<p><strong>ಮೈಸೂರು</strong>: ವರ್ತಮಾನದಲ್ಲಿ ಮನುಷ್ಯ ಸಂಬಂಧಗಳ ನಡುವಿನ ತಲ್ಲಣಗಳಿಗೆ ಶುಕ್ರವಾರ ನಡೆದ ‘ಪ್ರಬುದ್ಧ’ ಕವಿಗೋಷ್ಠಿಯು ಧ್ವನಿಯಾಯಿತು. ‘ ಒಲವ ಬಿತ್ತಿ, ಒಲವ ಬೆಳೆ, ಒಲವಿನಿಂದಲೇ ಜೀವನ’ ಎನ್ನುವ ಸಂದೇಶ ಸಾರಿತು.</p>.<p>ದಸರಾ ಕವಿಗೋಷ್ಠಿಯ ಕಡೆಯ ದಿನದಂದು ನಡೆದ ಗೋಷ್ಠಿಯಲ್ಲಿ ನಾಡಿನ ವಿವಿಧ ಜಿಲ್ಲೆಗಳ 34 ‘ಪ್ರಬುದ್ಧ’ ಕವಿಗಳು ತಮ್ಮ ಕವಿತಾ ವಾಚನದ ಮೂಲಕ ಗಮನ ಸೆಳೆದರು. ಬಹುತೇಕ ಕವಿತೆಗಳು ಸಮಾಜದೊಳಗಿನ ನೋವಿನ ಧ್ವನಿಯಾಗಿದ್ದವು. ಸೌಹಾರ್ದ ಸಾರುತ್ತಲೇ, ಹೋರಾಟದ ಗಟ್ಟಿ ಧ್ವನಿಯ ಕಿಡಿ ಹೊತ್ತಿಸಿದವು.</p>.<p>ಗೋಷ್ಠಿಯ ಆರಂಭದಲ್ಲೇ ಬೆಳಗಾವಿಯ ಅಕ್ಬರ್ ಸನದಿ ‘ಹೂವಿನಂತೆ ಅರಳಲಿ’ ಕವಿತೆಯೊಂದಿಗೆ ಒಲವಿನ ಮಹತ್ವ ಸಾರಿದರು. ಸಂತೇಬೆನ್ನೂರಿನ ಫೈಜ್ನಟ್ರಾಜ್ ‘ ನಮ್ಮ ಕಣ್ಣಲ್ಲಿ ನಿಮ್ಮ ನೀರು...’ ಎನ್ನುವ ಕವಿತೆ ಮೂಲಕ ಶೋತೃಗಳ ಚಪ್ಪಾಳೆ ಗಿಟ್ಟಿಸಿದರು.’ ನಿಮ್ಮ ಕೈಯ ಬೆಂಕಿಪಟ್ಟಣ ನಮಗೂ ಹಸ್ತಾಂತರಿಸಬೇಕಿತ್ತು. ಬೆಂಕಿಗಲ್ಲ, ಹಣತೆ ಹಚ್ಚುತ್ತಿದ್ದೆವು' ಎನ್ನುವ ಆಶಯದ ಅವರ ಕವಿತೆ ಇಂದಿನ ಸಮಾಜಕ್ಕೆ ಅಗತ್ಯವಾದ ಸೌಹಾರ್ದ ಸಾರಿತು.</p>.<p>ಅನೇಕ ವೈರಾಗ್ಯದ, ಸಿಟ್ಟಿನ, ನೋವಿನ ಕವಿತೆಗಳಿಗೂ ಕವಿಗಳು ಧ್ವನಿಯಾದರು. ರಾಯಚೂರಿನ ಈರಣ್ಣ ಬೆಂಗಾಲಿ ‘ಜೀವನ ನಾಲ್ಕು ದಿನದ ಸಂತೆ ಎಂದು ನೆನಪಾಗುವುದು ಮಣ್ಣಿಗೆ ಹೋದಾಗ..’ ಎನ್ನುವ ಘಜಲ್ ತೆರೆದಿಟ್ಟರು. ಮೈಸೂರಿನ ಕಾ. ರಾಮೇಶ್ವರಪ್ಪ ‘ ಯುಗದ ಸೂರ್ಯನಿ, ಕೊಂದವರಿಗೆ ಕೊರಳಿನ ಅರ್ಥ ವಿವರಿಸಿದ ದಾರ್ಶನಿಕ’ ಎನ್ನುವ ಮೂಲಕ ಅಂಬೇಡ್ಕರ್ಗೆ ನುಡಿನಮನ ಸಲ್ಲಿಸಿದರು.</p>.<p>ಕೊಪ್ಪಳದ ನಾಗರಾಜು ಹೀರಾ ಅವರ ‘ಸಮಾಧಾನವಿಲ್ಲ ಮಗಳೇ...’, ಯಾದಗಿರಿಯ ನೀಲಮ್ಮ ಮಲ್ಲೆ ವಾಚಿಸಿದ ದೇವದಾಸಿಯರ ಕುರಿತ ‘ ಬದುಕು ಸುಟ್ಟ ಬೆಂಕಿ’, ಬೆಂಗಳೂರಿನ ಪದ್ಮಿನಿ ನಾಗರಾಜು ಅವರ ‘ ಎದ್ದು ಬರುತ್ತೇವೆ ನಾವು ಫೀನಿಕ್ಸ್ನಂತೆ’ ಹಾಗೂ ಕೋಲಾರದ ಗುರುಮೂರ್ತಿ ಜಯಮಂಗಲ ಅವರ ‘ ಈ ಭೂಮಿ ನನಗೆ ತುಂಬಾ ಕಲಿಸಿದೆ’ ಕವಿತೆಗಳು ನೊಂದ ಸಮಾಜ, ಕುಲ- ಜಾತಿಗಳ ಸಂಕಟ ತೆರೆದಿಟ್ಟವು.</p>.<p>ಕೊಡಗಿನ ಜಯಲಕ್ಷ್ಮಿ ಅವರ ‘ಭರವಸೆಯ ಬದುಕು’ ಉಮೇಶ್ ಬಾಬು ಮಠದ ಅವರ ‘ ಬೇಕಾಗಿದ್ದಾನೆ’, ದೇವು ಮಾರ್ಕೊಂಡ ಅವರ ‘ನಗುವೆ ಒಮ್ಮೆ ನಕ್ಕು ಬಿಡು’, ಮರುಳ ಸಿದ್ದಪ್ಪ ದೊಡ್ಡಮನಿ ಅವರ ‘ಹೃದಯ ಕಂಪಿಸಿತು ಮಲ್ಲಿನಾಥ ತಳವಾರ ಘಜಲ್ ಮೊದಲಾದ ಕವಿತೆಗಳೂ ಗಮನ ಸೆಳೆದವು. ಉಡುಪಿಯ ಪ್ಲಾವಿಯ ಕ್ಯಾಸ್ಟಲಿನೊ ಕೊಂಕಣಿಯಲ್ಲಿ ಕವಿತೆ ಓದಿದರು.</p>.<p class="Subhead">ಕನ್ನಡದ ಪ್ರೀತಿ:</p>.<p>ಕನ್ನಡದ ಬಗೆಗಿನ ಭಾಷಾ ಕಾಳಜಿಯೂ ಅನೇಕರ ಕವಿತೆಗಳಲ್ಲಿ ವ್ಯಕ್ತವಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ‘ ಕನ್ನಡ ಭುವನೇಶ್ವರಿ’ಗೆ ಜೈಕಾರ ಹಾಕಿದರೆ, ಉಡುಪಿಯ ನೀಲಾವರ ಸುರೇಂದ್ರ ಅಡಿಗರು ‘ಕನ್ನಡಾಭಿಮಾನಿ’ ಕವಿತೆಯ ಮೂಲಕ ಈಗಿನ ಕಾಲದ ಕನ್ನಡ ಹೋರಾಟಗಾರರ ಬದ್ಧತೆಯನ್ನು ವ್ಯಂಗ್ಯದ ರೂಪದಲ್ಲಿ ತೆರೆದಿಟ್ಟರು. ಶಿವಮೊಗ್ಗದ ನಂದಾ ಪ್ರೇಮಕುಮಾರ್ ‘ ಬೇಕೆ, ಬೇಕು ಕನ್ನಡ ಶಾಲೆ’ ಎಂದು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ವರ್ತಮಾನದಲ್ಲಿ ಮನುಷ್ಯ ಸಂಬಂಧಗಳ ನಡುವಿನ ತಲ್ಲಣಗಳಿಗೆ ಶುಕ್ರವಾರ ನಡೆದ ‘ಪ್ರಬುದ್ಧ’ ಕವಿಗೋಷ್ಠಿಯು ಧ್ವನಿಯಾಯಿತು. ‘ ಒಲವ ಬಿತ್ತಿ, ಒಲವ ಬೆಳೆ, ಒಲವಿನಿಂದಲೇ ಜೀವನ’ ಎನ್ನುವ ಸಂದೇಶ ಸಾರಿತು.</p>.<p>ದಸರಾ ಕವಿಗೋಷ್ಠಿಯ ಕಡೆಯ ದಿನದಂದು ನಡೆದ ಗೋಷ್ಠಿಯಲ್ಲಿ ನಾಡಿನ ವಿವಿಧ ಜಿಲ್ಲೆಗಳ 34 ‘ಪ್ರಬುದ್ಧ’ ಕವಿಗಳು ತಮ್ಮ ಕವಿತಾ ವಾಚನದ ಮೂಲಕ ಗಮನ ಸೆಳೆದರು. ಬಹುತೇಕ ಕವಿತೆಗಳು ಸಮಾಜದೊಳಗಿನ ನೋವಿನ ಧ್ವನಿಯಾಗಿದ್ದವು. ಸೌಹಾರ್ದ ಸಾರುತ್ತಲೇ, ಹೋರಾಟದ ಗಟ್ಟಿ ಧ್ವನಿಯ ಕಿಡಿ ಹೊತ್ತಿಸಿದವು.</p>.<p>ಗೋಷ್ಠಿಯ ಆರಂಭದಲ್ಲೇ ಬೆಳಗಾವಿಯ ಅಕ್ಬರ್ ಸನದಿ ‘ಹೂವಿನಂತೆ ಅರಳಲಿ’ ಕವಿತೆಯೊಂದಿಗೆ ಒಲವಿನ ಮಹತ್ವ ಸಾರಿದರು. ಸಂತೇಬೆನ್ನೂರಿನ ಫೈಜ್ನಟ್ರಾಜ್ ‘ ನಮ್ಮ ಕಣ್ಣಲ್ಲಿ ನಿಮ್ಮ ನೀರು...’ ಎನ್ನುವ ಕವಿತೆ ಮೂಲಕ ಶೋತೃಗಳ ಚಪ್ಪಾಳೆ ಗಿಟ್ಟಿಸಿದರು.’ ನಿಮ್ಮ ಕೈಯ ಬೆಂಕಿಪಟ್ಟಣ ನಮಗೂ ಹಸ್ತಾಂತರಿಸಬೇಕಿತ್ತು. ಬೆಂಕಿಗಲ್ಲ, ಹಣತೆ ಹಚ್ಚುತ್ತಿದ್ದೆವು' ಎನ್ನುವ ಆಶಯದ ಅವರ ಕವಿತೆ ಇಂದಿನ ಸಮಾಜಕ್ಕೆ ಅಗತ್ಯವಾದ ಸೌಹಾರ್ದ ಸಾರಿತು.</p>.<p>ಅನೇಕ ವೈರಾಗ್ಯದ, ಸಿಟ್ಟಿನ, ನೋವಿನ ಕವಿತೆಗಳಿಗೂ ಕವಿಗಳು ಧ್ವನಿಯಾದರು. ರಾಯಚೂರಿನ ಈರಣ್ಣ ಬೆಂಗಾಲಿ ‘ಜೀವನ ನಾಲ್ಕು ದಿನದ ಸಂತೆ ಎಂದು ನೆನಪಾಗುವುದು ಮಣ್ಣಿಗೆ ಹೋದಾಗ..’ ಎನ್ನುವ ಘಜಲ್ ತೆರೆದಿಟ್ಟರು. ಮೈಸೂರಿನ ಕಾ. ರಾಮೇಶ್ವರಪ್ಪ ‘ ಯುಗದ ಸೂರ್ಯನಿ, ಕೊಂದವರಿಗೆ ಕೊರಳಿನ ಅರ್ಥ ವಿವರಿಸಿದ ದಾರ್ಶನಿಕ’ ಎನ್ನುವ ಮೂಲಕ ಅಂಬೇಡ್ಕರ್ಗೆ ನುಡಿನಮನ ಸಲ್ಲಿಸಿದರು.</p>.<p>ಕೊಪ್ಪಳದ ನಾಗರಾಜು ಹೀರಾ ಅವರ ‘ಸಮಾಧಾನವಿಲ್ಲ ಮಗಳೇ...’, ಯಾದಗಿರಿಯ ನೀಲಮ್ಮ ಮಲ್ಲೆ ವಾಚಿಸಿದ ದೇವದಾಸಿಯರ ಕುರಿತ ‘ ಬದುಕು ಸುಟ್ಟ ಬೆಂಕಿ’, ಬೆಂಗಳೂರಿನ ಪದ್ಮಿನಿ ನಾಗರಾಜು ಅವರ ‘ ಎದ್ದು ಬರುತ್ತೇವೆ ನಾವು ಫೀನಿಕ್ಸ್ನಂತೆ’ ಹಾಗೂ ಕೋಲಾರದ ಗುರುಮೂರ್ತಿ ಜಯಮಂಗಲ ಅವರ ‘ ಈ ಭೂಮಿ ನನಗೆ ತುಂಬಾ ಕಲಿಸಿದೆ’ ಕವಿತೆಗಳು ನೊಂದ ಸಮಾಜ, ಕುಲ- ಜಾತಿಗಳ ಸಂಕಟ ತೆರೆದಿಟ್ಟವು.</p>.<p>ಕೊಡಗಿನ ಜಯಲಕ್ಷ್ಮಿ ಅವರ ‘ಭರವಸೆಯ ಬದುಕು’ ಉಮೇಶ್ ಬಾಬು ಮಠದ ಅವರ ‘ ಬೇಕಾಗಿದ್ದಾನೆ’, ದೇವು ಮಾರ್ಕೊಂಡ ಅವರ ‘ನಗುವೆ ಒಮ್ಮೆ ನಕ್ಕು ಬಿಡು’, ಮರುಳ ಸಿದ್ದಪ್ಪ ದೊಡ್ಡಮನಿ ಅವರ ‘ಹೃದಯ ಕಂಪಿಸಿತು ಮಲ್ಲಿನಾಥ ತಳವಾರ ಘಜಲ್ ಮೊದಲಾದ ಕವಿತೆಗಳೂ ಗಮನ ಸೆಳೆದವು. ಉಡುಪಿಯ ಪ್ಲಾವಿಯ ಕ್ಯಾಸ್ಟಲಿನೊ ಕೊಂಕಣಿಯಲ್ಲಿ ಕವಿತೆ ಓದಿದರು.</p>.<p class="Subhead">ಕನ್ನಡದ ಪ್ರೀತಿ:</p>.<p>ಕನ್ನಡದ ಬಗೆಗಿನ ಭಾಷಾ ಕಾಳಜಿಯೂ ಅನೇಕರ ಕವಿತೆಗಳಲ್ಲಿ ವ್ಯಕ್ತವಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜು ‘ ಕನ್ನಡ ಭುವನೇಶ್ವರಿ’ಗೆ ಜೈಕಾರ ಹಾಕಿದರೆ, ಉಡುಪಿಯ ನೀಲಾವರ ಸುರೇಂದ್ರ ಅಡಿಗರು ‘ಕನ್ನಡಾಭಿಮಾನಿ’ ಕವಿತೆಯ ಮೂಲಕ ಈಗಿನ ಕಾಲದ ಕನ್ನಡ ಹೋರಾಟಗಾರರ ಬದ್ಧತೆಯನ್ನು ವ್ಯಂಗ್ಯದ ರೂಪದಲ್ಲಿ ತೆರೆದಿಟ್ಟರು. ಶಿವಮೊಗ್ಗದ ನಂದಾ ಪ್ರೇಮಕುಮಾರ್ ‘ ಬೇಕೆ, ಬೇಕು ಕನ್ನಡ ಶಾಲೆ’ ಎಂದು ಕೂಗಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>