ಮತ್ತೊಂದು ಗುಂಪು ಮಿಲಾದ್ ಬಾಗ್ನ ಸುತ್ತಮುತ್ತಲ ರಸ್ತೆಗಳಲ್ಲಿರುವ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲು ಆರಂಭಿಸಿತು. ಇದರಿಂದ ಕೆರಳಿದ ಪೊಲೀಸರು ಧ್ವನಿವರ್ಧಕದ ಮೂಲಕ ಬಂಧಿಸುವ ಎಚ್ಚರಿಕೆ ನೀಡಿದರು. ‘ಸ್ಥಳದಿಂದ ತೆರಳದೇ ಹೋದರೆ ಲಾಠಿಪ್ರಹಾರ ನಡೆಸದೇ ಬೇರೆ ವಿಧಿ ಇಲ್ಲ. ಪ್ರತಿಭಟನೆಗೆ ಅವಕಾಶ ನೀಡಿದ್ದಾಯಿತು, ಈಗ ಶಾಂತಿಭಂಗದಂತಹ ಕೃತ್ಯಕ್ಕೆ ಕೈ ಹಾಕಿದರೆ ಸುಮ್ಮನಿರುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದರು. ನಂತರ, ಗುಂಪು ಚದುರಿತು.