ಇಲ್ಲಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಒಂದು ಚಿರತೆಯಿಂದ ಎಲ್ಲ ಚಿರತೆಗಳ ಮೇಲೂ ಜನರಲ್ಲಿ ಮೂಡುವ ದ್ವೇಷ ಅವುಗಳ ಸಂತತಿಯನ್ನೇ ನಾಶ ಮಾಡಬಲ್ಲದು. ಹೀಗಾಗಿ ವಿಶೇಷ ವಿಧಾನಗಳಿಂದ ನಿರ್ದಿಷ್ಟ ಚಿರತೆಯನ್ನು ಗುರುತಿಸಿ ಗುಂಡಿಕ್ಕಬೇಕು’ ಎಂದು ಪ್ರತಿಪಾದಿಸಿದರು.