ತಮ್ಮ ಭಾವನ ಜತೆಗೆ ಇವರು ಮಧ್ಯಾಹ್ನ ನೀರಿನಲ್ಲಿ ಈಜಲು ಧುಮುಕಿದರು. ಆದರೆ, ಸ್ವಲ್ಪ ಸಮಯದ ನಂತರ ಇವರು ಮುಳುಗತೊಡಗಿದರು. ಎಷ್ಟೇ ಪ್ರಯತ್ನ ಪಟ್ಟರು ಇವರನ್ನು ಮೇಲೆ ತರಲು ಆಗಲಿಲ್ಲ. ಮುಳುಗಿದ ಇವರಿಗಾಗಿ ಅಗ್ನಿಶಾಮಕ ಪಡೆಯವರೊಂದಿಗೆ ನೀರಿನಲ್ಲಿ ಶೋಧ ಕಾರ್ಯ ನಡೆಸಿದರೂ ಪ್ರಯೋಜನವಾಗಲಿಲ್ಲ. ಮತ್ತೆ ಬುಧವಾರ ಬೆಳಿಗ್ಗೆ ಶೋಧ ಕಾರ್ಯ ನಡೆಸಲಾಗುವುದು ಎಂದು ಎನ್.ಆರ್.ಠಾಣೆ ಪೊಲೀಸರು ತಿಳಿಸಿದ್ದಾರೆ.