ಅಧಿಕಾರಿಗಳ ಸೂಚನೆ ಪಡೆದು 23ರಿಂದ ಸಫಾರಿ ಆರಂಭಿಸಲಿದ್ದೇವೆ.
- ಲಕ್ಷ್ಮಿಕಾಂತ್, ಎಸಿಎಫ್ ನಾಗರಹೊಳೆ
ಸಫಾರಿ ರದ್ಧತಿಯಿಂದ 4 ತಿಂಗಳು ನೆಮ್ಮದಿಯಿಂದಿದ್ದ ಅರಣ್ಯದಂಚಿನ ಗ್ರಾಮಸ್ಥರಿಗೆ ಪುನರಾಂಭಿಸಲು ಮುಂದಾಗಿರುವುದು ನಾಗರಿಕರ ನಿದ್ರೆಗೆಡಿಸಿದೆ. ಫೆ. 23ರಂದು ಸಫಾರಿ ವಿರೋಧಿಸಿ ವೀರನಹೊಸಹಳ್ಳಿ ಅರಣ್ಯದಂಚಿನ ಗ್ರಾಮಸ್ಥರು ಪ್ರತಿಭಟಿಸಲಿದ್ದೇವೆ.
- ಲೋಕೇಶ್, ನೇಗತ್ತೂರು ಗ್ರಾಮದ ನಿವಾಸಿ
ಸಫಾರಿ ರದ್ದುಗೊಳಿಸುವುದರಿಂದ ಮಾನವ ವನ್ಯಪ್ರಾಣಿ ಸಂಘರ್ಷ ನಿಲ್ಲುವುದಿಲ್ಲ ಇಲಾಖೆ ರೈಲ್ವೆ ಕಂಬಿ ತಡಗೋಡೆಗೆ ಮೆಷ್ ತಂತಿ ಅಳವಡಿಸುವುದರಿಂದ ಹುಲಿ ಜಿಂಕೆ ಅಂತಹ ಪ್ರಾಣಿಗಳ ಚಲನವಲನಕ್ಕೆ ತಡೆಯೊಡ್ಡಬಹುದು.