<p><strong>ಮೈಸೂರು: </strong>2020-21ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಲ್ಲಿ ಸಹಾಯಧನ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.</p>.<p>ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶ ವಿಸ್ತರಣೆ ಕಾಂಪೊನೇಟ್ ಅಂಗಾಂಶ ಕೃಷಿ ಬಾಳೆಗೆ ₹ 12,200 (ಪ್ರತಿ ಎಕರೆಗೆ), ಕಂದು ಬಾಳೆ ಬೆಳೆಗೆ ₹ 7,800 (ಪ್ರತಿ ಪ್ಯಾಕ್), ಹೌಸ್ ಘಟಕಕ್ಕೆ ₹ 2 ಲಕ್ಷ ಶೇ 50ರ ಸಹಾಯಧನ, ಪಾಲಿಹೌಸ್ ಘಟಕಕ್ಕೆ ಶೇ 50ರ ಸಹಾಯಧನ, ಯಾಂತ್ರೀಕರಣ ಘಟಕದಡಿ ಮಿನಿ ಟ್ರಾಕ್ಟರ್-20 ಎಚ್ಪಿ ಸಾಮಾನ್ಯ ರೈತರಿಗೆ ₹ 75,000, ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ₹ 1 ಲಕ್ಷ ಸಹಾಯಧನ ನೀಡಲಾಗುವುದು.</p>.<p>ಸಮಗ್ರ ಪೋಷಕಾಂಶ/ಸಮಗ್ರ ಪೀಡೆ ನಿರ್ವಹಣೆಯಡಿ ಹೆಕ್ಟೇರ್ಗೆ ₹ 1,200, ಪ್ಲಾಸ್ಟಿಕ್ ಮಲ್ಟಿಂಗ್ಗೆ ₹ 6,400 (ಪ್ರತಿ ಎಕರೆಗೆ) ಸಹಾಯಧನ ನೀಡಲಾಗುವುದು.</p>.<p>ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತೆಂಗು, ಅಂಗಾಂಶ ಕೃಷಿ ಬಾಳೆ, ಮಾವು, ನಿಂಬೆ, ನುಗ್ಗೆ, ಸೀಬೆ, ಸಪೋಟ, ಪಪ್ಪಾಯ ಪ್ರದೇಶ ವಿಸ್ತರಣೆ ಮಾಡುವ ಸಣ್ಣ-ಅತಿಸಣ್ಣ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಕೂಲಿ ವೆಚ್ಚ ಹಾಗೂ ಸಾಮಗ್ರಿ ವೆಚ್ಚವನ್ನು ಬೆಳೆವಾರು ದರಪಟ್ಟಿಯ ಪ್ರಕಾರ ಸಹಾಯಧನ ನೀಡಲಾಗುವುದು.</p>.<p>ತೆಂಗು ಮತ್ತು ಮಾವು ಬೆಳೆಯ ಪುನಶ್ಚೇತನದಡಿ ಇಚ್ಚೆಯುಳ್ಳ ರೈತರು ಎಂನರೇಗಾ ಮಾರ್ಗಸೂಚಿಯನ್ವಯ ಅಗತ್ಯ ದಾಖಲಾತಿಗಳೊಂದಿಗೆ ಜುಲೈ 15ರೊಳಗೆ ಅರ್ಜಿ ಸಲ್ಲಿಸುವುದು.</p>.<p>ಮಾಹಿತಿಗೆ 0821-2430450 ಸಂಪರ್ಕಿಸಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>2020-21ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಕಾರ್ಯಕ್ರಮಗಳಲ್ಲಿ ಸಹಾಯಧನ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.</p>.<p>ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ರದೇಶ ವಿಸ್ತರಣೆ ಕಾಂಪೊನೇಟ್ ಅಂಗಾಂಶ ಕೃಷಿ ಬಾಳೆಗೆ ₹ 12,200 (ಪ್ರತಿ ಎಕರೆಗೆ), ಕಂದು ಬಾಳೆ ಬೆಳೆಗೆ ₹ 7,800 (ಪ್ರತಿ ಪ್ಯಾಕ್), ಹೌಸ್ ಘಟಕಕ್ಕೆ ₹ 2 ಲಕ್ಷ ಶೇ 50ರ ಸಹಾಯಧನ, ಪಾಲಿಹೌಸ್ ಘಟಕಕ್ಕೆ ಶೇ 50ರ ಸಹಾಯಧನ, ಯಾಂತ್ರೀಕರಣ ಘಟಕದಡಿ ಮಿನಿ ಟ್ರಾಕ್ಟರ್-20 ಎಚ್ಪಿ ಸಾಮಾನ್ಯ ರೈತರಿಗೆ ₹ 75,000, ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ₹ 1 ಲಕ್ಷ ಸಹಾಯಧನ ನೀಡಲಾಗುವುದು.</p>.<p>ಸಮಗ್ರ ಪೋಷಕಾಂಶ/ಸಮಗ್ರ ಪೀಡೆ ನಿರ್ವಹಣೆಯಡಿ ಹೆಕ್ಟೇರ್ಗೆ ₹ 1,200, ಪ್ಲಾಸ್ಟಿಕ್ ಮಲ್ಟಿಂಗ್ಗೆ ₹ 6,400 (ಪ್ರತಿ ಎಕರೆಗೆ) ಸಹಾಯಧನ ನೀಡಲಾಗುವುದು.</p>.<p>ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ತೆಂಗು, ಅಂಗಾಂಶ ಕೃಷಿ ಬಾಳೆ, ಮಾವು, ನಿಂಬೆ, ನುಗ್ಗೆ, ಸೀಬೆ, ಸಪೋಟ, ಪಪ್ಪಾಯ ಪ್ರದೇಶ ವಿಸ್ತರಣೆ ಮಾಡುವ ಸಣ್ಣ-ಅತಿಸಣ್ಣ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರಿಗೆ ಕೂಲಿ ವೆಚ್ಚ ಹಾಗೂ ಸಾಮಗ್ರಿ ವೆಚ್ಚವನ್ನು ಬೆಳೆವಾರು ದರಪಟ್ಟಿಯ ಪ್ರಕಾರ ಸಹಾಯಧನ ನೀಡಲಾಗುವುದು.</p>.<p>ತೆಂಗು ಮತ್ತು ಮಾವು ಬೆಳೆಯ ಪುನಶ್ಚೇತನದಡಿ ಇಚ್ಚೆಯುಳ್ಳ ರೈತರು ಎಂನರೇಗಾ ಮಾರ್ಗಸೂಚಿಯನ್ವಯ ಅಗತ್ಯ ದಾಖಲಾತಿಗಳೊಂದಿಗೆ ಜುಲೈ 15ರೊಳಗೆ ಅರ್ಜಿ ಸಲ್ಲಿಸುವುದು.</p>.<p>ಮಾಹಿತಿಗೆ 0821-2430450 ಸಂಪರ್ಕಿಸಿ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>