<p><strong>ಮೈಸೂರು:</strong> ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಮತ್ತು 12ನೇ ಆರೋಪಿ ಲಕ್ಷ್ಮಣ್ ಅವರನ್ನು ಪೊಲೀಸರು ನಗರದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಗೆ ಮಂಗಳವಾರ ಕರೆತಂದು ಸ್ಥಳ ಮಹಜರು ನಡೆಸಿದರು.</p>.<p>ದರ್ಶನ್ ತಮ್ಮ ಹೊಸ ಚಲನಚಿತ್ರ ‘ಡೆವಿಲ್’ ಚಿತ್ರೀಕರಣಕ್ಕಾಗಿ ಸ್ನೇಹಿತರೊಂದಿಗೆ ಮೈಸೂರಿಗೆ ಆಗಮಿಸಿದ್ದರು. ಜೂನ್ 11ರಂದು ಬೆಳಿಗ್ಗೆ ಜಿಮ್ನಲ್ಲಿ ಕಸರತ್ತು ಮುಗಿಸಿ, ತಾವು ವಾಸ್ತವ್ಯವಿದ್ದ ಹೋಟೆಲ್ಗೆ ಬಂದಾಗ ಬೆಂಗಳೂರು ಪೊಲೀಸರು ದರ್ಶನ್ ಹಾಗೂ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದರು. </p><p>ರೇಣುಕಸ್ವಾಮಿ ಕೊಲೆ ಘಟನೆಯ ಬಳಿಕ ದರ್ಶನ್ ಹಾಗೂ ಸ್ನೇಹಿತರು ಮೈಸೂರಿನಲ್ಲಿ ಬಂದು ವಾಸ್ತವ್ಯ ಹೂಡಿದ್ದು, ಪ್ರಕರಣದಿಂದ ಬಚಾವಾಗಲು ₹30 ಲಕ್ಷ ನೀಡಲು ಇಲ್ಲಿಯೇ ಮಾತುಕತೆ ನಡೆದಿತ್ತು ಎನ್ನಲಾಗಿದೆ. </p><p>ಪೊಲೀಸರು ಮಹಜರು ಸಮಯದಲ್ಲಿ ಅಂದಿನ ಚಟುವಟಿಕೆ ಬಗ್ಗೆ ಆರೋಪಿಗಳಿಂದ ಮಾಹಿತಿ ಪಡೆದರು. ದರ್ಶನ್ರನ್ನು ಸಹ ಮಹಜರು ಸ್ಥಳಕ್ಕೆ ಕರೆತರಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು ಎನ್ನುವ ಕಾರಣಕ್ಕೆ ಅವರನ್ನು ಕರೆತರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.ರೇಣುಕಸ್ವಾಮಿ ಹತ್ಯೆ| ಕ್ಷಮೆ ಕೇಳಿಸಿ ವಿಡಿಯೊ ಚಿತ್ರೀಕರಣ: ಮೊಬೈಲ್ಗಾಗಿ ಹುಡುಕಾಟ.ರೇಣುಕಸ್ವಾಮಿ ಹತ್ಯೆ ಪ್ರಕರಣ | ನಟ ಚಿಕ್ಕಣ್ಣ ವಿಚಾರಣೆ: ಹೇಳಿಕೆ ದಾಖಲು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 11ನೇ ಆರೋಪಿ ನಾಗರಾಜ್ ಮತ್ತು 12ನೇ ಆರೋಪಿ ಲಕ್ಷ್ಮಣ್ ಅವರನ್ನು ಪೊಲೀಸರು ನಗರದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಗೆ ಮಂಗಳವಾರ ಕರೆತಂದು ಸ್ಥಳ ಮಹಜರು ನಡೆಸಿದರು.</p>.<p>ದರ್ಶನ್ ತಮ್ಮ ಹೊಸ ಚಲನಚಿತ್ರ ‘ಡೆವಿಲ್’ ಚಿತ್ರೀಕರಣಕ್ಕಾಗಿ ಸ್ನೇಹಿತರೊಂದಿಗೆ ಮೈಸೂರಿಗೆ ಆಗಮಿಸಿದ್ದರು. ಜೂನ್ 11ರಂದು ಬೆಳಿಗ್ಗೆ ಜಿಮ್ನಲ್ಲಿ ಕಸರತ್ತು ಮುಗಿಸಿ, ತಾವು ವಾಸ್ತವ್ಯವಿದ್ದ ಹೋಟೆಲ್ಗೆ ಬಂದಾಗ ಬೆಂಗಳೂರು ಪೊಲೀಸರು ದರ್ಶನ್ ಹಾಗೂ ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದರು. </p><p>ರೇಣುಕಸ್ವಾಮಿ ಕೊಲೆ ಘಟನೆಯ ಬಳಿಕ ದರ್ಶನ್ ಹಾಗೂ ಸ್ನೇಹಿತರು ಮೈಸೂರಿನಲ್ಲಿ ಬಂದು ವಾಸ್ತವ್ಯ ಹೂಡಿದ್ದು, ಪ್ರಕರಣದಿಂದ ಬಚಾವಾಗಲು ₹30 ಲಕ್ಷ ನೀಡಲು ಇಲ್ಲಿಯೇ ಮಾತುಕತೆ ನಡೆದಿತ್ತು ಎನ್ನಲಾಗಿದೆ. </p><p>ಪೊಲೀಸರು ಮಹಜರು ಸಮಯದಲ್ಲಿ ಅಂದಿನ ಚಟುವಟಿಕೆ ಬಗ್ಗೆ ಆರೋಪಿಗಳಿಂದ ಮಾಹಿತಿ ಪಡೆದರು. ದರ್ಶನ್ರನ್ನು ಸಹ ಮಹಜರು ಸ್ಥಳಕ್ಕೆ ಕರೆತರಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು ಎನ್ನುವ ಕಾರಣಕ್ಕೆ ಅವರನ್ನು ಕರೆತರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.ರೇಣುಕಸ್ವಾಮಿ ಹತ್ಯೆ| ಕ್ಷಮೆ ಕೇಳಿಸಿ ವಿಡಿಯೊ ಚಿತ್ರೀಕರಣ: ಮೊಬೈಲ್ಗಾಗಿ ಹುಡುಕಾಟ.ರೇಣುಕಸ್ವಾಮಿ ಹತ್ಯೆ ಪ್ರಕರಣ | ನಟ ಚಿಕ್ಕಣ್ಣ ವಿಚಾರಣೆ: ಹೇಳಿಕೆ ದಾಖಲು .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>