<p><strong>ಮೈಸೂರು:</strong> ಮಾಮರವೆಲ್ಲೋ ಕೋಗಿಲೆಯಲ್ಲೋ ಏನಿ ಸ್ನೇಹ ಸಂಬಂಧ? ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ, ಮಡಿಕೇರಿ ಸಿಪಾಯಿ ಗೀತೆಗಳನ್ನು ಗಾಯಕರು ಹಾಡುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಶಿಳ್ಳೆ, ಚಪ್ಪಾಳೆ ಮಾರ್ದನಿಸಿತು.<br /> <br /> ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ನಟ ಡಾ.ವಿಷ್ಣು ವರ್ಧನ ಹಿಟ್ಸ್ ರಸಮಂಜರಿ ಕಾರ್ಯಕ್ರಮದಲ್ಲಿ ವಿಷ್ಣು ಅಭಿಮಾನಿಗಳು ಕುಣಿದು, ಕುಪ್ಪಳಿಸಿದರು. <br /> <br /> ಹಿರಿಯ ನಟ ದಿವಂಗತ ರತ್ನಾಕರ ಅವರ ಪುತ್ರ ರಾಘವೇಂದ್ರ ಹಾಗೂ ಇವರ ಪತ್ನಿ ಡಾ.ಪ್ರೀತಂ ರಾಘವೇಂದ್ರ ಅವರು ವಿಷ್ಣುವರ್ಧನ್ ಅವರ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ವಿಷ್ಣು ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ತೇಲಿಸಿದರು.<br /> <br /> ಹೊಂಬಿಸಿಲು ಚಿತ್ರದ `ಜೀವವೀಣೆ ನೀನು ಮಿಡಿಯುವ ಸಂಗೀತ~, ಕೃಷ್ಣ ನೀ ಬೇಗನೆ ಬಾರೋ ಚಿತ್ರದ `ಅಲಾರೆ ಅಲಾರೆ ಮುಕುಂದ ಮುರಾರಿ~, `ಶಾರದೆ ದಯೆ ತೋರಿದೆ~, `ಕರ್ನಾಟಕದ ಇತಿಹಾಸ ದಲಿ~, `ಕನ್ನಡನಾಡಿನ ಜೀವನದಿ ಕಾವೇರಿ~ ಹಾಡು ಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು. ವಿಷ್ಣು ಅಭಿನ ಯದ ಆಪ್ತರಕ್ಷಕ ಚಿತ್ರದ ಹೌಲ..ಹೌಲ ಹಾಡಿಗೆ ಸಭಾಂಗಣದ ಹಿಂಭಾಗದಲ್ಲಿ ಕುಳಿತ ಪ್ರೇಕ್ಷಕರು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.<br /> <br /> `ಜಯಸಿಂಹ ಬಂದಾ ಜಯಸಿಂಹ~, `ಬಾರೆ ಸಂತೆಗೆ ಹೋಗೋಣ ಬಾ~, `ನೂರೊಂದು ನೆನಪು ಎದೆಯಾ ಳದಿಂದ ಹಾಡಾಗಿ ಬಂತು~, `ನೀ ಮೀಟಿದಾ ನೆನ ಪೆಲ್ಲವೂ~, `ಬಾರೇ ಬಾರೇ ಚೆಂದದ ಚೆಲುವಿನ ತಾರೆ~ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.<br /> <br /> ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ಸಭಾಪತಿ ಬಿ.ವಿ.ಶೇಷಾದ್ರಿ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ಎಂ.ಎಸ್.ರವೀಂದ್ರ, ರಮೇಶ್, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ನಾಗರಾಜ್, ವೆಂಕಟೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಮಾಮರವೆಲ್ಲೋ ಕೋಗಿಲೆಯಲ್ಲೋ ಏನಿ ಸ್ನೇಹ ಸಂಬಂಧ? ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ, ಮಡಿಕೇರಿ ಸಿಪಾಯಿ ಗೀತೆಗಳನ್ನು ಗಾಯಕರು ಹಾಡುತ್ತಿದ್ದಂತೆಯೇ ಇಡೀ ಸಭಾಂಗಣದಲ್ಲಿ ಶಿಳ್ಳೆ, ಚಪ್ಪಾಳೆ ಮಾರ್ದನಿಸಿತು.<br /> <br /> ಸಾರ್ವಜನಿಕ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ನಟ ಡಾ.ವಿಷ್ಣು ವರ್ಧನ ಹಿಟ್ಸ್ ರಸಮಂಜರಿ ಕಾರ್ಯಕ್ರಮದಲ್ಲಿ ವಿಷ್ಣು ಅಭಿಮಾನಿಗಳು ಕುಣಿದು, ಕುಪ್ಪಳಿಸಿದರು. <br /> <br /> ಹಿರಿಯ ನಟ ದಿವಂಗತ ರತ್ನಾಕರ ಅವರ ಪುತ್ರ ರಾಘವೇಂದ್ರ ಹಾಗೂ ಇವರ ಪತ್ನಿ ಡಾ.ಪ್ರೀತಂ ರಾಘವೇಂದ್ರ ಅವರು ವಿಷ್ಣುವರ್ಧನ್ ಅವರ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ವಿಷ್ಣು ಅಭಿಮಾನಿಗಳನ್ನು ಸಂತಸದ ಅಲೆಯಲ್ಲಿ ತೇಲಿಸಿದರು.<br /> <br /> ಹೊಂಬಿಸಿಲು ಚಿತ್ರದ `ಜೀವವೀಣೆ ನೀನು ಮಿಡಿಯುವ ಸಂಗೀತ~, ಕೃಷ್ಣ ನೀ ಬೇಗನೆ ಬಾರೋ ಚಿತ್ರದ `ಅಲಾರೆ ಅಲಾರೆ ಮುಕುಂದ ಮುರಾರಿ~, `ಶಾರದೆ ದಯೆ ತೋರಿದೆ~, `ಕರ್ನಾಟಕದ ಇತಿಹಾಸ ದಲಿ~, `ಕನ್ನಡನಾಡಿನ ಜೀವನದಿ ಕಾವೇರಿ~ ಹಾಡು ಗಳು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು. ವಿಷ್ಣು ಅಭಿನ ಯದ ಆಪ್ತರಕ್ಷಕ ಚಿತ್ರದ ಹೌಲ..ಹೌಲ ಹಾಡಿಗೆ ಸಭಾಂಗಣದ ಹಿಂಭಾಗದಲ್ಲಿ ಕುಳಿತ ಪ್ರೇಕ್ಷಕರು ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.<br /> <br /> `ಜಯಸಿಂಹ ಬಂದಾ ಜಯಸಿಂಹ~, `ಬಾರೆ ಸಂತೆಗೆ ಹೋಗೋಣ ಬಾ~, `ನೂರೊಂದು ನೆನಪು ಎದೆಯಾ ಳದಿಂದ ಹಾಡಾಗಿ ಬಂತು~, `ನೀ ಮೀಟಿದಾ ನೆನ ಪೆಲ್ಲವೂ~, `ಬಾರೇ ಬಾರೇ ಚೆಂದದ ಚೆಲುವಿನ ತಾರೆ~ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.<br /> <br /> ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಸಭೆಯ ಸಭಾಪತಿ ಬಿ.ವಿ.ಶೇಷಾದ್ರಿ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ಎಂ.ಎಸ್.ರವೀಂದ್ರ, ರಮೇಶ್, ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ನಾಗರಾಜ್, ವೆಂಕಟೇಶ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>