ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುರಸಭೆ ವ್ಯಾಪ್ತಿಯಲ್ಲಿ ಎಸ್.ಆರ್ ಡೆವಲಪರ್ಸ್ ಸಂಸ್ಥೆಯ ಸೂರಿಬಾಬು, ಸಂತೋಷ್ ಸೇಠ್ ಮತ್ತಿತರರಿಂದ ನಿಯಮ ಉಲ್ಲಂಘಿಸಿ ಒಟ್ಟು 14 ಲೇಔಟ್ಗಳು ತಲೆ ಎತ್ತಿವೆ. ಈ ಪೈಕಿ 9 ಲೇಔಟ್ಗಳಿಗೆ ಪುರಸಭೆ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ನಿರಪೇಕ್ಷಣಾ ಪತ್ರಗಳನ್ನೂ ನೀಡಿದ್ದಾರೆ. 14 ಲೇಔಟ್ಗಳಲ್ಲಿ ನಿಯಮಾನುಸಾರ ಸಮರ್ಪಕವಾದ ಕುಡಿಯುವ ನೀರು, ಒಳಚರಂಡಿ, ಮಳೆ ನೀರು ಕೊಯ್ಲು, ಸುಸಜ್ಜಿತ ರಸ್ತೆಯ ವ್ಯವಸ್ಥೆ ಇಲ್ಲ. ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ’ ಎಂದು ದೂರಿದ ಅವರು, ‘ಅಕ್ರಮವಾಗಿ ನಿರ್ಮಿಸಿರುವ ಲೇಔಟ್ಗಳಲ್ಲಿನ ನಿವೇಶನಗಳನ್ನು ₹15 ಲಕ್ಷದಿಂದ ₹20 ಲಕ್ಷಗಳ ವರೆಗೆ ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.