<p><strong>ಮೈಸೂರು</strong>: ‘ಡ್ರೋನ್, ಡಿಜಿಟಲ್ ತಂತ್ರಜ್ಞಾನವನ್ನು ಕೃಷಿಗೆ ನೀಡುವ ಬಗ್ಗೆಸರ್ಕಾರಗಳು ದೊಡ್ಡ ದೊಡ್ಡ ಮಾತನಾಡುತ್ತವೆ. ಡ್ರೋನ್ ನಿಮ್ಮ ತಲೆ ಮೇಲೆ ಇಟ್ಟುಕೊಳ್ಳಿ.ದಿನದ ಹವಾಮಾನ ಮುನ್ಸೂಚನೆಯನ್ನು ಮೊದಲು ನೀಡುವ ವ್ಯವಸ್ಥೆ ಮಾಡಿ’</p>.<p>ಮುಕ್ತ ಗಂಗೋತ್ರಿಯಲ್ಲಿ ಭಾನುವಾರ ‘ಕಿಸಾನ್ ಸ್ವರಾಜ್ ಸಮ್ಮೇಳನ’ದ ಸಮಾರೋಪದಲ್ಲಿ ‘ಆಶಾ’ ಒಕ್ಕೂಟ ಸಂಘಟಕ ಶ್ರೀಧರ್ ರಾಧಾಕೃಷ್ಣನ್ ಸರ್ಕಾರಗಳ ವಿರುದ್ಧ ಮೇಲಿನಂತೆ ವಾಗ್ದಾಳಿ ನಡೆಸಿದರು.</p>.<p>‘ದುಬಾರಿ ಡ್ರೋನ್, ಡಿಜಿಟಲ್ ತಂತ್ರಜ್ಞಾನಗಳು ಕೃಷಿಕರ ಸಮಸ್ಯೆ ಪರಿಹರಿಸಿದ ಉದಾಹರಣೆ ನೀಡಿ. ಸರ್ಕಾರದಬಣ್ಣದ ಮಾತುಗಳು ಕೃಷಿಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಉದ್ಯಮಿಗಳ ಆದಾಯ ದುಪ್ಪಟ್ಟು ಮಾಡುತ್ತಿವೆ’ ಎಂದರು.</p>.<p>‘ವಯನಾಡ್ನ 25 ಕಿ.ಮೀ ವ್ಯಾಪ್ತಿಯಲ್ಲಿ ಹವಾಮಾನ ಮುನ್ಸೂಚನೆ ವರದಿಯನ್ನು ನೀಡುವ ವ್ಯವಸ್ಥೆಯನ್ನು ಪಡೆದುಕೊಂಡಿದ್ದಾರೆ. ಜಾಗತಿಕ ಹವಾಮಾನ ವೈಪರೀತ್ಯ ವಾಸ್ತವವಾಗಿದೆ.ಮಾನವ ಪ್ರಾಣಿ– ಸಂಘರ್ಷಕ್ಕೂ ಕಾರಣವಾಗಿದೆ. ಪ್ರಕೃತಿಯು ವಿಕೋಪಗಳ ಮೂಲಕ ಕಪಾಳಕ್ಕೆ ಹೊಡೆಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ರಾಸಾಯನಿಕ ಬಳಸಿ ಮುಂದಿನ ಪೀಳಿಗೆಯ ಭವಿಷ್ಯವನ್ನೇ ಹಾಳು ಮಾಡಿದ್ದೇವೆ. ಜೀವ ವೈವಿಧ್ಯವೇ ನಾಶವಾಗುತ್ತಿದೆ. ಸಾವಯವ ಕೃಷಿಕರು ಭೂಮಿಯ ಆರೋಗ್ಯವನ್ನಷ್ಟೇ ಕಾಪಾಡುತ್ತಿಲ್ಲ, ಜನರ ಆರೋಗ್ಯ ಚಿಕಿತ್ಸೆಯನ್ನು ನೀಡುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು. </p>.<p>ಉಷಾ ಸೂಲಪಾಣಿ ಮಾತನಾಡಿ, ‘ಮುಂದುವರಿದ ರಾಜ್ಯವಾಗಿದ್ದ ಕೇರಳ ಪ್ರವಾಹ, ಭೂ ಕುಸಿತದಿಂದ ಹಿನ್ನಡೆ ಅನುಭವಿಸಿತು. ಆಂಧ್ರ ಪ್ರದೇಶದ ಪರಿಸರಾಧರಿತ ಕೃಷಿಯನ್ನು ಎಲ್ಲ ರಾಜ್ಯಗಳು ಅನುಸರಿಸಬೇಕು. ಹಿಮಾಚಲ ಪ್ರದೇಶ ಸಹಜ ಕೃಷಿ, ಛತ್ತೀಸ್ಗಡದ ಜಾನುವಾರು ಕೇಂದ್ರಿತ ಕೃಷಿ ಮಾದರಿಗಳಾಗಬೇಕು’ ಎಂದರು.</p>.<p>ಚೆನ್ನೈನ ಸಾವಯವ ಕೃಷಿ ಸಂಘಟಕ ಕಾರ್ತಿಕ್ ಗುಣಶೇಖರ್ ಮಾತನಾಡಿ, ‘ಆಹಾರ, ನೀರು, ಉಸಿರು ಎಲ್ಲವೂ ವಿಷವಾಗಿದೆ.ನಮ್ಮ ತಂದೆಯವರು ಅವರ ಯೌವನದಲ್ಲಿ 3 ಪ್ರಾಕೃತಿಕ ವಿಕೋಪ ನೋಡಿದ್ದರು. ನನ್ನ 28 ವರ್ಷದ ಜೀವನದಲ್ಲಿ 15 ವಿಕೋಪ ನೋಡಿದ್ದೇನೆ. ಜಾಗತಿಕ ತಾಪಾಮಾನ ಏರಿಕೆಯ ಬಿಸಿ ಕಣ್ಣ ಮುಂದೆಯೇ ಇದೆ’ ಎಂದರು. </p>.<p>ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ, ಕೆಎಸ್ಒಯು ಕುಲಸಚಿವ ಖಾದರ್ ಪಾಷಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಡ್ರೋನ್, ಡಿಜಿಟಲ್ ತಂತ್ರಜ್ಞಾನವನ್ನು ಕೃಷಿಗೆ ನೀಡುವ ಬಗ್ಗೆಸರ್ಕಾರಗಳು ದೊಡ್ಡ ದೊಡ್ಡ ಮಾತನಾಡುತ್ತವೆ. ಡ್ರೋನ್ ನಿಮ್ಮ ತಲೆ ಮೇಲೆ ಇಟ್ಟುಕೊಳ್ಳಿ.ದಿನದ ಹವಾಮಾನ ಮುನ್ಸೂಚನೆಯನ್ನು ಮೊದಲು ನೀಡುವ ವ್ಯವಸ್ಥೆ ಮಾಡಿ’</p>.<p>ಮುಕ್ತ ಗಂಗೋತ್ರಿಯಲ್ಲಿ ಭಾನುವಾರ ‘ಕಿಸಾನ್ ಸ್ವರಾಜ್ ಸಮ್ಮೇಳನ’ದ ಸಮಾರೋಪದಲ್ಲಿ ‘ಆಶಾ’ ಒಕ್ಕೂಟ ಸಂಘಟಕ ಶ್ರೀಧರ್ ರಾಧಾಕೃಷ್ಣನ್ ಸರ್ಕಾರಗಳ ವಿರುದ್ಧ ಮೇಲಿನಂತೆ ವಾಗ್ದಾಳಿ ನಡೆಸಿದರು.</p>.<p>‘ದುಬಾರಿ ಡ್ರೋನ್, ಡಿಜಿಟಲ್ ತಂತ್ರಜ್ಞಾನಗಳು ಕೃಷಿಕರ ಸಮಸ್ಯೆ ಪರಿಹರಿಸಿದ ಉದಾಹರಣೆ ನೀಡಿ. ಸರ್ಕಾರದಬಣ್ಣದ ಮಾತುಗಳು ಕೃಷಿಕರ ಜೇಬಿಗೆ ಕತ್ತರಿ ಹಾಕುತ್ತಿವೆ. ಉದ್ಯಮಿಗಳ ಆದಾಯ ದುಪ್ಪಟ್ಟು ಮಾಡುತ್ತಿವೆ’ ಎಂದರು.</p>.<p>‘ವಯನಾಡ್ನ 25 ಕಿ.ಮೀ ವ್ಯಾಪ್ತಿಯಲ್ಲಿ ಹವಾಮಾನ ಮುನ್ಸೂಚನೆ ವರದಿಯನ್ನು ನೀಡುವ ವ್ಯವಸ್ಥೆಯನ್ನು ಪಡೆದುಕೊಂಡಿದ್ದಾರೆ. ಜಾಗತಿಕ ಹವಾಮಾನ ವೈಪರೀತ್ಯ ವಾಸ್ತವವಾಗಿದೆ.ಮಾನವ ಪ್ರಾಣಿ– ಸಂಘರ್ಷಕ್ಕೂ ಕಾರಣವಾಗಿದೆ. ಪ್ರಕೃತಿಯು ವಿಕೋಪಗಳ ಮೂಲಕ ಕಪಾಳಕ್ಕೆ ಹೊಡೆಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.</p>.<p>‘ರಾಸಾಯನಿಕ ಬಳಸಿ ಮುಂದಿನ ಪೀಳಿಗೆಯ ಭವಿಷ್ಯವನ್ನೇ ಹಾಳು ಮಾಡಿದ್ದೇವೆ. ಜೀವ ವೈವಿಧ್ಯವೇ ನಾಶವಾಗುತ್ತಿದೆ. ಸಾವಯವ ಕೃಷಿಕರು ಭೂಮಿಯ ಆರೋಗ್ಯವನ್ನಷ್ಟೇ ಕಾಪಾಡುತ್ತಿಲ್ಲ, ಜನರ ಆರೋಗ್ಯ ಚಿಕಿತ್ಸೆಯನ್ನು ನೀಡುತ್ತಿದ್ದಾರೆ’ ಎಂದು ಪ್ರತಿಪಾದಿಸಿದರು. </p>.<p>ಉಷಾ ಸೂಲಪಾಣಿ ಮಾತನಾಡಿ, ‘ಮುಂದುವರಿದ ರಾಜ್ಯವಾಗಿದ್ದ ಕೇರಳ ಪ್ರವಾಹ, ಭೂ ಕುಸಿತದಿಂದ ಹಿನ್ನಡೆ ಅನುಭವಿಸಿತು. ಆಂಧ್ರ ಪ್ರದೇಶದ ಪರಿಸರಾಧರಿತ ಕೃಷಿಯನ್ನು ಎಲ್ಲ ರಾಜ್ಯಗಳು ಅನುಸರಿಸಬೇಕು. ಹಿಮಾಚಲ ಪ್ರದೇಶ ಸಹಜ ಕೃಷಿ, ಛತ್ತೀಸ್ಗಡದ ಜಾನುವಾರು ಕೇಂದ್ರಿತ ಕೃಷಿ ಮಾದರಿಗಳಾಗಬೇಕು’ ಎಂದರು.</p>.<p>ಚೆನ್ನೈನ ಸಾವಯವ ಕೃಷಿ ಸಂಘಟಕ ಕಾರ್ತಿಕ್ ಗುಣಶೇಖರ್ ಮಾತನಾಡಿ, ‘ಆಹಾರ, ನೀರು, ಉಸಿರು ಎಲ್ಲವೂ ವಿಷವಾಗಿದೆ.ನಮ್ಮ ತಂದೆಯವರು ಅವರ ಯೌವನದಲ್ಲಿ 3 ಪ್ರಾಕೃತಿಕ ವಿಕೋಪ ನೋಡಿದ್ದರು. ನನ್ನ 28 ವರ್ಷದ ಜೀವನದಲ್ಲಿ 15 ವಿಕೋಪ ನೋಡಿದ್ದೇನೆ. ಜಾಗತಿಕ ತಾಪಾಮಾನ ಏರಿಕೆಯ ಬಿಸಿ ಕಣ್ಣ ಮುಂದೆಯೇ ಇದೆ’ ಎಂದರು. </p>.<p>ರಾಷ್ಟ್ರೀಯ ಸಂಚಾಲಕ ಕಪಿಲ್ ಶಾ, ಕೆಎಸ್ಒಯು ಕುಲಸಚಿವ ಖಾದರ್ ಪಾಷಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>