<p><strong>ಮೈಸೂರು:</strong> ‘ಮನಸ್ಸು ಮತ್ತು ಶರೀರದ ಮೇಲೆ ಏಕತೆ ಸಾಧಿಸುವುದು, ಆತ್ಮ ಹಾಗೂ ಭಗವಂತನ ನಡುವೆ ಸಂಬಂಧವನ್ನು ಬೆಸೆಯುವುದೇ ಯೋಗ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.</p>.<p>ಅಮೆರಿಕದ ಮೇರಿಲ್ಯಾಂಡ್ನ ಗೇಥರ್ಸ್ಬರ್ಗ್ಲ್ಲಿರುವ ಜೆಎಸ್ಎಸ್ ಅಧ್ಯಾತ್ಮ ಮಿಷನ್ನಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಭಾರತವು ಜಗತ್ತಿಗೆ ಅಧ್ಯಾತ್ಮ, ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನ ಹೀಗೆ... ಅನೇಕ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದೆ. ಅವುಗಳಲ್ಲಿ ಯೋಗವು ಅತ್ಯಂತ ಮಹತ್ವದ್ದು. ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ ಇದಾಗಿದೆ’ ಎಂದರು.</p>.<p>‘ನಿಯಮಿತ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ಶರೀರಗಳಿಗೆ ನವಚೈತನ್ಯ ದೊರಕುತ್ತದೆ. ಒತ್ತಡ ಮುಕ್ತ ಜೀವನಕ್ಕೂ ಇದು ಸಹಕಾರಿಯಾಗಿದೆ’ ಎಂದು ತಿಳಿಸಿದರು.</p>.<p>ಆಧ್ಯಾತ್ಮಿಕ ಕೇಂದ್ರದ ಯೋಗ ಶಿಕ್ಷಕ ಸಂಜಾತ್ ಸೂಲಕುಂಟೆ ಮಾರ್ಗದರ್ಶನದಲ್ಲಿ ಜೆಎಸ್ಎಸ್ ಸಂಡೆ ಸ್ಕೂಲ್ ವಿದ್ಯಾರ್ಥಿಗಳು, ಸ್ವಯಂಸೇವಕರು, ಸುತ್ತಮುತ್ತಲಿನ ಅನಿವಾಸಿ ಭಾರತೀಯರು ಹಾಗೂ ಮಿಷನ್ನ ಸಿಬ್ಬಂದಿ ಯೋಗಾಸನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಮನಸ್ಸು ಮತ್ತು ಶರೀರದ ಮೇಲೆ ಏಕತೆ ಸಾಧಿಸುವುದು, ಆತ್ಮ ಹಾಗೂ ಭಗವಂತನ ನಡುವೆ ಸಂಬಂಧವನ್ನು ಬೆಸೆಯುವುದೇ ಯೋಗ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.</p>.<p>ಅಮೆರಿಕದ ಮೇರಿಲ್ಯಾಂಡ್ನ ಗೇಥರ್ಸ್ಬರ್ಗ್ಲ್ಲಿರುವ ಜೆಎಸ್ಎಸ್ ಅಧ್ಯಾತ್ಮ ಮಿಷನ್ನಲ್ಲಿ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಭಾರತವು ಜಗತ್ತಿಗೆ ಅಧ್ಯಾತ್ಮ, ಸಂಸ್ಕೃತಿ, ವಿಜ್ಞಾನ-ತಂತ್ರಜ್ಞಾನ ಹೀಗೆ... ಅನೇಕ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದೆ. ಅವುಗಳಲ್ಲಿ ಯೋಗವು ಅತ್ಯಂತ ಮಹತ್ವದ್ದು. ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ ಇದಾಗಿದೆ’ ಎಂದರು.</p>.<p>‘ನಿಯಮಿತ ಯೋಗಾಭ್ಯಾಸ ಮಾಡುವುದರಿಂದ ಮನಸ್ಸು ಮತ್ತು ಶರೀರಗಳಿಗೆ ನವಚೈತನ್ಯ ದೊರಕುತ್ತದೆ. ಒತ್ತಡ ಮುಕ್ತ ಜೀವನಕ್ಕೂ ಇದು ಸಹಕಾರಿಯಾಗಿದೆ’ ಎಂದು ತಿಳಿಸಿದರು.</p>.<p>ಆಧ್ಯಾತ್ಮಿಕ ಕೇಂದ್ರದ ಯೋಗ ಶಿಕ್ಷಕ ಸಂಜಾತ್ ಸೂಲಕುಂಟೆ ಮಾರ್ಗದರ್ಶನದಲ್ಲಿ ಜೆಎಸ್ಎಸ್ ಸಂಡೆ ಸ್ಕೂಲ್ ವಿದ್ಯಾರ್ಥಿಗಳು, ಸ್ವಯಂಸೇವಕರು, ಸುತ್ತಮುತ್ತಲಿನ ಅನಿವಾಸಿ ಭಾರತೀಯರು ಹಾಗೂ ಮಿಷನ್ನ ಸಿಬ್ಬಂದಿ ಯೋಗಾಸನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>