ಶಿವಮೊಗ್ಗ: ಸಾಗರದ ಜಂಬಗಾರು ರೈಲುನಿಲ್ದಾಣಕ್ಕೆ ರಾಮಮನೋಹರ ಲೋಹಿಯಾ ಹೆಸರುಇಡಬೇಕುಎಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರಟ್ರಸ್ಟ್ ಪದಾಧಿಕಾರಿಗಳು ಮಂಗಳವಾರಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಿದರು.
ಜಂಬಗಾರು ರೈಲುನಿಲ್ದಾಣಕ್ಕೆ ಲೋಹಿಯಾ ಅವರ ಹೆಸರುನಾಮಕರಣ ಮಾಡುವಂತೆಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ.ಪ್ರಗತಿಪರ ಸಂಘಟನೆಗಳು, ಸಮಾಜವಾದಿ ಮುಖಂಡರು ಸೇರಿ 2001ರಲ್ಲಿಯೇ ಈ ರೈಲು ನಿಲ್ದಾಣದ ಎದುರು ಡಾ.ರಾಮಮನೋಹರ ಲೋಹಿಯಾ ರೈಲುನಿಲ್ದಾಣ ಎಂಬ ನಾಮಫಲಕ ಹಾಕಿದ್ದರುಎಂದು ನೆನಪು ಮಾಡಿದರು.
ಲೋಹಿಯಾ ಅವರು 1951ರಲ್ಲಿ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಲು ಬಂದಾಗ ಮಧ್ಯರಾತ್ರಿ ಜಂಬಗಾರು ರೈಲು ನಿಲ್ದಾಣದಲ್ಲೇ ಬಂಧನಕ್ಕೆ ಒಳಗಾಗಿದ್ದರು. ಭೂ ಒಡೆತನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸಲು ಬಂದಿದ್ದ ಅವರನ್ನುಪೊಲೀಸರುಬಂಧಿಸಿದ್ದರು.ಚರಿತ್ರೆಯನೆನಪಿಗಾಗಿ, ಅವರ ಹೋರಾಟದ ಭಾಗವಾಗಿ ಹೆಸರು ಇಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಬಿ.ಸ್ವಾಮಿರಾವ್, ಟ್ರಸ್ಟ್ ಮುಖಂಡರಾದ ಕಲ್ಲೂರು ಮೇಘರಾಜ್, ಎಸ್.ವಿ.ರಾಜಮ್ಮ, ಎಚ್.ಎಂ.ಸಂಗಯ್ಯ, ಕೋಡ್ಲು ಶ್ರೀಧರ್, ಶಂಕರಾನಾಯ್ಕ, ಸೋಮಯ್ಯ, ಆದಿಶೇಷಮನವಿ ಸಲ್ಲಿಸಿದರು.