<p><strong>ಮೈಸೂರು</strong>: ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿರುವ ನಿರಂತರ ರಂಗ ಉತ್ಸವದಲ್ಲಿ ಗುರುವಾರ ದೇವಾನಂದ ವರಪ್ರಸಾದ ಮತ್ತು ನಿರಂತರ ಗೆಳೆಯರು ಪ್ರಸ್ತುತ ಪಡಿಸಿದ ರಂಗಗೀತೆಗಳು ಕಿವಿಗೆ ಇಂಪು ನೀಡಿದವು.</p>.<p>ಸಭಾ ಕಾರ್ಯಕ್ರಮದಲ್ಲಿ ಪತ್ರಕರ್ತ ಜಿ.ಪಿ.ಬಸವರಾಜು ಮಾತನಾಡಿ, ‘ಮತ, ಧರ್ಮ, ಜಾತಿಯ ಭೇದವಿಲ್ಲದೆ ಸಮಾಜ ಕಟ್ಟುವ ಕಾರ್ಯದಲ್ಲಿ ಯುವಸಮೂಹ ತೊಡಗಿಕೊಳ್ಳಬೇಕಿದ್ದು, ನಿರಂತರ ತಂಡದ ಕಾರ್ಯ ಮಾದರಿ’ ಎಂದು ಹೇಳಿದರು.</p>.<p>‘ಈಚೆಗೆ ದೇಶ ಒಡೆಯುವ ಮಾತುಗಳೇ ಹೆಚ್ಚಾಗುತ್ತಿವೆ; ಆದರೆ ದೇಶ, ಸಮಾಜ ಹಾಗೂ ಜನರನ್ನು ಒಟ್ಟುಗೂಡಿಸುವ ಕೆಲಸ ಕಡಿಮೆಯಾಗುತ್ತಿದೆ. ರಂಗ ವೇದಿಕೆಗಳು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿದೆ. ಸಂಗೀತ ಹಾಗೂ ನಾಟಕ ಕೇವಲ ಮನೋರಂಜನೆಯ ಭಾಗವೆಂದು ಭಾವಿಸುವುದು ತಪ್ಪು; ಅವು ಮಾನವನ ಚಿಂತನೆಗೆ ದಿಕ್ಕು ನೀಡುವ ಶಕ್ತಿಯುಳ್ಳ ಕಲಾರೂಪಗಳು’ ಎಂದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ ಮಾತನಾಡಿ, ‘ನಿರಂತರವು ರಂಗ ತರಬೇತಿ ಶಿಬಿರಗಳು, ನಾಟಕೋತ್ಸವಗಳು, ಜಾತ್ರೆಗಳು, ಕಾರ್ಯಾಗಾರಗಳು ಹಾಗೂ ವಿಚಾರ ಸಂಕೀರ್ಣಗಳನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.</p>.<p>ವೇದಿಕೆ ಕಾರ್ಯಕ್ರಮದ ನಂತರ ನಡೆದ ‘ನಾದ ಸಂಜೆ – ಜುಗಲ್ಬಂದಿ’ ಸಂಗೀತ ಕಾರ್ಯಕ್ರಮದಲ್ಲಿ ರವಿ ಶಂಕರ್ ಮಿಶ್ರಾ ಅವರ ಕೊಳಲ ನಾದಕ್ಕೆ ಪ್ರೇಕ್ಷಕರು ತಲೆದೂಗಿದರು. ಜುನೈನ್ ಖಾನ್ ಅವರು ಸಿತಾರ್ನಲ್ಲಿ, ತಬಲಾದಲ್ಲಿ ರಿಷಿ ಪ್ರಸಾದ್ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ನಗರದ ಕಿರುರಂಗಮಂದಿರದಲ್ಲಿ ಆಯೋಜಿಸಿರುವ ನಿರಂತರ ರಂಗ ಉತ್ಸವದಲ್ಲಿ ಗುರುವಾರ ದೇವಾನಂದ ವರಪ್ರಸಾದ ಮತ್ತು ನಿರಂತರ ಗೆಳೆಯರು ಪ್ರಸ್ತುತ ಪಡಿಸಿದ ರಂಗಗೀತೆಗಳು ಕಿವಿಗೆ ಇಂಪು ನೀಡಿದವು.</p>.<p>ಸಭಾ ಕಾರ್ಯಕ್ರಮದಲ್ಲಿ ಪತ್ರಕರ್ತ ಜಿ.ಪಿ.ಬಸವರಾಜು ಮಾತನಾಡಿ, ‘ಮತ, ಧರ್ಮ, ಜಾತಿಯ ಭೇದವಿಲ್ಲದೆ ಸಮಾಜ ಕಟ್ಟುವ ಕಾರ್ಯದಲ್ಲಿ ಯುವಸಮೂಹ ತೊಡಗಿಕೊಳ್ಳಬೇಕಿದ್ದು, ನಿರಂತರ ತಂಡದ ಕಾರ್ಯ ಮಾದರಿ’ ಎಂದು ಹೇಳಿದರು.</p>.<p>‘ಈಚೆಗೆ ದೇಶ ಒಡೆಯುವ ಮಾತುಗಳೇ ಹೆಚ್ಚಾಗುತ್ತಿವೆ; ಆದರೆ ದೇಶ, ಸಮಾಜ ಹಾಗೂ ಜನರನ್ನು ಒಟ್ಟುಗೂಡಿಸುವ ಕೆಲಸ ಕಡಿಮೆಯಾಗುತ್ತಿದೆ. ರಂಗ ವೇದಿಕೆಗಳು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿದೆ. ಸಂಗೀತ ಹಾಗೂ ನಾಟಕ ಕೇವಲ ಮನೋರಂಜನೆಯ ಭಾಗವೆಂದು ಭಾವಿಸುವುದು ತಪ್ಪು; ಅವು ಮಾನವನ ಚಿಂತನೆಗೆ ದಿಕ್ಕು ನೀಡುವ ಶಕ್ತಿಯುಳ್ಳ ಕಲಾರೂಪಗಳು’ ಎಂದರು.</p>.<p>ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ ಮಾತನಾಡಿ, ‘ನಿರಂತರವು ರಂಗ ತರಬೇತಿ ಶಿಬಿರಗಳು, ನಾಟಕೋತ್ಸವಗಳು, ಜಾತ್ರೆಗಳು, ಕಾರ್ಯಾಗಾರಗಳು ಹಾಗೂ ವಿಚಾರ ಸಂಕೀರ್ಣಗಳನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.</p>.<p>ವೇದಿಕೆ ಕಾರ್ಯಕ್ರಮದ ನಂತರ ನಡೆದ ‘ನಾದ ಸಂಜೆ – ಜುಗಲ್ಬಂದಿ’ ಸಂಗೀತ ಕಾರ್ಯಕ್ರಮದಲ್ಲಿ ರವಿ ಶಂಕರ್ ಮಿಶ್ರಾ ಅವರ ಕೊಳಲ ನಾದಕ್ಕೆ ಪ್ರೇಕ್ಷಕರು ತಲೆದೂಗಿದರು. ಜುನೈನ್ ಖಾನ್ ಅವರು ಸಿತಾರ್ನಲ್ಲಿ, ತಬಲಾದಲ್ಲಿ ರಿಷಿ ಪ್ರಸಾದ್ ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>