<p><strong>ಮೈಸೂರು: </strong>ಕರ್ನಾಟಕ ಮತ್ತು ಕೇರಳ ಗಡಿ ಭಾಗವಾದ ಡಿ.ಬಿ.ಕುಪ್ಪೆಯಲ್ಲಿ ಪೊಲೀಸ್ ಠಾಣೆಯಾಗಲಿ, ಕನಿಷ್ಠ ಹೊರ ಠಾಣೆಯಾಗಲಿ ಇಲ್ಲ. ಇಲ್ಲಿರುವ 11 ಗ್ರಾಮ ಹಾಗೂ 12 ಹಾಡಿಗಳ ಸುಮಾರು ಏಳು ಸಾವಿರಕ್ಕೂ ಅಧಿಕ ಜನ ದೂರು ನೀಡಲು 50 ಕಿ.ಮೀ.ಗೂ ಹೆಚ್ಚು ಕ್ರಮಿಸಬೇಕಿದೆ.</p>.<p>ಪೊಲೀಸ್ ಠಾಣೆ ಇಲ್ಲದಿರುವುದರಿಂದ ಈ ಭಾಗಕ್ಕೆ ಕೇರಳದಿಂದ ಜನ ಬಂದು ಮದ್ಯವನ್ನು ಅಕ್ರಮವಾಗಿ ಖರೀದಿಸುತ್ತಿದ್ದಾರೆ. ಜೂಜಾಟ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆ ಗಳೂ ನಡೆಯುತ್ತಿವೆ. ಪೊಲೀಸ್ ಠಾಣೆ ಬಹುದೂರದಲ್ಲಿ ಇರುವುದರಿಂದ ಈ ಕುರಿತು ದೂರು ನೀಡಲು ಯಾರೂ ಮುಂದೆ ಬರುವುದಿಲ್ಲ.</p>.<p>ಬೇಸಿಗೆಯಲ್ಲಿ ಕಪಿಲಾ ನದಿಯಲ್ಲಿ ನಡೆದುಕೊಂಡೇ ಬರುತ್ತಾರೆ. ಮುಂಗಾರು ಆರಂಭವಾದ ಮೇಲೆ ತೆಪ್ಪದಲ್ಲಿ ಬಂದು ಹೋಗುತ್ತಾರೆ. ಪೊಲೀಸರಿಲ್ಲ ಎಂಬ ಕಾರಣಕ್ಕೆ ವನ್ಯ ಜೀವಿಗಳ ಬೇಟೆ, ಮರ ಕಡಿಯುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ.</p>.<p>ಅಂತರಸಂತೆಯಲ್ಲಿ ಒಂದು ಹೊರಠಾಣೆ ಇದೆ. ಆದರೆ, ಅದು ಕೂಡ ಡಿ.ಬಿ.ಕುಪ್ಪೆಗೆ 35 ಕಿ.ಮೀ ದೂರದಲ್ಲಿದೆ. ದೂರು ದಾಖಲಿಸಬೇಕಾದರೆ 53 ಕಿ.ಮೀ ದೂರದಲ್ಲಿರುವ ಬೀಚನಹಳ್ಳಿ ಠಾಣೆಗೆ ಜನರು ಬರಬೇಕಿದೆ. ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಗಡಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇದೆ. ಈ ಅವಧಿಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗುವುದಿಲ್ಲ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿ.ಬಿ.ಕುಪ್ಪೆ ವ್ಯಾಪ್ತಿಯ ಬಹಳಷ್ಟು ಗ್ರಾಮಸ್ಥರು, ‘ನಮಗೊಂದು ಪೊಲೀಸ್ ಠಾಣೆ ಬೇಕು. ಕನಿಷ್ಠ ಹೊರಠಾಣೆಯನ್ನಾದರೂ ಕೊಡಿ’ ಎಂದು ಮನವಿ ಮಾಡಿದರು.</p>.<p>‘ಗಲಾಟೆಗಳು, ಅನ್ಯಾಯಗಳು ಇಲ್ಲೂ ನಡೆಯುತ್ತಿವೆ. ಸಮೀಪದಲ್ಲಿ ಪೊಲೀಸ್ ಠಾಣೆ ಇಲ್ಲದಿರುವುದರಿಂದ ಬಹಳಷ್ಟು ಮಂದಿ ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಅನ್ಯಾಯವನ್ನು ಮೌನವಾಗಿಯೇ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಕರ್ನಾಟಕ ಮತ್ತು ಕೇರಳ ಗಡಿ ಭಾಗವಾದ ಡಿ.ಬಿ.ಕುಪ್ಪೆಯಲ್ಲಿ ಪೊಲೀಸ್ ಠಾಣೆಯಾಗಲಿ, ಕನಿಷ್ಠ ಹೊರ ಠಾಣೆಯಾಗಲಿ ಇಲ್ಲ. ಇಲ್ಲಿರುವ 11 ಗ್ರಾಮ ಹಾಗೂ 12 ಹಾಡಿಗಳ ಸುಮಾರು ಏಳು ಸಾವಿರಕ್ಕೂ ಅಧಿಕ ಜನ ದೂರು ನೀಡಲು 50 ಕಿ.ಮೀ.ಗೂ ಹೆಚ್ಚು ಕ್ರಮಿಸಬೇಕಿದೆ.</p>.<p>ಪೊಲೀಸ್ ಠಾಣೆ ಇಲ್ಲದಿರುವುದರಿಂದ ಈ ಭಾಗಕ್ಕೆ ಕೇರಳದಿಂದ ಜನ ಬಂದು ಮದ್ಯವನ್ನು ಅಕ್ರಮವಾಗಿ ಖರೀದಿಸುತ್ತಿದ್ದಾರೆ. ಜೂಜಾಟ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆ ಗಳೂ ನಡೆಯುತ್ತಿವೆ. ಪೊಲೀಸ್ ಠಾಣೆ ಬಹುದೂರದಲ್ಲಿ ಇರುವುದರಿಂದ ಈ ಕುರಿತು ದೂರು ನೀಡಲು ಯಾರೂ ಮುಂದೆ ಬರುವುದಿಲ್ಲ.</p>.<p>ಬೇಸಿಗೆಯಲ್ಲಿ ಕಪಿಲಾ ನದಿಯಲ್ಲಿ ನಡೆದುಕೊಂಡೇ ಬರುತ್ತಾರೆ. ಮುಂಗಾರು ಆರಂಭವಾದ ಮೇಲೆ ತೆಪ್ಪದಲ್ಲಿ ಬಂದು ಹೋಗುತ್ತಾರೆ. ಪೊಲೀಸರಿಲ್ಲ ಎಂಬ ಕಾರಣಕ್ಕೆ ವನ್ಯ ಜೀವಿಗಳ ಬೇಟೆ, ಮರ ಕಡಿಯುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ.</p>.<p>ಅಂತರಸಂತೆಯಲ್ಲಿ ಒಂದು ಹೊರಠಾಣೆ ಇದೆ. ಆದರೆ, ಅದು ಕೂಡ ಡಿ.ಬಿ.ಕುಪ್ಪೆಗೆ 35 ಕಿ.ಮೀ ದೂರದಲ್ಲಿದೆ. ದೂರು ದಾಖಲಿಸಬೇಕಾದರೆ 53 ಕಿ.ಮೀ ದೂರದಲ್ಲಿರುವ ಬೀಚನಹಳ್ಳಿ ಠಾಣೆಗೆ ಜನರು ಬರಬೇಕಿದೆ. ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಗಡಿಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಇದೆ. ಈ ಅವಧಿಯಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ಬರಲು ಸಾಧ್ಯವಾಗುವುದಿಲ್ಲ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿ.ಬಿ.ಕುಪ್ಪೆ ವ್ಯಾಪ್ತಿಯ ಬಹಳಷ್ಟು ಗ್ರಾಮಸ್ಥರು, ‘ನಮಗೊಂದು ಪೊಲೀಸ್ ಠಾಣೆ ಬೇಕು. ಕನಿಷ್ಠ ಹೊರಠಾಣೆಯನ್ನಾದರೂ ಕೊಡಿ’ ಎಂದು ಮನವಿ ಮಾಡಿದರು.</p>.<p>‘ಗಲಾಟೆಗಳು, ಅನ್ಯಾಯಗಳು ಇಲ್ಲೂ ನಡೆಯುತ್ತಿವೆ. ಸಮೀಪದಲ್ಲಿ ಪೊಲೀಸ್ ಠಾಣೆ ಇಲ್ಲದಿರುವುದರಿಂದ ಬಹಳಷ್ಟು ಮಂದಿ ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಅನ್ಯಾಯವನ್ನು ಮೌನವಾಗಿಯೇ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಗ್ರಾಮಸ್ಥರೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>