ಮಕ್ಕಳು ಅಸ್ವಸ್ಥಗೊಂಡ ಸುದ್ದಿ ತಿಳಿದು ಪಾಲಕರು ವಸತಿನಿಲಯಕ್ಕೆ ಬಂದು ಇಲಾಖೆಯ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಉಪ ವಿಭಾಗಾಧಿಕಾರಿ ಎಸ್.ಎಸ್ . ಸಂಪಗಾವಿ, ಡಿಎಚ್ಒ ಡಾ ಸುರೇಂದ್ರ ಬಾಬು, ಪರಿಶಿಷ್ಟ ಪಂಗಡ ಇಲಾಖೆಯ ಆಧಿಕಾರಿ ರಾಜೇಂದ್ರ ಜಲ್ದಾರ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಟಿಎಚ್ಒ ಡಾ. ಬನದೇಶ್ವರ, ನಾಡ ತಹಶೀಲ್ದಾರ್ ಮನೋಹರ ನಾಯಕ ಭೇಟಿ ನೀಡಿದರು.