ತಾಲ್ಲೂಕಿನ ಇಟಗಳ್ಳಿಯಲ್ಲಿ ರಸ್ತೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅನುದಾನ ತಂದು ತಾಲ್ಲೂಕನ್ನು ಅಭಿವೃದ್ಧಿಪಡಿಸುವ ಸುವರ್ಣಾವಕಾಶವನ್ನು ಆಗಿನ ಶಾಸಕ ಕೆ.ವೆಂಕಟೇಶ್ ಕೈಚೆಲ್ಲಿದರು. ತಮ್ಮ ವಿಲಾಸಿ ಜೀವನಶೈಲಿಯಿಂದ ತಾಲ್ಲೂಕನ್ನು ಹಿಂದುಳಿಯುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.