280 ಕೆ.ಜಿ. ತೂಕದ ಮರದ ಅಂಬಾರಿಯೊಳಗೆ 320ರಿಂದ 330 ಕೆ.ಜಿ. ತೂಕದ ಮರಳು ಮೂಟೆಗಳನ್ನಿಟ್ಟು, ಮುಕ್ಕಾಲು ತಾಸಿನ ಅವಧಿ ಅರಮನೆ ಆವರಣದೊಳಗೆ ಭಾನುವಾರ ತಾಲೀಮು ನಡೆಸಲಾಯಿತು. ಕುಮ್ಕಿ ಆನೆಗಳಾದ ವಿಜಯ, ಕಾವೇರಿ ಸಾಥ್ ನೀಡಿದವು ಎಂದು ಆನೆಗಳ ವೈದ್ಯಕೀಯ ಉಸ್ತುವಾರಿ ನೋಡಿಕೊಳ್ಳುವ ಪಶು ವೈದ್ಯ ಡಾ.ನಾಗರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.