<p>ಮೈಸೂರು: ರೆಕಾರ್ಡಿಂಗ್ ಕಂಪೆನಿಗಳ ಕಪಿಮುಷ್ಟಿ ಯಲ್ಲಿ ಕನ್ನಡ ಭಾವಗೀತೆಗಳು ನಲುಗುತ್ತಿದ್ದು, ಕವಿ, ಸಂಗೀತಗಾರರನ್ನು ಈ ಬಂಧನದಿಂದ ಬಿಡಿಸುವ ಅಗತ್ಯವಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.<br /> <br /> ನಗರದ ಜಾವಾ ರೋಟರಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಎನ್.ಸ್ವಾಮಿನಾಥನ್ ಅವರ `ಸ್ಪಂದನ~ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ಭಾವಗೀತೆ ಸಂಕಲನ ಬಿಡುಗಡೆ ಮಾಡುವುದು ಸುಲಭ. ಆದರೆ ಅವನ್ನು ಹಾಡಾಗಿ ಕ್ಯಾಸೆಟ್ ರೂಪದಲ್ಲಿ ಹೊರ ತರುವುದು ಕಷ್ಟ. ಅಂತಹ ಸಾಹಸಕ್ಕೆ ಕೈ ಹಾಕಿದರೆ ರೆಕಾರ್ಡಿಂಗ್ ಕಂಪೆನಿಗಳನ್ನು ಎದುರಿಸುವ ಶಕ್ತಿ ಬೇಕಾಗುತ್ತದೆ. <br /> ಕವಿಗಳು, ಸಂಗೀತಗಾರರು ಅವರ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಕನ್ನಡಿಗರಿಗೆ ಆದ ಅವಮಾನ. ಇದರಿಂದ ಸಮರ್ಥ ಕವನಗಳು ಭಾವಗೀತೆಗಳಾಗಿ ಹೊರಬರುತ್ತಿಲ್ಲ. ಹಳೆಯ ಗೀತೆಗಳನ್ನೇ ಮತ್ತೆ ಮತ್ತೆ ಕೇಳುವ ಪರಿಸ್ಥಿತಿ ತಲೆದೂರಿದೆ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> `ಸ್ಪಂದನ~ ಕೃತಿಯಲ್ಲಿರುವ ಬಹುತೇಕ ಕವನಗಳು ಭಾವಗೀತೆಯ ಸಾಮರ್ಥ್ಯ ಹೊಂದಿವೆ. ವೈವಿಧ್ಯಮಯ ವಸ್ತು ಕವಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ತಂತ್ರಜ್ಞಾನ, ವಾಣಿಜ್ಯ ವಿಷಯಗಳ ಕುರಿತು ಕವಿತೆ ರಚಿಸುವುದು ಕಷ್ಟ. <br /> <br /> ಆದರೆ ಕವಿ ಆ ವಸ್ತುಗಳನ್ನು ದುಡಿಸಿಕೊಂಡಿದ್ದಾರೆ. ಕನ್ನಡ ಪ್ರಾಧ್ಯಾಪಕರು ಮಾತ್ರ ಸಾಹಿತ್ಯ ಲೋಕ ಪ್ರವೇಶಿಸಿದರೆ ಹಳಸಿದ ಊಟವನ್ನೇ ಬಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಕ್ಕೆ ಬೇರೆ ಕ್ಷೇತ್ರದ ಸೃಜನಶೀಲ ಮನಸ್ಸುಗಳು ಬರಬೇಕು ಎಂದು ಪೂರ್ಣಚಂದ್ರ ತೇಜಸ್ವಿ ಆಶಿಸಿದ್ದರು. ಸ್ವಾಮಿನಾಥನ್ ಅವರು ಐಟಿ, ಬಿಟಿ ಕ್ಷೇತ್ರದ ಅನುಭವಗಳನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ಲೇಖಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ಐಟಿ-ಬಿಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಕನ್ನಡದ ಕಳಚಿದ ಕೊಂಡಿಗಳು ಎಂದು ನಿರ್ಧರಿಸಲಾಗಿದೆ. ಆದರೆ ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುವವರು ಇದ್ದಾರೆ.<br /> <br /> ಕೆ.ಎಸ್. ನರಸಿಂಹಸ್ವಾಮಿ, ದ.ರಾ.ಬೇಂದ್ರೆ ಅವರ ಪ್ರಭಾವದಿಂದ ಕವಿ ಹೊರಬರಬೇಕಿತ್ತು. ಹೊಸ ರೂಪಕಗಳನ್ನು ಸೃಷ್ಟಿಸಿದರೆ ಕವಿತೆಯ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು. ಪತ್ರಕರ್ತ ಕೃಷ್ಣವಟ್ಟಂ ಅಧ್ಯಕ್ಷತೆ ವಹಿಸಿದ್ದರು. ಕವಿ ಎನ್.ಸ್ವಾಮಿನಾಥನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ರೆಕಾರ್ಡಿಂಗ್ ಕಂಪೆನಿಗಳ ಕಪಿಮುಷ್ಟಿ ಯಲ್ಲಿ ಕನ್ನಡ ಭಾವಗೀತೆಗಳು ನಲುಗುತ್ತಿದ್ದು, ಕವಿ, ಸಂಗೀತಗಾರರನ್ನು ಈ ಬಂಧನದಿಂದ ಬಿಡಿಸುವ ಅಗತ್ಯವಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.<br /> <br /> ನಗರದ ಜಾವಾ ರೋಟರಿ ಶಾಲೆಯ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಎನ್.ಸ್ವಾಮಿನಾಥನ್ ಅವರ `ಸ್ಪಂದನ~ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ಭಾವಗೀತೆ ಸಂಕಲನ ಬಿಡುಗಡೆ ಮಾಡುವುದು ಸುಲಭ. ಆದರೆ ಅವನ್ನು ಹಾಡಾಗಿ ಕ್ಯಾಸೆಟ್ ರೂಪದಲ್ಲಿ ಹೊರ ತರುವುದು ಕಷ್ಟ. ಅಂತಹ ಸಾಹಸಕ್ಕೆ ಕೈ ಹಾಕಿದರೆ ರೆಕಾರ್ಡಿಂಗ್ ಕಂಪೆನಿಗಳನ್ನು ಎದುರಿಸುವ ಶಕ್ತಿ ಬೇಕಾಗುತ್ತದೆ. <br /> ಕವಿಗಳು, ಸಂಗೀತಗಾರರು ಅವರ ಕಪಿಮುಷ್ಟಿಯಲ್ಲಿ ಸಿಲುಕಿರುವುದು ಕನ್ನಡಿಗರಿಗೆ ಆದ ಅವಮಾನ. ಇದರಿಂದ ಸಮರ್ಥ ಕವನಗಳು ಭಾವಗೀತೆಗಳಾಗಿ ಹೊರಬರುತ್ತಿಲ್ಲ. ಹಳೆಯ ಗೀತೆಗಳನ್ನೇ ಮತ್ತೆ ಮತ್ತೆ ಕೇಳುವ ಪರಿಸ್ಥಿತಿ ತಲೆದೂರಿದೆ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> `ಸ್ಪಂದನ~ ಕೃತಿಯಲ್ಲಿರುವ ಬಹುತೇಕ ಕವನಗಳು ಭಾವಗೀತೆಯ ಸಾಮರ್ಥ್ಯ ಹೊಂದಿವೆ. ವೈವಿಧ್ಯಮಯ ವಸ್ತು ಕವಿಯ ಸಾಮರ್ಥ್ಯವನ್ನು ಸೂಚಿಸುತ್ತದೆ. ತಂತ್ರಜ್ಞಾನ, ವಾಣಿಜ್ಯ ವಿಷಯಗಳ ಕುರಿತು ಕವಿತೆ ರಚಿಸುವುದು ಕಷ್ಟ. <br /> <br /> ಆದರೆ ಕವಿ ಆ ವಸ್ತುಗಳನ್ನು ದುಡಿಸಿಕೊಂಡಿದ್ದಾರೆ. ಕನ್ನಡ ಪ್ರಾಧ್ಯಾಪಕರು ಮಾತ್ರ ಸಾಹಿತ್ಯ ಲೋಕ ಪ್ರವೇಶಿಸಿದರೆ ಹಳಸಿದ ಊಟವನ್ನೇ ಬಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಕ್ಕೆ ಬೇರೆ ಕ್ಷೇತ್ರದ ಸೃಜನಶೀಲ ಮನಸ್ಸುಗಳು ಬರಬೇಕು ಎಂದು ಪೂರ್ಣಚಂದ್ರ ತೇಜಸ್ವಿ ಆಶಿಸಿದ್ದರು. ಸ್ವಾಮಿನಾಥನ್ ಅವರು ಐಟಿ, ಬಿಟಿ ಕ್ಷೇತ್ರದ ಅನುಭವಗಳನ್ನು ಕನ್ನಡಕ್ಕೆ ದಕ್ಕಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> ಲೇಖಕಿ ಡಾ.ಧರಣಿದೇವಿ ಮಾಲಗತ್ತಿ ಮಾತನಾಡಿ, ಐಟಿ-ಬಿಟಿ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಕನ್ನಡದ ಕಳಚಿದ ಕೊಂಡಿಗಳು ಎಂದು ನಿರ್ಧರಿಸಲಾಗಿದೆ. ಆದರೆ ಅಲ್ಲಿಯೂ ಕನ್ನಡದ ಕಂಪನ್ನು ಪಸರಿಸುವವರು ಇದ್ದಾರೆ.<br /> <br /> ಕೆ.ಎಸ್. ನರಸಿಂಹಸ್ವಾಮಿ, ದ.ರಾ.ಬೇಂದ್ರೆ ಅವರ ಪ್ರಭಾವದಿಂದ ಕವಿ ಹೊರಬರಬೇಕಿತ್ತು. ಹೊಸ ರೂಪಕಗಳನ್ನು ಸೃಷ್ಟಿಸಿದರೆ ಕವಿತೆಯ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು. ಪತ್ರಕರ್ತ ಕೃಷ್ಣವಟ್ಟಂ ಅಧ್ಯಕ್ಷತೆ ವಹಿಸಿದ್ದರು. ಕವಿ ಎನ್.ಸ್ವಾಮಿನಾಥನ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>