<p><strong>ಮೈಸೂರು</strong>: ‘ಭಾರತ ಹಬ್ಬಗಳ ತವರು. ಇಲ್ಲಿ ಸಂಸೃತಿ ಸಂಪನ್ನತೆ ನಮ್ಮ ರಕ್ತದಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಹಬ್ಬಗಳಲ್ಲಿ ಸಂಭ್ರಮದ ಜೊತೆಗೆ ಸಂಸ್ಕೃತಿಯ ಸೊಬಗು ಮನೆ ಮಾಡಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸು.ರಾಮಣ್ಣ ಹೇಳಿದರು.</p><p>ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೈಸೂರು ಜಿಲ್ಲಾ ಸಮಿತಿಯು ಭಾನುವಾರ ಇಲ್ಲಿನ ಸಿದ್ಧಾರ್ಥ ನಗರದ ವಿನಯ ಮಾರ್ಗದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಅಧಿವೇಶನದಲ್ಲಿ ಸಂಕ್ರಾಂತಿ ಕುರಿತು ಅವರು ಮಾತನಾಡಿದರು.</p><p>‘ಸಮಗ್ರ ಕ್ರಾಂತಿ ಎಂಬುದೇ ಸಂಕ್ರಾಂತಿ. ಬದಲಾವಣೆ ಎಂಬುದು ಕ್ರಮೇಣ ಆಗುವಂತಹ ಪ್ರಕ್ರಿಯೆ’ ಎಂದರು.</p>.<p>ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ವಿರಚಿತ ‘ಚರಿತ ಚಂಪಕ’, ‘ಸಾಹಿತ್ಯದ ಸ್ವತ್ವ’, ಕೊ.ಲಾ. ನಾಗರಾಜು ವಿರಚಿತ ‘ಕೊಪ್ಪಲಿನ ಕತೆಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. </p><p>ಗೂಗಲ್ ಉಪನ್ಯಾಸ ಮಾಲಿಕೆಯಲ್ಲಿ ಪಾಲ್ಗೊಂಡಿದ್ದ ಐವತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಕೂಟಗಳ ಸದಸ್ಯರಿಂದ ಹಾಸ್ಯರಸಾಯನ ಹಾಗೂ ಮಕ್ಕಳ ಕೂಟದಿಂದ ಛದ್ಮವೇಷ ಸ್ಪರ್ಧೆ ನಡೆಸಲಾಯಿತು. </p><p>ಪ್ರಾಂತ ಸಂಪರ್ಕ ಪ್ರಮುಖ್ ವಿ.ರಂಗನಾಥ್, ರಾಜ್ಯ ಉಪಾಧ್ಯಕ್ಷ ಬೆಳಗೋಡು ರಮೇಶ್ ಭಟ್, ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಮಹಾರಾಜ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಎಸ್.ಮುರಳಿ, ರಾಘವೇಂದ್ರ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಸು.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಭಾರತ ಹಬ್ಬಗಳ ತವರು. ಇಲ್ಲಿ ಸಂಸೃತಿ ಸಂಪನ್ನತೆ ನಮ್ಮ ರಕ್ತದಲ್ಲಿ ಹಾಸು ಹೊಕ್ಕಾಗಿದೆ. ನಮ್ಮ ಹಬ್ಬಗಳಲ್ಲಿ ಸಂಭ್ರಮದ ಜೊತೆಗೆ ಸಂಸ್ಕೃತಿಯ ಸೊಬಗು ಮನೆ ಮಾಡಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಸು.ರಾಮಣ್ಣ ಹೇಳಿದರು.</p><p>ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮೈಸೂರು ಜಿಲ್ಲಾ ಸಮಿತಿಯು ಭಾನುವಾರ ಇಲ್ಲಿನ ಸಿದ್ಧಾರ್ಥ ನಗರದ ವಿನಯ ಮಾರ್ಗದಲ್ಲಿ ಆಯೋಜಿಸಿದ್ದ ಮೈಸೂರು ಜಿಲ್ಲಾ ಅಧಿವೇಶನದಲ್ಲಿ ಸಂಕ್ರಾಂತಿ ಕುರಿತು ಅವರು ಮಾತನಾಡಿದರು.</p><p>‘ಸಮಗ್ರ ಕ್ರಾಂತಿ ಎಂಬುದೇ ಸಂಕ್ರಾಂತಿ. ಬದಲಾವಣೆ ಎಂಬುದು ಕ್ರಮೇಣ ಆಗುವಂತಹ ಪ್ರಕ್ರಿಯೆ’ ಎಂದರು.</p>.<p>ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ವಿರಚಿತ ‘ಚರಿತ ಚಂಪಕ’, ‘ಸಾಹಿತ್ಯದ ಸ್ವತ್ವ’, ಕೊ.ಲಾ. ನಾಗರಾಜು ವಿರಚಿತ ‘ಕೊಪ್ಪಲಿನ ಕತೆಗಳು’ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. </p><p>ಗೂಗಲ್ ಉಪನ್ಯಾಸ ಮಾಲಿಕೆಯಲ್ಲಿ ಪಾಲ್ಗೊಂಡಿದ್ದ ಐವತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಕೂಟಗಳ ಸದಸ್ಯರಿಂದ ಹಾಸ್ಯರಸಾಯನ ಹಾಗೂ ಮಕ್ಕಳ ಕೂಟದಿಂದ ಛದ್ಮವೇಷ ಸ್ಪರ್ಧೆ ನಡೆಸಲಾಯಿತು. </p><p>ಪ್ರಾಂತ ಸಂಪರ್ಕ ಪ್ರಮುಖ್ ವಿ.ರಂಗನಾಥ್, ರಾಜ್ಯ ಉಪಾಧ್ಯಕ್ಷ ಬೆಳಗೋಡು ರಮೇಶ್ ಭಟ್, ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ಮಹಾರಾಜ ತಾಂತ್ರಿಕ ಸಂಸ್ಥೆಯ ಪ್ರಾಂಶುಪಾಲ ಎಸ್.ಮುರಳಿ, ರಾಘವೇಂದ್ರ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಸುಬ್ರಹ್ಮಣ್ಯ, ಕಾರ್ಯದರ್ಶಿ ಸು.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>