ಬಳ್ಳಾರಿ ಜಿಲ್ಲೆ ಸಿರಗುಪ್ಪದ ರೈತ ಶ್ರೀನಿವಾಸರೆಡ್ಡಿ ಅವರಿಗೆ ಈ ವರ್ಷ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನೀಡಿದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ಅವರು ಮುರ್ರಾತಳಿ ಎಮ್ಮೆಗಳನ್ನು ಮಾತ್ರ ಸಾಕಾಣಿಕೆ ಮಾಡಿದ್ದು, ಪ್ರತಿದಿನ 400 ಲೀಟರ್ ಹಾಲು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿ 200 ಲೀಟರ್ ಮಾರಾಟ ಮಾಡಿ, ಇನ್ನುಳಿದ ಹಾಲುಗಳನ್ನು ಕರುಗಳು ಕುಡಿಯುವುದಕ್ಕೆ ಬಿಡುತ್ತಿದ್ದಾರೆ.