<p><strong>ಮೈಸೂರು:</strong> ‘ಸಾಮಾಜಿಕ ಹೊಣೆಗಾರಿಕೆ ಇಲ್ಲದ ಬರವಣಿಗೆಯು ಉತ್ತಮ ಸಾಹಿತ್ಯವಾಗುವುದಿಲ್ಲ. ಕವಿಗೆ ಸಾಮಾಜಿಕ ಬದ್ಧತೆ ಅಗತ್ಯ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಹೇಳಿದರು.</p>.<p>ಮೈಸೂರು ವಿಶ್ವವಿದ್ಯಾಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಪ್ರಸಾರಾಂಗ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಪ್ರಸಾರಾಂಗ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಕುಂಬರಹಳ್ಳಿ ರಚನೆಯ ‘ಕ್ಯಾತಯ್ಯನ ಕವನಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಸೈದ್ಧಾಂತಿಕ ಚಳವಳಿಯಿಂದ ರಾಜಕೀಯ ಕ್ಷೇತ್ರವನ್ನು ಸ್ಥಿರತೆಗೆ ತರಬಹುದು. ಸಾಹಿತ್ಯ ತೋರುವ ಸಮಸಮಾಜ ಮತ್ತು ಸರ್ವಧರ್ಮ ಸಮಭಾವ ಕಲ್ಪನೆಯಿಂದ ದೇಶ ಕಟ್ಟಬಹುದು’ ಎಂದರು.</p>.<p>‘ರಾಜಕೀಯ ವ್ಯವಸ್ಥೆ ಕಲುಷಿತವಾಗಿದೆ. ಜಾಗತೀಕರಣದ ಪರಿಣಾಮವಾಗಿ ಒತ್ತಡಕ್ಕೆ ಸಿಲುಕಿರುವ ಜನ ಸಮುದಾಯ ಸಾಹಿತ್ಯ, ಸಂಗೀತ, ಕಲೆ, ರಂಗಭೂಮಿಯಿಂದ ದೂರವಾಗುತ್ತಿದೆ. ಸೈದ್ಧಾಂತಿಕ ಸ್ಪಷ್ಟತೆಯಿಲ್ಲದೇ ಯುವ ಸಮುದಾಯ ರಾಜಕಾರಣಕ್ಕೆ ಬರಬಾರದು’ ಎಂದು ಎಚ್ಚರಿಸಿದರು.</p>.<p>‘ಸಮಾಜವನ್ನು ತಿದ್ದಿ, ಸರಿದಾರಿಗೆ ತರುವ ಹೊಣೆಗಾರಿಕೆ 'ಕ್ಯಾತಯ್ಯನ ಕವನಗಳು' ಸಂಕಲನದಲ್ಲಿದೆ. ಪ್ರತಿಯೊಂದು ಕವನಗಳು ಆಡುಭಾಷೆಯ ಶೈಲಿಯಲ್ಲಿದ್ದು, ಎಲ್ಲರಿಗೂ ತಲುಪುವ ಬದುಕಿನ ವಿಚಾರಗಳನ್ನು ಒಳಗೊಂಡಿದೆ’ ಎಂದು ಮಂಡ್ಯ ಸರ್ಕಾರಿ ಪದವಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಕೆ.ಎಂ. ಪ್ರಸನ್ನಕುಮಾರ್ ಕೆರಗೋಡು ಹೇಳಿದರು.</p>.<p>ಗೀತಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಶೀಲಾ, ಯೋಗೇಶ್ ಆರ್.ಶಂಬಹಳ್ಳಿ, ಸಂಶೋಧನಾ ವಿದ್ಯಾರ್ಥಿಗಳಾದ ಮಹದೇವಸ್ವಾಮಿ ಎಂ.ಚೋರನಹಳ್ಳಿ, ಎಚ್.ಆರ್.ಸಂತೋಷ್ಕುಮಾರ್, ಮಹಾಂತಪ್ಪ ನವಲಕಲ್, ಎಸ್ಎಂಪಿ ಪ್ರಕಾಶನದ ಎಸ್.ಪಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. </p>.<p>ಸಮಾಗಮ ತಂಡದ ಶಿವು, ಮಹದೇವಸ್ವಾಮಿ, ರಾಹುಲ್, ಸ್ವಾಮಿ ರೈತಗೀತೆ ಹಾಡಿದರು. </p>.<p>ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಸಂಜೆ ವಿವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸೌಭಾಗ್ಯವತಿ, ಸಹ ಪ್ರಾಧ್ಯಾಪಕ ಪಿ.ಚಂದ್ರಶೇಖರ, ವಕೀಲ ಶಿವಪ್ರಸಾದ್ ಎಂ.ಸಿ.ಹುಂಡಿ, ನಿವೃತ್ತ ಎಎಸ್ಐ ಸಿ.ರಂಗಯ್ಯ ಉಪಸ್ಥಿತರಿದ್ದರು.</p>.<p><strong>ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ರಾಜಕಾರಣ ಅಗತ್ಯ ಸಾಮಾಜಿಕ ಹೊಣೆಗಾರಿಕೆಯಿಂದ ಉತ್ತಮ ಸಾಹಿತ್ಯ</strong></p>.<div><div class="bigfact-title">ಕೃತಿ ಪರಿಚಯ ಕೃತಿ:</div><div class="bigfact-description">ಕ್ಯಾತಯ್ಯನ ಕವನಗಳು ಲೇಖಕ: ರಾಹುಲ್ ಕುಂಬರಹಳ್ಳಿ ಬೆಲೆ: ₹100 ಪುಟಗಳು: 88 ಪ್ರಕಾಶನ: ಎಸ್ಪಿಎಂ ಪ್ರಕಾಶನ</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಸಾಮಾಜಿಕ ಹೊಣೆಗಾರಿಕೆ ಇಲ್ಲದ ಬರವಣಿಗೆಯು ಉತ್ತಮ ಸಾಹಿತ್ಯವಾಗುವುದಿಲ್ಲ. ಕವಿಗೆ ಸಾಮಾಜಿಕ ಬದ್ಧತೆ ಅಗತ್ಯ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಹೇಳಿದರು.</p>.<p>ಮೈಸೂರು ವಿಶ್ವವಿದ್ಯಾಲಯ ಹಿರಿಯ ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಪ್ರಸಾರಾಂಗ ಸಹಯೋಗದಲ್ಲಿ ಮಾನಸ ಗಂಗೋತ್ರಿಯ ಪ್ರಸಾರಾಂಗ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ರಾಹುಲ್ ಕುಂಬರಹಳ್ಳಿ ರಚನೆಯ ‘ಕ್ಯಾತಯ್ಯನ ಕವನಗಳು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.</p>.<p>‘ಸೈದ್ಧಾಂತಿಕ ಚಳವಳಿಯಿಂದ ರಾಜಕೀಯ ಕ್ಷೇತ್ರವನ್ನು ಸ್ಥಿರತೆಗೆ ತರಬಹುದು. ಸಾಹಿತ್ಯ ತೋರುವ ಸಮಸಮಾಜ ಮತ್ತು ಸರ್ವಧರ್ಮ ಸಮಭಾವ ಕಲ್ಪನೆಯಿಂದ ದೇಶ ಕಟ್ಟಬಹುದು’ ಎಂದರು.</p>.<p>‘ರಾಜಕೀಯ ವ್ಯವಸ್ಥೆ ಕಲುಷಿತವಾಗಿದೆ. ಜಾಗತೀಕರಣದ ಪರಿಣಾಮವಾಗಿ ಒತ್ತಡಕ್ಕೆ ಸಿಲುಕಿರುವ ಜನ ಸಮುದಾಯ ಸಾಹಿತ್ಯ, ಸಂಗೀತ, ಕಲೆ, ರಂಗಭೂಮಿಯಿಂದ ದೂರವಾಗುತ್ತಿದೆ. ಸೈದ್ಧಾಂತಿಕ ಸ್ಪಷ್ಟತೆಯಿಲ್ಲದೇ ಯುವ ಸಮುದಾಯ ರಾಜಕಾರಣಕ್ಕೆ ಬರಬಾರದು’ ಎಂದು ಎಚ್ಚರಿಸಿದರು.</p>.<p>‘ಸಮಾಜವನ್ನು ತಿದ್ದಿ, ಸರಿದಾರಿಗೆ ತರುವ ಹೊಣೆಗಾರಿಕೆ 'ಕ್ಯಾತಯ್ಯನ ಕವನಗಳು' ಸಂಕಲನದಲ್ಲಿದೆ. ಪ್ರತಿಯೊಂದು ಕವನಗಳು ಆಡುಭಾಷೆಯ ಶೈಲಿಯಲ್ಲಿದ್ದು, ಎಲ್ಲರಿಗೂ ತಲುಪುವ ಬದುಕಿನ ವಿಚಾರಗಳನ್ನು ಒಳಗೊಂಡಿದೆ’ ಎಂದು ಮಂಡ್ಯ ಸರ್ಕಾರಿ ಪದವಿ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಕೆ.ಎಂ. ಪ್ರಸನ್ನಕುಮಾರ್ ಕೆರಗೋಡು ಹೇಳಿದರು.</p>.<p>ಗೀತಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಶೀಲಾ, ಯೋಗೇಶ್ ಆರ್.ಶಂಬಹಳ್ಳಿ, ಸಂಶೋಧನಾ ವಿದ್ಯಾರ್ಥಿಗಳಾದ ಮಹದೇವಸ್ವಾಮಿ ಎಂ.ಚೋರನಹಳ್ಳಿ, ಎಚ್.ಆರ್.ಸಂತೋಷ್ಕುಮಾರ್, ಮಹಾಂತಪ್ಪ ನವಲಕಲ್, ಎಸ್ಎಂಪಿ ಪ್ರಕಾಶನದ ಎಸ್.ಪಿ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. </p>.<p>ಸಮಾಗಮ ತಂಡದ ಶಿವು, ಮಹದೇವಸ್ವಾಮಿ, ರಾಹುಲ್, ಸ್ವಾಮಿ ರೈತಗೀತೆ ಹಾಡಿದರು. </p>.<p>ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಸಂಜೆ ವಿವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸೌಭಾಗ್ಯವತಿ, ಸಹ ಪ್ರಾಧ್ಯಾಪಕ ಪಿ.ಚಂದ್ರಶೇಖರ, ವಕೀಲ ಶಿವಪ್ರಸಾದ್ ಎಂ.ಸಿ.ಹುಂಡಿ, ನಿವೃತ್ತ ಎಎಸ್ಐ ಸಿ.ರಂಗಯ್ಯ ಉಪಸ್ಥಿತರಿದ್ದರು.</p>.<p><strong>ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ರಾಜಕಾರಣ ಅಗತ್ಯ ಸಾಮಾಜಿಕ ಹೊಣೆಗಾರಿಕೆಯಿಂದ ಉತ್ತಮ ಸಾಹಿತ್ಯ</strong></p>.<div><div class="bigfact-title">ಕೃತಿ ಪರಿಚಯ ಕೃತಿ:</div><div class="bigfact-description">ಕ್ಯಾತಯ್ಯನ ಕವನಗಳು ಲೇಖಕ: ರಾಹುಲ್ ಕುಂಬರಹಳ್ಳಿ ಬೆಲೆ: ₹100 ಪುಟಗಳು: 88 ಪ್ರಕಾಶನ: ಎಸ್ಪಿಎಂ ಪ್ರಕಾಶನ</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>