<p><strong>ರಾಯಚೂರು: </strong>ಮಂತ್ರಾಲಯಕ್ಕೆ ಬಂದು ಹುಬ್ಬಳ್ಳಿಗೆ ಮರಳುವಾಗ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಕೌತಾಳಂ ಮಂಡಳದ ಎರಗೇರಿ ಗ್ರಾಮದ ಬಳಿ ತುಂಗಭದ್ರಾ ಕಾಲುವೆಗೆ ಕಾರು ಉರುಳಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ನಾಪತ್ತೆಯಾಗಿದ್ದಾರೆ. </p>.<p>ಹುಬ್ಬಳ್ಳಿಯ ಸುನೀಲ್ (21) ಮೃತರು. ಮಣಿಕಂಠ (22) ಅವರು ಮುಳುಗಿರುವ ಶಂಕೆ ಇದೆ. ಅಭಿಷೇಕ, ಅಂಪಾಯ, ಹೈದರ್ ಹಾಗೂ ಮಂಜುನಾಥ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ರಸ್ತೆ ಮಧ್ಯ ನಾಯಿ ಅಡ್ಡ ಬಂದಿದೆ. ಅಪಘಾತ ತಪ್ಪಿಸುವ ಯತ್ನದಲ್ಲಿ ಕಾರು ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ಕ್ರೇನ್ ನೆರವಿನಿಂದ ಕಾರು ಹೊರಗೆ ತೆಗಿಸಿ ನಾಲ್ವರ ರಕ್ಷಣೆ ಮಾಡಲಾಯಿತು. ಕೌತಾಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಮಂತ್ರಾಲಯಕ್ಕೆ ಬಂದು ಹುಬ್ಬಳ್ಳಿಗೆ ಮರಳುವಾಗ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಕೌತಾಳಂ ಮಂಡಳದ ಎರಗೇರಿ ಗ್ರಾಮದ ಬಳಿ ತುಂಗಭದ್ರಾ ಕಾಲುವೆಗೆ ಕಾರು ಉರುಳಿ ಒಬ್ಬರು ಮೃತಪಟ್ಟಿದ್ದಾರೆ. ಇನ್ನೊಬ್ಬರು ನಾಪತ್ತೆಯಾಗಿದ್ದಾರೆ. </p>.<p>ಹುಬ್ಬಳ್ಳಿಯ ಸುನೀಲ್ (21) ಮೃತರು. ಮಣಿಕಂಠ (22) ಅವರು ಮುಳುಗಿರುವ ಶಂಕೆ ಇದೆ. ಅಭಿಷೇಕ, ಅಂಪಾಯ, ಹೈದರ್ ಹಾಗೂ ಮಂಜುನಾಥ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ರಸ್ತೆ ಮಧ್ಯ ನಾಯಿ ಅಡ್ಡ ಬಂದಿದೆ. ಅಪಘಾತ ತಪ್ಪಿಸುವ ಯತ್ನದಲ್ಲಿ ಕಾರು ಕಾಲುವೆಗೆ ಬಿದ್ದಿದೆ ಎನ್ನಲಾಗಿದೆ. ಕ್ರೇನ್ ನೆರವಿನಿಂದ ಕಾರು ಹೊರಗೆ ತೆಗಿಸಿ ನಾಲ್ವರ ರಕ್ಷಣೆ ಮಾಡಲಾಯಿತು. ಕೌತಾಳಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>