<p><strong>ಮೈಸೂರು:</strong> ವ್ಯಕ್ತಿಯೊಬ್ಬನ ಯಶಸ್ಸಿನ ಕಥೆಯು ಮತ್ತೊಬ್ಬನಿಗೆ ಪ್ರೇರಣೆಯಾಗಬಲ್ಲದು ಎಂಬ ಮಾತಿದೆ. ಇದಕ್ಕೆ ಪೂರಕವಾಗಿ ಪೊಲೀಸ್ ಅಕಾಡೆಮಿಯು ಇಲಾಖೆಗೆ ಹೊಸದಾಗಿ ಸೇರುವವರಿಗಾಗಿ, ಇಲಾಖೆಯಲ್ಲೇ ಸಾಧನೆ ಮಾಡಿದವರ ಕಥೆಗಳನ್ನು ಪಾಡ್ಕಾಸ್ಟ್ ಮೂಲಕ ಬಿತ್ತರಿಸಲು ಹೊರಟಿದೆ.</p>.<p>ಅಕಾಡೆಮಿಯು ಈ ವಿನೂತನ ಪ್ರಯತ್ನಕ್ಕೆ ‘ವಾಕಿ– ಟಾಕಿ ವಿಥ್ ಖಾಕಿ’ ಎಂದು ಶೀರ್ಷಿಕೆ ನೀಡಿದೆ. ಹೊಸಬರಿಗೆ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುವುದರೊಂದಿಗೆ ಸಮಾಜಕ್ಕೆ ಪೊಲೀಸ್ ವ್ಯವಸ್ಥೆಯಲ್ಲಿರುವ ಸವಾಲುಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ಆರಂಭಿಸಲಾಗಿದೆ.</p>.<p>ಈ ಪಾಡ್ಕಾಸ್ಟ್ಗಾಗಿ ಅಕಾಡೆಮಿ ಆವರಣದಲ್ಲಿ ಸ್ಟುಡಿಯೊ ವ್ಯವಸ್ಥೆ ಮಾಡಿಕೊಂಡಿದ್ದು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಪ್ರಥಮ ಸಂಚಿಕೆಯಲ್ಲಿ ಪಿಎಸ್ಐ ಪ್ರಶಿಕ್ಷಣಾರ್ಥಿ ಸಿದ್ದೇಶ್ ಅವರು ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವ ಕುರಿತ ಅನುಭವಗಳನ್ನು ಕೆ.ಎಂ.ನಂದಿನಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಈ ಪಾಡ್ಕಾಸ್ಟ್ ಕೆಪಿಎ ಮೈಸೂರು (KPA-MYSURU) ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರಗೊಂಡಿದೆ.</p>.<p>ಪೊಲೀಸ್ ಇಲಾಖೆಗೆ ಹೊಸತಾಗಿ ಸೇರಿರುವವರ ಅನುಭವ, ವಿಶೇಷ ಸೇವೆಯಿಂದ ಗುರುತಿಸಿರುವ ಅಧಿಕಾರಿಗಳು ಮಾತುಕತೆ, ನಿವೃತ್ತ ಅಧಿಕಾರಿಗಳ ಯಶೋಗಾಥೆಗಳು ಈ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ‘ಪೊಲೀಸ್ ಇಲಾಖೆಯ ಸೇವೆಗಳ ಬಗ್ಗೆ ಸಮಾಜದಲ್ಲಿ ಉತ್ತಮ ಸಂದೇಶ ಹಂಚಲು ಈ ಪ್ರಯತ್ನ ಸಹಾಯವಾಗಲಿದೆ’ ಎನ್ನುತ್ತಾರೆ ಪೊಲೀಸ್ ಅಕಾಡೆಮಿ ಅಧಿಕಾರಿಗಳು.</p>.<p>ಜರ್ಮನಿಯ ಬವೇರಿಯಾದ ಪೊಲೀಸರ ತಂಡವು ಅಕಾಡಮಿಗೆ ಆಗಮಿಸಲಿದ್ದು, ಅಲ್ಲಿನ ಪೊಲೀಸ್ ವ್ಯವಸ್ಥೆಯ ಕುರಿತು ಅಧಿಕಾರಿಗಳು ಪಾಡ್ಕಾಸ್ಟ್ ಮೂಲಕ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಮುಂದೆ ಪತ್ರಕರ್ತರು ಹಾಗೂ ಸಾಹಿತಿಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸುವ ಯೋಜನೆ ರೂಪಿಸಲಾಗಿದೆ.</p>.<p>‘ಅಧಿಕಾರಿಗಳ ಅನುಭವವು ಪ್ರಶಿಕ್ಷಣಾರ್ಥಿಗಳಿಗೆ ಉತ್ಸಾಹ ತುಂಬಲು ಸಹಾಯಕವಾಗಲಿದೆ. ಅತಿಥಿಗಳ ಆಯ್ಕೆಯ ಬಳಿಕ ನಿರೂಪಕರನ್ನು ನಿರ್ಧರಿಸಲಿದ್ದು, ಅಕಾಡೆಮಿ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಅವಕಾಶ ನೀಡಲಿದ್ದೇವೆ’ ಎಂದು ಅಕಾಡೆಮಿ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p><strong>- ‘ಜನರನ್ನು ಪರಿಣಾಮಕಾರಿಯಾಗಿ ತಲುಪಲಿದ್ದೇವೆ’</strong> </p><p>‘ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಪಾಡ್ಕಾಸ್ಟ್ ಆಯ್ಕೆ ಮಾಡಿದ್ದೇವೆ. ಇಲಾಖೆಗೆ ಸೇರಲು ಯುವ ಸಮೂಹವನ್ನು ಪ್ರೇರೇಪಿಸಲಿದ್ದೇವೆ. ಪ್ರಸ್ತುತ ಪೊಲೀಸರ ತಪ್ಪುಗಳನ್ನಷ್ಟೇ ಎತ್ತಿಹಿಡಿಯುವ ಕೆಲಸಗಳಾಗುತ್ತಿವೆ. ಈ ಕಾರ್ಯಕ್ರಮದ ಮೂಲಕ ಪೊಲೀಸರ ಸೇವೆಯ ಬಗ್ಗೆಯೂ ತಿಳಿಸಲಿದ್ದೇವೆ. ಮುಂದಿನ ಹಂತದಲ್ಲಿ ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಪೊಲೀಸ್ ವೃತ್ತಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತೇವೆ’ ಎಂದು ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ವ್ಯಕ್ತಿಯೊಬ್ಬನ ಯಶಸ್ಸಿನ ಕಥೆಯು ಮತ್ತೊಬ್ಬನಿಗೆ ಪ್ರೇರಣೆಯಾಗಬಲ್ಲದು ಎಂಬ ಮಾತಿದೆ. ಇದಕ್ಕೆ ಪೂರಕವಾಗಿ ಪೊಲೀಸ್ ಅಕಾಡೆಮಿಯು ಇಲಾಖೆಗೆ ಹೊಸದಾಗಿ ಸೇರುವವರಿಗಾಗಿ, ಇಲಾಖೆಯಲ್ಲೇ ಸಾಧನೆ ಮಾಡಿದವರ ಕಥೆಗಳನ್ನು ಪಾಡ್ಕಾಸ್ಟ್ ಮೂಲಕ ಬಿತ್ತರಿಸಲು ಹೊರಟಿದೆ.</p>.<p>ಅಕಾಡೆಮಿಯು ಈ ವಿನೂತನ ಪ್ರಯತ್ನಕ್ಕೆ ‘ವಾಕಿ– ಟಾಕಿ ವಿಥ್ ಖಾಕಿ’ ಎಂದು ಶೀರ್ಷಿಕೆ ನೀಡಿದೆ. ಹೊಸಬರಿಗೆ ಮಾರ್ಗದರ್ಶನ ಹಾಗೂ ಪ್ರೇರಣೆ ನೀಡುವುದರೊಂದಿಗೆ ಸಮಾಜಕ್ಕೆ ಪೊಲೀಸ್ ವ್ಯವಸ್ಥೆಯಲ್ಲಿರುವ ಸವಾಲುಗಳ ಬಗ್ಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ಆರಂಭಿಸಲಾಗಿದೆ.</p>.<p>ಈ ಪಾಡ್ಕಾಸ್ಟ್ಗಾಗಿ ಅಕಾಡೆಮಿ ಆವರಣದಲ್ಲಿ ಸ್ಟುಡಿಯೊ ವ್ಯವಸ್ಥೆ ಮಾಡಿಕೊಂಡಿದ್ದು, ಪ್ರಶಿಕ್ಷಣಾರ್ಥಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಪ್ರಥಮ ಸಂಚಿಕೆಯಲ್ಲಿ ಪಿಎಸ್ಐ ಪ್ರಶಿಕ್ಷಣಾರ್ಥಿ ಸಿದ್ದೇಶ್ ಅವರು ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವ ಕುರಿತ ಅನುಭವಗಳನ್ನು ಕೆ.ಎಂ.ನಂದಿನಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಈ ಪಾಡ್ಕಾಸ್ಟ್ ಕೆಪಿಎ ಮೈಸೂರು (KPA-MYSURU) ಯೂಟ್ಯೂಬ್ ಚಾನೆಲ್ನಲ್ಲಿ ಪ್ರಸಾರಗೊಂಡಿದೆ.</p>.<p>ಪೊಲೀಸ್ ಇಲಾಖೆಗೆ ಹೊಸತಾಗಿ ಸೇರಿರುವವರ ಅನುಭವ, ವಿಶೇಷ ಸೇವೆಯಿಂದ ಗುರುತಿಸಿರುವ ಅಧಿಕಾರಿಗಳು ಮಾತುಕತೆ, ನಿವೃತ್ತ ಅಧಿಕಾರಿಗಳ ಯಶೋಗಾಥೆಗಳು ಈ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ. ‘ಪೊಲೀಸ್ ಇಲಾಖೆಯ ಸೇವೆಗಳ ಬಗ್ಗೆ ಸಮಾಜದಲ್ಲಿ ಉತ್ತಮ ಸಂದೇಶ ಹಂಚಲು ಈ ಪ್ರಯತ್ನ ಸಹಾಯವಾಗಲಿದೆ’ ಎನ್ನುತ್ತಾರೆ ಪೊಲೀಸ್ ಅಕಾಡೆಮಿ ಅಧಿಕಾರಿಗಳು.</p>.<p>ಜರ್ಮನಿಯ ಬವೇರಿಯಾದ ಪೊಲೀಸರ ತಂಡವು ಅಕಾಡಮಿಗೆ ಆಗಮಿಸಲಿದ್ದು, ಅಲ್ಲಿನ ಪೊಲೀಸ್ ವ್ಯವಸ್ಥೆಯ ಕುರಿತು ಅಧಿಕಾರಿಗಳು ಪಾಡ್ಕಾಸ್ಟ್ ಮೂಲಕ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಮುಂದೆ ಪತ್ರಕರ್ತರು ಹಾಗೂ ಸಾಹಿತಿಗಳನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸುವ ಯೋಜನೆ ರೂಪಿಸಲಾಗಿದೆ.</p>.<p>‘ಅಧಿಕಾರಿಗಳ ಅನುಭವವು ಪ್ರಶಿಕ್ಷಣಾರ್ಥಿಗಳಿಗೆ ಉತ್ಸಾಹ ತುಂಬಲು ಸಹಾಯಕವಾಗಲಿದೆ. ಅತಿಥಿಗಳ ಆಯ್ಕೆಯ ಬಳಿಕ ನಿರೂಪಕರನ್ನು ನಿರ್ಧರಿಸಲಿದ್ದು, ಅಕಾಡೆಮಿ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಅವಕಾಶ ನೀಡಲಿದ್ದೇವೆ’ ಎಂದು ಅಕಾಡೆಮಿ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p><strong>- ‘ಜನರನ್ನು ಪರಿಣಾಮಕಾರಿಯಾಗಿ ತಲುಪಲಿದ್ದೇವೆ’</strong> </p><p>‘ಸಾಮಾಜಿಕ ಮಾಧ್ಯಮದ ಮೂಲಕ ಜನರನ್ನು ಪರಿಣಾಮಕಾರಿಯಾಗಿ ತಲುಪಲು ಪಾಡ್ಕಾಸ್ಟ್ ಆಯ್ಕೆ ಮಾಡಿದ್ದೇವೆ. ಇಲಾಖೆಗೆ ಸೇರಲು ಯುವ ಸಮೂಹವನ್ನು ಪ್ರೇರೇಪಿಸಲಿದ್ದೇವೆ. ಪ್ರಸ್ತುತ ಪೊಲೀಸರ ತಪ್ಪುಗಳನ್ನಷ್ಟೇ ಎತ್ತಿಹಿಡಿಯುವ ಕೆಲಸಗಳಾಗುತ್ತಿವೆ. ಈ ಕಾರ್ಯಕ್ರಮದ ಮೂಲಕ ಪೊಲೀಸರ ಸೇವೆಯ ಬಗ್ಗೆಯೂ ತಿಳಿಸಲಿದ್ದೇವೆ. ಮುಂದಿನ ಹಂತದಲ್ಲಿ ಪದವಿಪೂರ್ವ ಕಾಲೇಜುಗಳಿಗೆ ಭೇಟಿ ನೀಡಿ ಪೊಲೀಸ್ ವೃತ್ತಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತೇವೆ’ ಎಂದು ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>