ರಾಯಚೂರು: ನಗರದ ಭೂ ದಾಖಲೆಗಳ ಕಚೇರಿ ಮೇಲೆಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಸೋಮವಾರ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದರು.
ಕಾರ್ಯ ವಿಳಂಬ ಹಾಗೂ ಭ್ರಷ್ಟಾಚಾರದ ದೂರುಗಳನ್ನು ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ವಿಭಾಗಾವಾರು ಕಡತಗಳನ್ನು ಪರಿಶೀಲಿಸಿದರು. ಕಾರ್ಯ ವಿಳಂಬಕ್ಕೆ ಕಾರಣಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಎಸಿಬಿ ಡಿವೈಎಸ್ಪಿ ವಿಜಯಕುಮಾರ್ ನೇತೃತ್ವದಲ್ಲಿ ಪ್ರದೀಪ್ ತಳಕೇರಿ, ವಿಕ್ರಮಸಿಂಗ್, ಬಸವರಾಜೇಶ್ವರಿ, ವಿನೋದರಾಜ, ಅಶೋಕ ಹಾಗೂ ರಾಜಪ್ಪ ಅವರು ದಾಳಿ ನಡೆಸಿದರು.