‘ನಮ್ಮ ಧರಣಿಯನ್ನು ಮುಖ್ಯಮಂತ್ರಿ ಬಹಳ ಹಗುರವಾಗಿ ಪರಿಗಣಿಸಿದ್ದಾರೆ. ಧರಣಿ ನಡೆಸಿ ಮೆರವಣಿಗೆಗೆ ಮುಂದಾದಾಗ ಮಾತುಕತೆಗೆ ಆಹ್ವಾನಿಸಿದ್ದಾರೆ. ಪ್ರತಿಭಟನೆ ನಡೆಸುವುದಾಗಿ ವಾರದ ಮೊದಲೇ ಹೇಳಿದ್ದೆ. ಈ ವಿಚಾರ ರಾಜ್ಯದ ಜನರಿಗೂ ಗೊತ್ತಿತ್ತು. ಈಗ ಯಡಿಯೂರಪ್ಪ ಸಹಕಾರ ಕೊಡುವುದಿಲ್ಲ, ರಾಜಕಾರಣ ಮಾಡುತ್ತಿದ್ದಾರೆ ಎಂದು ಈಗ ಆರೋಪ ಮಾಡಿದರೆ ಹೇಗೆ? ಇದು ಮುಖ್ಯಮಂತ್ರಿಗೆ ಶೋಭೆ ತರುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.