<p><strong>ಮೈಸೂರು</strong>: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ 2023ನೇ ಸಾಲಿನ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರದ 15 ಸಾಧಕರು ಎರಡು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಮೈಸೂರಿನ ಡಾ.ಎಸ್. ರಂಗನಾಥಯ್ಯ (ವೈದ್ಯಕೀಯ), ಕೆ.ಪಿ. ನಾಗರಾಜ್ (ದೃಶ್ಯ ಮಾಧ್ಯಮ), ಜೆ.ಪಿ. ಬಸವರಾಜು (ಸಾಹಿತಿ/ಪತ್ರಕರ್ತ), ಮಂಡ್ಯದ ಕೀಲಾರ ಕೃಷ್ಣೇಗೌಡ (ಜನಪದ ಗಾಯನ), ಸಿ. ಬಸವಲಿಂಗಯ್ಯ (ರಂಗಭೂಮಿ), ಅಯೂಬ್ (ಸಮಾಜಸೇವೆ), ಎಸ್.ತುಕಾರಾಮ್ (ಸಾಕ್ಷರತೆ/ಶಿಕ್ಷಣ), ಕೃಪಾಕರ–ಸೇನಾನಿ (ಪರಿಸರ), ಎಚ್.ಆರ್. ಲೀಲಾವತಿ (ಸುಗಮ ಸಂಗೀತ), ಯು.ಎಸ್. ಮಹೇಶ್ (ಪ್ರಕಾಶನ), ಚಿಕ್ಕಮಾದು (ಇತಿಹಾಸ), ಮೂಗೂರು ನಂಜುಂಡಸ್ವಾಮಿ (ಕನ್ನಡ ಹೋರಾಟಗಾರ), ಚಾಮರಾಜನಗರದ ಹೊರೆಯಾಲ ದೊರೆಸ್ವಾಮಿ (ಚಳವಳಿ) ಹಾಗೂ ಕೆ.ಬಿ. ರಮೇಶನಾಯಕ (ಪತ್ರಿಕಾ ಮಾಧ್ಯಮ) ಹಾಗೂ ಹಾಸನದ ಕೋಟೆ ನಾಗರಾಜ್ (ಸಿನಿಮಾ/ರಂಗಭೂಮಿ) ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ಸಂಸ್ಥೆಗಳ ವಿಭಾಗದಲ್ಲಿ ಚಾಮರಾಜನಗರದ ಅಮೃತ ಭೂಮಿ (ನೈಸರ್ಗಿಕ ಬೀಜೋತ್ಪಾದನೆ) ಹಾಗೂ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ (ಸೇವೆ)ಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ತಿಳಿಸಿದ್ದಾರೆ.</p>.<p>ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಪ್ರೊ.ಅರವಿಂದ ಮಾಲಗತ್ತಿ ಹಾಗೂ ಪ್ರೊ.ಸಿ. ನಾಗಣ್ಣ ಆಯ್ಕೆ ಸಮಿತಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡಲಾಗುವ 2023ನೇ ಸಾಲಿನ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ’ ಪ್ರಕಟಿಸಲಾಗಿದ್ದು, ವಿವಿಧ ಕ್ಷೇತ್ರದ 15 ಸಾಧಕರು ಎರಡು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.</p>.<p>ಮೈಸೂರಿನ ಡಾ.ಎಸ್. ರಂಗನಾಥಯ್ಯ (ವೈದ್ಯಕೀಯ), ಕೆ.ಪಿ. ನಾಗರಾಜ್ (ದೃಶ್ಯ ಮಾಧ್ಯಮ), ಜೆ.ಪಿ. ಬಸವರಾಜು (ಸಾಹಿತಿ/ಪತ್ರಕರ್ತ), ಮಂಡ್ಯದ ಕೀಲಾರ ಕೃಷ್ಣೇಗೌಡ (ಜನಪದ ಗಾಯನ), ಸಿ. ಬಸವಲಿಂಗಯ್ಯ (ರಂಗಭೂಮಿ), ಅಯೂಬ್ (ಸಮಾಜಸೇವೆ), ಎಸ್.ತುಕಾರಾಮ್ (ಸಾಕ್ಷರತೆ/ಶಿಕ್ಷಣ), ಕೃಪಾಕರ–ಸೇನಾನಿ (ಪರಿಸರ), ಎಚ್.ಆರ್. ಲೀಲಾವತಿ (ಸುಗಮ ಸಂಗೀತ), ಯು.ಎಸ್. ಮಹೇಶ್ (ಪ್ರಕಾಶನ), ಚಿಕ್ಕಮಾದು (ಇತಿಹಾಸ), ಮೂಗೂರು ನಂಜುಂಡಸ್ವಾಮಿ (ಕನ್ನಡ ಹೋರಾಟಗಾರ), ಚಾಮರಾಜನಗರದ ಹೊರೆಯಾಲ ದೊರೆಸ್ವಾಮಿ (ಚಳವಳಿ) ಹಾಗೂ ಕೆ.ಬಿ. ರಮೇಶನಾಯಕ (ಪತ್ರಿಕಾ ಮಾಧ್ಯಮ) ಹಾಗೂ ಹಾಸನದ ಕೋಟೆ ನಾಗರಾಜ್ (ಸಿನಿಮಾ/ರಂಗಭೂಮಿ) ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ಸಂಸ್ಥೆಗಳ ವಿಭಾಗದಲ್ಲಿ ಚಾಮರಾಜನಗರದ ಅಮೃತ ಭೂಮಿ (ನೈಸರ್ಗಿಕ ಬೀಜೋತ್ಪಾದನೆ) ಹಾಗೂ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ (ಸೇವೆ)ಯನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ತಿಳಿಸಿದ್ದಾರೆ.</p>.<p>ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಪ್ರೊ.ಅರವಿಂದ ಮಾಲಗತ್ತಿ ಹಾಗೂ ಪ್ರೊ.ಸಿ. ನಾಗಣ್ಣ ಆಯ್ಕೆ ಸಮಿತಿಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>