<p><strong>ಹುಣಸೂರು</strong>: ಬೇಸಿಗೆ ರಜಾ ಮುಗಿಸಿದ ಚಿಣ್ಣರು ಶುಕ್ರವಾರ ಶಾಲೆಗೆ ಬಣ್ಣ ಬಣ್ಣದ ಬಟ್ಟೆ ತೊಟ್ಟು ಪೋಷಕರೊಂದಿಗೆ ಆಗಮಿಸಿ ಸಂಭ್ರಮಿಸಿದರು.</p>.<p>ಪೋಷಕರೊಂದಿಗೆ ದೇವಗಳ್ಳಿ ಸರ್ಕಾರಿ ಶಾಲೆಗೆ ಆಗಮಿಸಿದ ಮಕ್ಕಳನ್ನು ಬರಮಾಡಿಕೊಳ್ಳಲು ಶಾಲಾ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲಾ ಅಂಗಳವನ್ನು ಬಲೂನ್, ರಂಗೋಲಿ ಹಾಗೂ ಹಸಿರು ತೋರಣದಿಂದ ಅಲಂಕರಿಸಿದ್ದರು.</p>.<p>ಗ್ರಾಮದ ಹಿರಿಯ ವೀರರಾಜೇ ಅರಸು, ನಾಗರಾಜೇ ಅರಸು ಅನಿಲ್ ಗೌಡರು ಪಂಚಾಯಿತಿ ಸದಸ್ಯ ಮೀನಾಕ್ಷಮ್ಮಣ್ಣಿ ಮೊದಲ ದಿನ ಶಾಲೆಗೆ ಬಂದ ಚಿಣ್ಣರಿಗೆ ಸಿಹಿ ವಿತರಿಸಿದರು. ಏಕಲ್ ಸಂಸ್ಥೆಯ ಕಿರಣ್ ಗೋವಿತ್ ಮಕ್ಕಳಿಗೆ ಸಿಹಿ ಜೊತೆಗೆ ನೋಟ್ ಪುಸ್ತಕ ವಿತರಿಸಿ ಬರ ಮಾಡಿಕೊಂಡರು.</p>.<p>ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಹಣೆಗೆ ತಿಲಕವಿಟ್ಟು ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು. ಶಾಲೆಯಲ್ಲಿ ಸೆಲ್ಫಿ ಕೇಂದ್ರ ಸ್ಥಾಪಿಸಿ ಮಕ್ಕಳು ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರು. ತರಗತಿಗೆ ತೆರಳುವ ಮುನ್ನ ಸರಸ್ವತಿ ಗೀತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಬೇಸಿಗೆ ರಜಾ ಮುಗಿಸಿದ ಚಿಣ್ಣರು ಶುಕ್ರವಾರ ಶಾಲೆಗೆ ಬಣ್ಣ ಬಣ್ಣದ ಬಟ್ಟೆ ತೊಟ್ಟು ಪೋಷಕರೊಂದಿಗೆ ಆಗಮಿಸಿ ಸಂಭ್ರಮಿಸಿದರು.</p>.<p>ಪೋಷಕರೊಂದಿಗೆ ದೇವಗಳ್ಳಿ ಸರ್ಕಾರಿ ಶಾಲೆಗೆ ಆಗಮಿಸಿದ ಮಕ್ಕಳನ್ನು ಬರಮಾಡಿಕೊಳ್ಳಲು ಶಾಲಾ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಶಾಲಾ ಅಂಗಳವನ್ನು ಬಲೂನ್, ರಂಗೋಲಿ ಹಾಗೂ ಹಸಿರು ತೋರಣದಿಂದ ಅಲಂಕರಿಸಿದ್ದರು.</p>.<p>ಗ್ರಾಮದ ಹಿರಿಯ ವೀರರಾಜೇ ಅರಸು, ನಾಗರಾಜೇ ಅರಸು ಅನಿಲ್ ಗೌಡರು ಪಂಚಾಯಿತಿ ಸದಸ್ಯ ಮೀನಾಕ್ಷಮ್ಮಣ್ಣಿ ಮೊದಲ ದಿನ ಶಾಲೆಗೆ ಬಂದ ಚಿಣ್ಣರಿಗೆ ಸಿಹಿ ವಿತರಿಸಿದರು. ಏಕಲ್ ಸಂಸ್ಥೆಯ ಕಿರಣ್ ಗೋವಿತ್ ಮಕ್ಕಳಿಗೆ ಸಿಹಿ ಜೊತೆಗೆ ನೋಟ್ ಪುಸ್ತಕ ವಿತರಿಸಿ ಬರ ಮಾಡಿಕೊಂಡರು.</p>.<p>ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಹಣೆಗೆ ತಿಲಕವಿಟ್ಟು ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು. ಶಾಲೆಯಲ್ಲಿ ಸೆಲ್ಫಿ ಕೇಂದ್ರ ಸ್ಥಾಪಿಸಿ ಮಕ್ಕಳು ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರು. ತರಗತಿಗೆ ತೆರಳುವ ಮುನ್ನ ಸರಸ್ವತಿ ಗೀತೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>