ಬುಧವಾರ, 23 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸೂರು | 3 ವರ್ಷಗಳಿಂದ ನಡೆಯದ ರಸ್ತೆಗಳ ದುರಸ್ತಿ ಕಾಮಗಾರಿ; ವಾಹನ ಸವಾರರ ಪರದಾಟ

Published : 21 ಜೂನ್ 2024, 8:03 IST
Last Updated : 21 ಜೂನ್ 2024, 8:03 IST
ಫಾಲೋ ಮಾಡಿ
Comments
ಹುಣಸೂರು ನಗರ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿನ ರಸ್ತೆಗಳ ಗುಂಡಿಮಯವಾಗಿರುವುದು
ಹುಣಸೂರು ನಗರ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿನ ರಸ್ತೆಗಳ ಗುಂಡಿಮಯವಾಗಿರುವುದು
ಕಾಮಗಾರಿ ತಡೆಗೆ ಸೂಚನೆ
‘ನಗರೋತ್ಥಾನ ಯೋಜನೆಯಲ್ಲಿ ಪ್ರತಿ ವಾರ್ಡ್ ರಸ್ತೆ ದುರಸ್ತಿ ಕಾಮಗಾರಿಗೆ ₹ 30 ಲಕ್ಷದಂತೆ ಒಟ್ಟು ₹ 10 ಕೋಟಿ ಅನುದಾನ ಮೀಸಲಿಡಲಾಗಿದೆ. ದುರಸ್ತಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದು ಈ ಹಿಂದಿನ ಸಾಲಿನ ಶಾಸಕರು ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ ಸರ್ಕಾರ ಟೆಂಡರ್ ಪೂರ್ಣವಾಗಿರುವ ಕಾಮಗಾರಿ ತಡೆಗೆ ಸೂಚಿಸಿದೆ’ ಎಂದು ನಗರಸಭೆ ಎಇಇ ಶರ್ಮಿಳಾ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
ಐದು ವರ್ಷದಲ್ಲಿ ಐವರು ಅಧ್ಯಕ್ಷರು
‘ನಗರಸಭೆ ಕಳೆದ ಐದು ವರ್ಷದಲ್ಲಿ ಐವರು ಅಧ್ಯಕ್ಷರನ್ನು ಕಂಡಿದ್ದರೂ ನಗರ ಸಮಸ್ಯೆ ಬಗೆಹರಿಸುವ ದಿಕ್ಕಿನಲ್ಲಿ ಯೋಜನೆ ರೂಪಗೊಂಡಿಲ್ಲ. ಸರ್ಕಾರದ ಅನುದಾನ ವಾಮ ಮಾರ್ಗದಲ್ಲಿ ಕಬಳಿಸುವ ಹುನ್ನಾರಕ್ಕೆ ಆದ್ಯತೆ ನೀಡಲಾಗಿದ್ದು ಅವ್ಯವಸ್ಥೆಯ ಕೂಪವಾಗಿದೆ’ ಎಂದು ನಗರಸಭೆ ಸದಸ್ಯ ರಮೇಶ್ ದೊಡ್ಡಹೆಜ್ಜೂರು ಆರೋಪಿಸಿದರು.
ಅನುದಾನ ಬಳಕೆಯಾಗಲಿ
‘ನಗರಸಭೆ ಸಂಗ್ರಹಿಸುವ ವಾರ್ಷಿಕ ತೆರಿಗೆ ಹಣದಲ್ಲಿ ನಿಯಮಾನುಸಾರ ರಸ್ತೆ ದುರಸ್ತಿಗೆ ಇಂತಿಷ್ಟು ಹಣ ಮೀಸಲಿಡುವ ಅವಕಾಶವಿದೆ. ನಗರಸಭೆ ಆಡಳಿತ ವರ್ಗ ಮತ್ತು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಅನುದಾನ ಬಳಸಿ ರಸ್ತೆ ದುರಸ್ತಿಗೊಳಿಸಿ ನಾಗರಿಕರ ಹಿತ ಕಾಯಬೇಕು’ ಎಂದು ನಗರ ನಿವಾಸಿ ಶ್ರೀಕಾಂತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT