<p><strong>ರಾಯಚೂರು:</strong> ಕೇಂದ್ರ ಸರ್ಕಾರವು ದೇಶದಲ್ಲಿ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದು, ಬ್ರಿಟಿಷರಿಗಿಂತಲೂ ಅಪಾಯಕಾರಿಯಾದ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ ಎಂದು ಬಾಮ್ಸೆಫ್ ರಾಷ್ಟ್ರೀಯ ಘಟಕದ ಅಧ್ಯಕ್ಷ ವಾಮನ್ ಮೇಶ್ರಾಂ ಹೇಳಿದರು.</p>.<p>ನಗರದ ಮಹಿಳಾ ಸಮಾಜದ ಆವರಣದಲ್ಲಿ ಬಹುಜನ ಕ್ರಾಂತಿ ಮೋರ್ಚಾದಿಂದ ಸೋಮವಾರ ಏರ್ಪಡಿಸಿದ್ದ ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಿಎಎ ಕಾಯ್ದೆಯನ್ನು ಡಿಎನ್ಎ ಆಧಾರಿತ ಎನ್ಆರ್ಸಿ ಜಾರಿಗೆ ಆಗ್ರಹಿಸಿ ಪತಿವರ್ತನಾ ಯಾತ್ರಾ ಬಹಿರಂಗ ಸಮಾವೇಶ’ದಲ್ಲಿ ಭಾನುವಾರ ಮಾತನಾಡಿದರು.</p>.<p>ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ ಮತ್ತು ಬ್ರಾಹ್ಮಣರ ಅಣತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದಲ್ಲಿ ಸಂವಿಧಾನ ಬಿಟ್ಟು ಮಾತನಾಡಕೂಡದು ಎನ್ನುವ ಪ್ರಜ್ಞೆ ಬೇಕಾಗಿದೆ ಎಂದರು.</p>.<p>ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಮತಬ್ಯಾಂಕ್ ಎಂದು ನೋಡಿದೆ. ಜನತಂತ್ರ ವ್ಯವಸ್ಥೆಯಲ್ಲಿ ತಿಳಿವಳಿಕೆ ತುಂಬಾ ಅಗತ್ಯ. ಇದಕ್ಕಾಗಿ ಸರಿಯಾಗಿ ಪಡೆದುಕೊಳ್ಳಬೇಕು. ಚಾಕು, ಚೂರಿಯಿಂದ ಏನೂ ಸಾಧ್ಯವಿಲ್ಲ. ಸಂಘಟಿತ, ಜಾಣತನದ ಹೋರಾಟದಿಂದ ಎಲ್ಲವನ್ನು ಸಾಧಿಸಬಹುದು ಎಂದು ಹೇಳಿದರು.</p>.<p>ಒಟ್ಟು ಮತದಾನದಲ್ಲಿ ಶೇ 35 ರಷ್ಟು ಮತಗಳನ್ನು ಪಡೆದವರು 300 ಸ್ಥಾನಗಳನ್ನು ಹೇಗೆ ಪಡೆಯುವುದಕ್ಕೆ ಸಾಧ್ಯವಾಯಿತು. ಇವಿಎಂ ಯಂತ್ರದಲ್ಲಿನ ದೋಷ ಹೊರಬಂದರೆ ಮಾತ್ರ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದರು.</p>.<p>ಮುಖಂಡರಾದ ಜುಲ್ಫಿಕರ್ ಹಷ್ಮಿ, ಸಿರಾಜ್ ಜಾಫ್ರಿ, ವಿಕಾಸ ಚೌದ್ರಿ ಮಾತನಾಡಿದರು. ಬಷಿರುದ್ದೀನ್, ಶಿವಕುಮಾರ್ ಮ್ಯಾಗಳಮನಿ, ಜೆ.ಬಿ.ರಾಜು, ರಾಜೇಶಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಕೇಂದ್ರ ಸರ್ಕಾರವು ದೇಶದಲ್ಲಿ ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದ್ದು, ಬ್ರಿಟಿಷರಿಗಿಂತಲೂ ಅಪಾಯಕಾರಿಯಾದ ಆಡಳಿತ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಿದೆ ಎಂದು ಬಾಮ್ಸೆಫ್ ರಾಷ್ಟ್ರೀಯ ಘಟಕದ ಅಧ್ಯಕ್ಷ ವಾಮನ್ ಮೇಶ್ರಾಂ ಹೇಳಿದರು.</p>.<p>ನಗರದ ಮಹಿಳಾ ಸಮಾಜದ ಆವರಣದಲ್ಲಿ ಬಹುಜನ ಕ್ರಾಂತಿ ಮೋರ್ಚಾದಿಂದ ಸೋಮವಾರ ಏರ್ಪಡಿಸಿದ್ದ ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಿಎಎ ಕಾಯ್ದೆಯನ್ನು ಡಿಎನ್ಎ ಆಧಾರಿತ ಎನ್ಆರ್ಸಿ ಜಾರಿಗೆ ಆಗ್ರಹಿಸಿ ಪತಿವರ್ತನಾ ಯಾತ್ರಾ ಬಹಿರಂಗ ಸಮಾವೇಶ’ದಲ್ಲಿ ಭಾನುವಾರ ಮಾತನಾಡಿದರು.</p>.<p>ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆರ್ಎಸ್ಎಸ್ ಮತ್ತು ಬ್ರಾಹ್ಮಣರ ಅಣತಿಯಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದಲ್ಲಿ ಸಂವಿಧಾನ ಬಿಟ್ಟು ಮಾತನಾಡಕೂಡದು ಎನ್ನುವ ಪ್ರಜ್ಞೆ ಬೇಕಾಗಿದೆ ಎಂದರು.</p>.<p>ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಮತಬ್ಯಾಂಕ್ ಎಂದು ನೋಡಿದೆ. ಜನತಂತ್ರ ವ್ಯವಸ್ಥೆಯಲ್ಲಿ ತಿಳಿವಳಿಕೆ ತುಂಬಾ ಅಗತ್ಯ. ಇದಕ್ಕಾಗಿ ಸರಿಯಾಗಿ ಪಡೆದುಕೊಳ್ಳಬೇಕು. ಚಾಕು, ಚೂರಿಯಿಂದ ಏನೂ ಸಾಧ್ಯವಿಲ್ಲ. ಸಂಘಟಿತ, ಜಾಣತನದ ಹೋರಾಟದಿಂದ ಎಲ್ಲವನ್ನು ಸಾಧಿಸಬಹುದು ಎಂದು ಹೇಳಿದರು.</p>.<p>ಒಟ್ಟು ಮತದಾನದಲ್ಲಿ ಶೇ 35 ರಷ್ಟು ಮತಗಳನ್ನು ಪಡೆದವರು 300 ಸ್ಥಾನಗಳನ್ನು ಹೇಗೆ ಪಡೆಯುವುದಕ್ಕೆ ಸಾಧ್ಯವಾಯಿತು. ಇವಿಎಂ ಯಂತ್ರದಲ್ಲಿನ ದೋಷ ಹೊರಬಂದರೆ ಮಾತ್ರ ಎಲ್ಲವೂ ಗೊತ್ತಾಗುತ್ತದೆ ಎಂದು ತಿಳಿಸಿದರು.</p>.<p>ಮುಖಂಡರಾದ ಜುಲ್ಫಿಕರ್ ಹಷ್ಮಿ, ಸಿರಾಜ್ ಜಾಫ್ರಿ, ವಿಕಾಸ ಚೌದ್ರಿ ಮಾತನಾಡಿದರು. ಬಷಿರುದ್ದೀನ್, ಶಿವಕುಮಾರ್ ಮ್ಯಾಗಳಮನಿ, ಜೆ.ಬಿ.ರಾಜು, ರಾಜೇಶಕುಮಾರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>