<p><strong>ಹಟ್ಟಿ ಚಿನ್ನದಗಣಿ (ರಾಯಚೂರು): </strong>ಎದಿರು ಬದಿರು ಬಂದ ಟಿಪ್ಪರ್ಗಳ ಮಧ್ಯೆ ಕಾರು ಸಿಲುಕಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಯುವಕ ಮತ್ತು ಯುವತಿಯ ದೇಹ ಛಿದ್ರಗೊಂಡಿರುವ ಭೀಕರ ಅಪಘಾತ ಘಟನೆವೊಂದು ಲಿಂಗಸುಗೂರು ತಾಲ್ಲೂಕು ಗೋಲಪಲ್ಲಿ ಬಳಿ ಶ್ರೀರಂಗಪಟ್ಟಣ–ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.</p>.<p>ಹರ್ಷಿತಾ (26) ಹಾಗೂ ಭುವನ (27) ಸ್ಥಳದಲ್ಲೇ ಮೃತಪಟ್ಟಿದ್ದು, ದೇಹದ ಭಾಗಗಳು ಛಿದ್ರವಾಗಿ ಹೆದ್ದಾರಿಯಲ್ಲಿ ಬಿದ್ದಿದ್ದವು. ಶವ ಹೊರತೆಗೆಯುವುದಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕಾರಿನ ಫಲಕವೂ ಸೇರಿದಂತೆ ಛಿದ್ರವಾಗಿದ್ದರಿಂದ ಮೃತರ ಗುರುತು ಪತ್ತೆ ಮಾಡುವುದು ಕಷ್ಟವಾಗಿದೆ. ಇದೀಗ ಹೆಸರುಗಳು ಮಾತ್ರ ಗೊತ್ತಾಗಿವೆ.</p>.<p>ದೇವದುರ್ಗದಿಂದ ದಾವಣಗೆರೆಯತ್ತ ಕಾರು ಸಂಚರಿಸುತ್ತಿತ್ತು. ಟಿಪ್ಪರ್ಗಳು ಕಂಕರ್ ಸಾಗಿಸುತ್ತಿದ್ದವು. ಗೋಲಪಲ್ಲಿ ಅಪಘಾತ ವಲಯವಾಗಿದ್ದು, ನಿಧಾನವಾಗಿ ಸಂಚರಿಸುವಂತೆ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಆಗಿದ್ದರೂ ಎರಡು ವಾಹನಗಳು ಎದುರು ಬದಿರಾಗುವಾಗ ಸ್ವಲ್ಪ ಯಾಮಾರಿದರೂ ಯಮನಪಾದ ಸೇರಬೇಕಾಗುತ್ತದೆ.</p>.<p>ಇದೇ ತಾಣದಲ್ಲಿ ಮೇಲಿಂದ ಮೇಲಿಂದ ಅಪಘಾತಗಳು ಸಂಭವಿಸುತ್ತಿದ್ದರೂ, ಅಪಘಾತ ತಪ್ಪಿಸಲು ಅಗತ್ಯ ಕ್ರಮಗಳು ಜಾರಿಯಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದಗಣಿ (ರಾಯಚೂರು): </strong>ಎದಿರು ಬದಿರು ಬಂದ ಟಿಪ್ಪರ್ಗಳ ಮಧ್ಯೆ ಕಾರು ಸಿಲುಕಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಯುವಕ ಮತ್ತು ಯುವತಿಯ ದೇಹ ಛಿದ್ರಗೊಂಡಿರುವ ಭೀಕರ ಅಪಘಾತ ಘಟನೆವೊಂದು ಲಿಂಗಸುಗೂರು ತಾಲ್ಲೂಕು ಗೋಲಪಲ್ಲಿ ಬಳಿ ಶ್ರೀರಂಗಪಟ್ಟಣ–ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.</p>.<p>ಹರ್ಷಿತಾ (26) ಹಾಗೂ ಭುವನ (27) ಸ್ಥಳದಲ್ಲೇ ಮೃತಪಟ್ಟಿದ್ದು, ದೇಹದ ಭಾಗಗಳು ಛಿದ್ರವಾಗಿ ಹೆದ್ದಾರಿಯಲ್ಲಿ ಬಿದ್ದಿದ್ದವು. ಶವ ಹೊರತೆಗೆಯುವುದಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕಾರಿನ ಫಲಕವೂ ಸೇರಿದಂತೆ ಛಿದ್ರವಾಗಿದ್ದರಿಂದ ಮೃತರ ಗುರುತು ಪತ್ತೆ ಮಾಡುವುದು ಕಷ್ಟವಾಗಿದೆ. ಇದೀಗ ಹೆಸರುಗಳು ಮಾತ್ರ ಗೊತ್ತಾಗಿವೆ.</p>.<p>ದೇವದುರ್ಗದಿಂದ ದಾವಣಗೆರೆಯತ್ತ ಕಾರು ಸಂಚರಿಸುತ್ತಿತ್ತು. ಟಿಪ್ಪರ್ಗಳು ಕಂಕರ್ ಸಾಗಿಸುತ್ತಿದ್ದವು. ಗೋಲಪಲ್ಲಿ ಅಪಘಾತ ವಲಯವಾಗಿದ್ದು, ನಿಧಾನವಾಗಿ ಸಂಚರಿಸುವಂತೆ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಆಗಿದ್ದರೂ ಎರಡು ವಾಹನಗಳು ಎದುರು ಬದಿರಾಗುವಾಗ ಸ್ವಲ್ಪ ಯಾಮಾರಿದರೂ ಯಮನಪಾದ ಸೇರಬೇಕಾಗುತ್ತದೆ.</p>.<p>ಇದೇ ತಾಣದಲ್ಲಿ ಮೇಲಿಂದ ಮೇಲಿಂದ ಅಪಘಾತಗಳು ಸಂಭವಿಸುತ್ತಿದ್ದರೂ, ಅಪಘಾತ ತಪ್ಪಿಸಲು ಅಗತ್ಯ ಕ್ರಮಗಳು ಜಾರಿಯಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>