ದೇವದುರ್ಗದಿಂದ ದಾವಣಗೆರೆಯತ್ತ ಕಾರು ಸಂಚರಿಸುತ್ತಿತ್ತು. ಟಿಪ್ಪರ್ಗಳು ಕಂಕರ್ ಸಾಗಿಸುತ್ತಿದ್ದವು. ಗೋಲಪಲ್ಲಿ ಅಪಘಾತ ವಲಯವಾಗಿದ್ದು, ನಿಧಾನವಾಗಿ ಸಂಚರಿಸುವಂತೆ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಆಗಿದ್ದರೂ ಎರಡು ವಾಹನಗಳು ಎದುರು ಬದಿರಾಗುವಾಗ ಸ್ವಲ್ಪ ಯಾಮಾರಿದರೂ ಯಮನಪಾದ ಸೇರಬೇಕಾಗುತ್ತದೆ.