ಒಂದೆಡೆ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮಾಡಿ ಮತ್ತೊಂದೆಡೆ ದುಡಿಯುವ ಕಾರ್ಮಿಕರಲ್ಲಿನ ಐಕ್ಯತೆಯನ್ನು ಮುರಿಯಲು ಸಿಎಎ, ಎನ್ಆರ್ಸಿ, ಎನ್ಪಿಆರ್ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ. ಇದು ಅಲ್ಪಸಂಖ್ಯಾತರಿಗೆ ಮಾತ್ರವಲ್ಲದೇ ಕೋಟ್ಯಂತರ ಬಡವರು, ಭೂರಹಿತರು, ಅಸಂಘಟಿತ ಕಾರ್ಮಿಕರು ದಾಖಲೆ ನೀಡಲಾಗದೇ ಬಂಧಿಖಾನೆಗೆ ತಳ್ಳುವ ಕಾಯ್ದೆಗಳಾಗಿವೆ. ಜಾತಿ, ಧರ್ಮವನ್ನು ಮರೆತು ಕಾಯ್ದೆ ವಿರೋಧಿಸಿ ಹೋರಾಟ ಮಾಡುತ್ತಿದನ್ನು ಸಹಿಸದೇ ಹೋರಾಟ ಹತ್ತಿಕ್ಕುವ ಕಾರ್ಯ ಮಾಡುತ್ತಿದೆ.ದೇಶದಲ್ಲಿ ತಲೆ ದೂರಿರುವ ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ, ಬೆಲೆ ಏರಿಕೆ,ನಿರುದ್ಯೋಗ, ಬಡತನ, ಅಪೌಷ್ಟಿಕತೆ ಹಾಗೂ ಇತರೆ ಜ್ವಲಂತ ಸಮಸ್ಯೆಗಳತ್ತ ಲಕ್ಷ್ಯ ವಹಿಸುತ್ತಿಲ್ಲ ಎಂದು ಆರೋಪಿಸಿದರು.