ಟಾಟಾ ಏಸ್ ವಾಹನದಲ್ಲಿ ಈರುಳ್ಳಿ ತೆಗೆದುಕೊಂಡು ಹೋಗುವಾಗ ರಾಷ್ಟ್ರೀಯ ಹೆದ್ದಾರಿ ಬಳಿಯ ರಸ್ತೆ ವಿಭಜಕ( ಡಿವೈಡರ್) ಗೆ ವಾಹನ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಗರದ ಬೇರೂನ್ ಕಿಲ್ಲಾ ಬಡಾವಣೆಯ ಬಾಲಕ ಸಮರ್ಥ (11) ಮೃತಪಟ್ಟಿದ್ದು, ವಾಹನ ಚಾಲಕನ ಕೈ ತುಂಡಾಗಿದೆ. ಅಂಬಾಜಿ ಎಂಬಾತನ ತಲೆಗೆ ಗಂಭೀರ ಗಾಯವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.