ಕವಿತಾಳ: ಎರಡು ಬೈಕ್ಗಳು ಪರಸ್ಪರ ಡಿಕ್ಕಿಯಾಗಿ ಬೈಕ್ ಸವಾರರೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪಟ್ಟಣ ಸಮೀಪದ ಗಂಗಾನಗರ ಕ್ಯಾಂಪ್ (74) ರಸ್ತೆಯ ದಾಸನಹಳ್ಳದ ಹತ್ತಿರ ಶನಿವಾರ ನಡೆದಿದೆ.
ಮೆಹಬೂಬ್ ನಗರ ಕ್ಯಾಂಪ್ ನಿವಾಸಿ ಖಾಸಿಂಸಾಬ್ (48) ಮೃತ ವ್ಯಕ್ತಿ. ಇನ್ನೊಂದು ಬೈಕ್ನಲ್ಲಿದ್ದ ಸವಾರ ಕೃಷ್ಣ ಯಾದವ ಮತ್ತು ಶಿವು ಗಾಯಗೊಂಡಿದ್ದು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.