<p><strong>ಮೈಸೂರು: </strong>ನಗರ ಮತ್ತು ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿದಿದ್ದು, ತಂಪನೆರೆದಿದೆ. </p>.<p>ನಗರದಲ್ಲಿ ಸಂಜೆ ಆರಂಭವಾದ ಜಿಟಿಜಿಟಿ ಮಳೆ ವಾತಾವರಣವನ್ನು ತಂಪುಗೊಳಿಸಿತು. ಬೀಸುತ್ತಿದ್ದ ಕುಳಿರ್ಗಾಳಿ ಶೀತಮಯ ವಾತಾವರಣ ಸೃಷ್ಟಿಸಿತು.</p>.<p>ಆಟೊನಿಲ್ದಾಣ ಹಾಗೂ ಇತರೆಡೆ ಆಚರಿಸಲಾಗುತ್ತಿದ್ದ ಆಷಾಢ ಶುಕ್ರವಾರದ ಪೂಜೆಗಳಿಗೆ ಹಲವೆಡೆ ತೊಂದರೆಯಾಯಿತು. ಮಳೆಯಲ್ಲೇ ಕೆಲವೆಡೆ ಪೂಜೆ ಮುಗಿಸಿ, ಪ್ರಸಾದ ವಿತರಿಸಲಾಯಿತು.</p>.<p>ಮೂಲೆ ಸೇರಿದ್ದ ಕೊಡೆಗಳಿಗೆ ಮತ್ತೆ ಜೀವಕಳೆ ಬಂದಿತು. ಕೊಡೆ ಹಿಡಿದು ಹಲವು ಮಂದಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಚಿಣ್ಣರು ಮಳೆಯಲ್ಲಿ ನೆನೆಯುತ್ತ ಟ್ಯೂಷನ್ನಿಂದ ಮನೆಯತ್ತ ಹೆಜ್ಜೆ ಹಾಕಿದರು.</p>.<p>ಎಚ್.ಡಿ.ಕೋಟೆ ಹಾಗೂ ಕೆ.ಆರ್.ನಗರದಲ್ಲಿ ಅರ್ಧ ಗಂಟೆ ಸಾಧಾರಣ ಮಳೆಯಾದರೆ, ಪಿರಿಯಾಪಟ್ಟಣದಲ್ಲಿ 45 ನಿಮಿಷ ಮಳೆ ಸುರಿದಿದೆ. ಹುಣಸೂರು ಮತ್ತು ತಿ.ನರಸೀಪುರದಲ್ಲಿ ತುಂತುರು ಮಳೆಯಾಗಿದೆ.</p>.<p>ಮಳೆಯಿಂದ ಬಿತ್ತನೆಗೇನೂ ಅನುಕೂಲವಾಗಿಲ್ಲ. ಇನ್ನಷ್ಟು ಮಳೆ ಸುರಿದರೆ ಮಾತ್ರ ಮುಂಗಾರು ಬಿತ್ತನೆ ಮಾಡಬಹುದು. ಈಗಾಗಲೇ ಬಿತ್ತನೆಯಾಗಿರುವ ಕಡೆ ಮೊಳೆಕೆ ಹೊಡೆದಿರುವ ಪೈರುಗಳಿಗೆ ಜೀವ ತರಿಸಿದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಗರ ಮತ್ತು ಜಿಲ್ಲೆಯಲ್ಲಿ ಶುಕ್ರವಾರ ಸಾಧಾರಣ ಮಳೆ ಸುರಿದಿದ್ದು, ತಂಪನೆರೆದಿದೆ. </p>.<p>ನಗರದಲ್ಲಿ ಸಂಜೆ ಆರಂಭವಾದ ಜಿಟಿಜಿಟಿ ಮಳೆ ವಾತಾವರಣವನ್ನು ತಂಪುಗೊಳಿಸಿತು. ಬೀಸುತ್ತಿದ್ದ ಕುಳಿರ್ಗಾಳಿ ಶೀತಮಯ ವಾತಾವರಣ ಸೃಷ್ಟಿಸಿತು.</p>.<p>ಆಟೊನಿಲ್ದಾಣ ಹಾಗೂ ಇತರೆಡೆ ಆಚರಿಸಲಾಗುತ್ತಿದ್ದ ಆಷಾಢ ಶುಕ್ರವಾರದ ಪೂಜೆಗಳಿಗೆ ಹಲವೆಡೆ ತೊಂದರೆಯಾಯಿತು. ಮಳೆಯಲ್ಲೇ ಕೆಲವೆಡೆ ಪೂಜೆ ಮುಗಿಸಿ, ಪ್ರಸಾದ ವಿತರಿಸಲಾಯಿತು.</p>.<p>ಮೂಲೆ ಸೇರಿದ್ದ ಕೊಡೆಗಳಿಗೆ ಮತ್ತೆ ಜೀವಕಳೆ ಬಂದಿತು. ಕೊಡೆ ಹಿಡಿದು ಹಲವು ಮಂದಿ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ದೃಶ್ಯಗಳು ಕಂಡು ಬಂತು. ಚಿಣ್ಣರು ಮಳೆಯಲ್ಲಿ ನೆನೆಯುತ್ತ ಟ್ಯೂಷನ್ನಿಂದ ಮನೆಯತ್ತ ಹೆಜ್ಜೆ ಹಾಕಿದರು.</p>.<p>ಎಚ್.ಡಿ.ಕೋಟೆ ಹಾಗೂ ಕೆ.ಆರ್.ನಗರದಲ್ಲಿ ಅರ್ಧ ಗಂಟೆ ಸಾಧಾರಣ ಮಳೆಯಾದರೆ, ಪಿರಿಯಾಪಟ್ಟಣದಲ್ಲಿ 45 ನಿಮಿಷ ಮಳೆ ಸುರಿದಿದೆ. ಹುಣಸೂರು ಮತ್ತು ತಿ.ನರಸೀಪುರದಲ್ಲಿ ತುಂತುರು ಮಳೆಯಾಗಿದೆ.</p>.<p>ಮಳೆಯಿಂದ ಬಿತ್ತನೆಗೇನೂ ಅನುಕೂಲವಾಗಿಲ್ಲ. ಇನ್ನಷ್ಟು ಮಳೆ ಸುರಿದರೆ ಮಾತ್ರ ಮುಂಗಾರು ಬಿತ್ತನೆ ಮಾಡಬಹುದು. ಈಗಾಗಲೇ ಬಿತ್ತನೆಯಾಗಿರುವ ಕಡೆ ಮೊಳೆಕೆ ಹೊಡೆದಿರುವ ಪೈರುಗಳಿಗೆ ಜೀವ ತರಿಸಿದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>