ಮೈಸೂರು: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ಎಚ್.ವಿಶ್ವನಾಥ್ ಕೂಡ ಅದನ್ನು ಮತ್ತೆ ನೆನಪಿಸಬೇಕು’ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಸೋಮವಾರ ಇಲ್ಲಿ ಹೇಳಿದರು.
‘ವಿಶ್ವನಾಥ್ ನನ್ನನ್ನು ನಂಬಿ ಬಂದಿದ್ದಾರೆ. ಬಿಜೆಪಿ ಸೇರುವ ಮುನ್ನವೇ, ಯಡಿಯೂರಪ್ಪ ಬಳಿ ನಾನೇ ಅವರನ್ನು ಕಳುಹಿಸಿಕೊಟ್ಟಿದ್ದೆ. ಆಗಲೇ ಇಬ್ಬರೂ ಮಾತನಾಡಿ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದರು.
‘ಮುಂದಿನ ಮೂರು ವರ್ಷ ಯಡಿಯೂರಪ್ಪ ನೇತೃತ್ವದಲ್ಲೇ ಬಿಜೆಪಿ ಸರ್ಕಾರ ಸುಭದ್ರವಾಗಿ ಮುಂದುವರಿಯಲಿದೆ’ ಎಂದು ಹೇಳಿದರು.
ಎಚ್.ಡಿ.ದೇವೇಗೌಡ ಅವರು ರಾಜ್ಯಸಭೆಗೆ ಆಯ್ಕೆಯಾಗಿರುವ ಬಗ್ಗೆ, ‘ದೇವೇಗೌಡರ ವಿಷಯ ಪ್ರಸ್ತಾಪ ಮಾಡಬೇಡಿ. ಅವರ ಹೆಸರು ಹೇಳುವುದಕ್ಕೂ ಇಷ್ಟಪಡುವುದಿಲ್ಲ. ಸುಮ್ಮನೇ ವಿವಾದವಾಗುತ್ತದೆ’ ಎಂದರು.