‘ಭೂ ಸೇನೆಯಲ್ಲಿ 13 ವರ್ಷದಿಂದ ಸಿಪಾಯಿಯಾಗಿದ್ದ ಅವರು, ಕೋಲ್ಕತ್ತದಲ್ಲಿ ಸೇನೆಯಿಂದ ಒಂದು ತಿಂಗಳು ರಜೆ ಪಡೆದು ಅ.1 ರಂದು ಬಂದಿದ್ದರು. ಮಂಗಳವಾರ ರಾತ್ರಿ 6 ವರ್ಷದ ಮಗಳು ದೀಪ್ತಿ, ಪತ್ನಿ ವಿನೋದ ಅವರೊಂದಿಗೆ ಊಟ ಮಾಡಿ, ಹಿರಿಯರೊಂದಿಗೆ ಮಾತನಾಡಿ ನಿದ್ರೆಗೆ ಜಾರಿದ್ದರು. ಬೆಳಗಿನ ಜಾವ ಕುಡಿಯಲು ನೀರು ಬೇಕು ಎಂದು ಪತ್ನಿಯನ್ನು ಕೇಳಿದ್ದರು. ಬಳಿಕ ಮಲಗಿದ್ದಲ್ಲೇ ಮೃತಪಟ್ಟರು’ ಎಂದು ತಂದೆ ಕೃಷ್ಣೇಗೌಡ ತಿಳಿಸಿದರು. ಗ್ರಾಮದ ಸರ್ಕಾರಿ ಶಾಲೆ– ಕಾಲೇಜಿನಲ್ಲಿ ಓದಿದ್ದ ಅವರು, ಪಿಯುಸಿ ಬಳಿಕ ಸೇನೆ ಸೇರಿದ್ದರು. ಅ. 31 ರಂದು ಸೇನೆಗೆ ಹಿಂದಿರುಗಬೇಕಿತ್ತು.