ಸಿದ್ದರಾಮಯ್ಯನವರ ಜನ್ಮದಿನದ ಪ್ರಯುಕ್ತ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯು ಗುರುವಾರ ಇಲ್ಲಿ ಏರ್ಪಡಿಸಿದ್ದ ‘ಭಾಗ್ಯವಿಧಾತ ಸಿದ್ದರಾಮಯ್ಯ’ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ‘ಕರ್ನಾಟಕದಲ್ಲಿ ಬಂದ ಬಹುತೇಕ ರಾಜಕಾರಣಿಗಳು ಹಂಚಿಕೆದಾರರ ಕೆಲಸ ಮಾಡಿದರೇ ಹೊರತು, ಮಾದರಿ ರಾಜಕಾರಣಿಗಳಾಗಲಿಲ್ಲ. ಹೆಂಡ ಕೊಡಿ ಎಂದು ಕೇಳಿದವರಿಗೆಲ್ಲ ಹೆಂಡ ಕುಡಿಸುವವರು ನಿಜವಾದ ನಾಯಕರೇ’ ಎಂದು ಪ್ರಶ್ನಿಸಿದರು.