<p><strong>ಲಿಂಗಸುಗೂರು</strong>: ಕಸಬಾಲಿಂಗಸುಗೂರು ಗ್ರಾಮದ ಸಿಆರ್ಪಿಎಫ್ ಯೋಧ ಚೆನ್ನಬಸಪ್ಪ ಜೂಲಗುಡ್ಡ ಅವರ ಮೇಲೆ ಮೇ19ರಂದು ಹಲ್ಲೆ ಮಾಡಿದ ಆರೋಪಿಗಳನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಮಾಜಿ ಹಾಗೂ ಹಾಲಿ ಅರೆಸೇನಾಪಡೆಗಳ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.</p>.<p>ಚೆನ್ನಬಸಪ್ಪ ಜೂಲಗುಡ್ಡ ಅವರು ತಮ್ಮ ಅಕ್ಕನ ಹೊಲದ ಬದುವಿನ ವಿಚಾರವಾಗಿ ಪಕ್ಕದ ಜಮೀನಿನ ಮಾಲೀಕರು ಅಕ್ಕನೊಂದಿಗೆ ಜಗಳ ಮಾಡುತ್ತಿದ್ದನ್ನು ಬಿಡಿಸಲು ಹೋದಾಗ ಅಮರೇಶ ಹಾಗೂ ಮಂಜುನಾಥ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೂಡಲೇ ಗಡೀಪಾರು ಮಾಡಬೇಕು. ಯೋಧನ ಅಕ್ಕನ ಜಮೀನನ್ನು ಹದ್ದುಬಸ್ತು ಮಾಡಿ ಗಡಿ ಗುರುತಿಸಬೇಕು. ಯೋಧನ ಕುಟಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.</p>.<p>ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಹನುಮಂತ ಕನ್ನಾಳ, ಪಂಪಣ್ಣ ಜಾವೂರು, ಕುಪ್ಪಣ್ಣ ಕುರ್ಲಿ, ಸಲೀಂ, ವಿಶ್ವನಾಥ ನಾಯ್ಕ, ಮಹಾಂತೇಶ ಹಿರೇಮಠ, ಪಂಪಯ್ಯ, ಮಾನಪ್ಪ ಬಡಿಗೇರ,ಯಲ್ಲಪ್ಪ ಗೂಗಿಹಾಳ, ಸಂಗಪ್ಪ, ಸಿದ್ದರಾಜು, ನೀಲಪ್ಪ ಮೇಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು</strong>: ಕಸಬಾಲಿಂಗಸುಗೂರು ಗ್ರಾಮದ ಸಿಆರ್ಪಿಎಫ್ ಯೋಧ ಚೆನ್ನಬಸಪ್ಪ ಜೂಲಗುಡ್ಡ ಅವರ ಮೇಲೆ ಮೇ19ರಂದು ಹಲ್ಲೆ ಮಾಡಿದ ಆರೋಪಿಗಳನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಿಸಿ ಮಾಜಿ ಹಾಗೂ ಹಾಲಿ ಅರೆಸೇನಾಪಡೆಗಳ ಯೋಧರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮಂಗಳವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.</p>.<p>ಚೆನ್ನಬಸಪ್ಪ ಜೂಲಗುಡ್ಡ ಅವರು ತಮ್ಮ ಅಕ್ಕನ ಹೊಲದ ಬದುವಿನ ವಿಚಾರವಾಗಿ ಪಕ್ಕದ ಜಮೀನಿನ ಮಾಲೀಕರು ಅಕ್ಕನೊಂದಿಗೆ ಜಗಳ ಮಾಡುತ್ತಿದ್ದನ್ನು ಬಿಡಿಸಲು ಹೋದಾಗ ಅಮರೇಶ ಹಾಗೂ ಮಂಜುನಾಥ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕೂಡಲೇ ಗಡೀಪಾರು ಮಾಡಬೇಕು. ಯೋಧನ ಅಕ್ಕನ ಜಮೀನನ್ನು ಹದ್ದುಬಸ್ತು ಮಾಡಿ ಗಡಿ ಗುರುತಿಸಬೇಕು. ಯೋಧನ ಕುಟಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.</p>.<p>ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಹನುಮಂತ ಕನ್ನಾಳ, ಪಂಪಣ್ಣ ಜಾವೂರು, ಕುಪ್ಪಣ್ಣ ಕುರ್ಲಿ, ಸಲೀಂ, ವಿಶ್ವನಾಥ ನಾಯ್ಕ, ಮಹಾಂತೇಶ ಹಿರೇಮಠ, ಪಂಪಯ್ಯ, ಮಾನಪ್ಪ ಬಡಿಗೇರ,ಯಲ್ಲಪ್ಪ ಗೂಗಿಹಾಳ, ಸಂಗಪ್ಪ, ಸಿದ್ದರಾಜು, ನೀಲಪ್ಪ ಮೇಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>