ಶಿವಮೊಗ್ಗ:ಕೇಂದ್ರ ಸರ್ಕಾರಜಾರಿಗೆ ತಂದಿರುವ ನೂತನಪೌರತ್ವ ಕಾಯ್ದೆವಿರೋಧಿಸಿ ಮುತ್ತಹಿದ ಮಹಾಝ್ ಸಂಘಟನೆ ಸದಸ್ಯರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಂಗೀಕಾರವಾಗಿ, ರಾಷ್ಟ್ರಪತಿ ಅಂಕಿತ ಹಾಕಿರುವ ಈಕಾಯ್ದೆ ಸಂವಿಧಾನದ ಆಶಯದ ವಿರುದ್ಧವಾಗಿದೆ. ದೇಶದ ನೈತಿಕ, ಸಂವಿಧಾನಿಕ, ಜಾತ್ಯತೀತ ಪರಂಪರೆಗಳಿಗೆ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಕಾಯ್ದೆಯ ಹಿಂದೆ ಕೋಮು ಧ್ರುವೀಕರಣ ಮತ್ತು ಮುಸ್ಲಿಮರನ್ನು ಬಲಿಪಶುಗಳನ್ನಾಗಿಸುವ ಹುನ್ನಾರಅಡಗಿದೆ. ಇದರ ಹಿಂದೆ ರಾಜಕೀಯ ದುರುದ್ದೇಶವೂ ಅಡಗಿದೆ. ದೇಶದ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದುಆರೋಪಿಸಿದರು.
ಸಂಘಟನೆಯ ಮುಖಂಡರಾದ ಪರ್ವೀಜ್ ಅಹಮದ್, ಎಚ್.ಕೆ.ಅಬ್ದುಲ್ ವಾಜೀದ್, ಹಾಮೀದ್ ಮತ್ತು ಇಕ್ಬಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.