ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಾಣ ವಿಳಂಬಕ್ಕೆ ಕೊಳೆಗೇರಿಗಳ ಆಕ್ರೋಶ

Last Updated 10 ಜನವರಿ 2020, 12:48 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಧಾನಮಂತ್ರಿಗಳ ಆವಾಸ್ ಯೋಜನೆಯ ಮನೆಗಳ ನಿರ್ಮಾಣವಿಳಂಬ ಖಂಡಿಸಿ ಕೊಳಚೆ ಪ್ರದೇಶದ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ನಗರಪಾಲಿಕೆ ವ್ಯಾಪ್ತಿಯಲ್ಲಿ 9 ಘೋಷಿತ ಕೊಳಚೆ ಪ್ರದೇಶಗಳಿವೆ. ಕೊಳಚೆ ಪ್ರದೇಶ ಅಭಿವೃದ್ಧಿ ನಿಗಮ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿಸುಮಾರು 1,590 ಮನೆಗಳನ್ನು ನಿರ್ಮಾಣ ಮಾಡಲು 2019ರ ಜನವರಿಯಲ್ಲೇಆರಂಭಮಾಡಲಾಗಿತ್ತು. ಅರ್ಹ ಫಲಾನುಭವಿಗಳೂ ನಿಗದಿತ ಮೊತ್ತ ಪಾವತಿಸಿದ್ದರು. ಒಪ್ಪಂದದ ಪ್ರಕಾರ 6 ತಿಂಗಳ ಒಳಗೆ ಮನೆ ಕಟ್ಟಿಕೊಡಬೇಕಿತ್ತು. ಇದುವರೆಗೂ ಮನೆಗಳ ನಿರ್ಮಾಣಪೂರ್ಣಗೊಂಡಿಲ್ಲ ಎಂದು ದೂರಿದರು.

ಈಗಾಗಲೇ 12 ತಿಂಗಳ ಅವಧಿ ಮುಗಿದಿದೆ. ಮನೆಗಳಿಗೆ ಗಿಲಾವ್ ಆಗಿಲ್ಲ. ವೈರಿಂಗ್ ಆಗಿಲ್ಲ, ಕಿಟಕಿ, ಬಾಗಿಲುಗಳೂ ಇಲ್ಲ. ನೆಲಹಾಸು ಸಿದ್ದವಾಗಿಲ್ಲ. ಎಲ್ಲ ಮನೆಗಳು ಅಪೂರ್ಣವಾಗಿವೆ. ಅವೈಜ್ಞಾನಿಕವಾಗಿವೆ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ರಮೇಶ್ ಹೆಗ್ಡೆ, ಶಮೀರ್ ಖಾನ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮುಖಂಡರಾದಪಂಡಿತ್ ವಿ.ವಿಶ್ವನಾಥ್, ಮಂಜುಳಾ ಶಿವಣ್ಣ, ಶರೀಫ್ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT