ಕಾಯಿಕೊರಕ, ಎಲೆ ತಿನ್ನುವ ಹುಳ, ಎಲೆಸುರುಳಿ ಪೂಚಿ, ತೊಗರಿಗೂಡು ಮಾರು ಹುಳ ಮತ್ತು ಹರಳು ರಂಗೋಲಿ ಹುಳಗಳು ಕೂಡ ಕಂಡುಬರುವ ಸಾಧ್ಯತೆಯಿದ್ದು, ಈ ಔಷಧಗಳನ್ನು ಬಳಸಿ ನಿಯಂತ್ರಿಸಿಕೊಳ್ಳಬಹುದು. ತುರ್ತಾಗಿ ಮತ್ತು ಸಾಮೂಹಿಕವಾಗಿ ಹತೋಟಿ ಕ್ರಮಗಳನ್ನು ರೈತರು ಕೈಗೊಳ್ಳಬೇಕು. ಅಗತ್ಯ ಔಷಧಗಳು ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡಲಾಗುತ್ತಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಎಂದು ವಿವರಿಸಿದರು.