‘ಕುಡಿಯುವುದು ಬಿಟ್ಟ ಮ್ಯಾಲ್ ಮನೆಯಲ್ಲಿ ಬಹಳ ಖುಷಿ ಆಗಿದ್ದಾರೆ. ದೇವರು ನಿನ್ನ ಹಿಂಗೇ ಇಟ್ಟಿರಲಪ್ಪ ಅಂಥಾರ. ಇದರಿಂದ ಸಂಸಾರ ಭೇಷ್ ಇರತೈತಿ. ಮಕ್ಕಳು, ಹೆಂಡತಿ, ತಂದೆ–ತಾಯಿ ಎಲ್ಲರೂ ಆರಾಮದಿಂದ ಇದ್ದೀವಿ. ಕೆಲಸ ಮಾಡಿಕೊಂಡು ಮನೆಗೆ ಹೋಗ್ತೀನಿ. ಕೆಲಸ ಎಲ್ಲಾ ಮುಗಿಸಿಕೊಂಡು ಮನೆಗೆ ಹೋಗುವಾಗ ಮೊದಲು ಕುಡಿಯುವ ಚಟಾ ಇತ್ತು. ಸರ್ಕಾರದವರು ಮದ್ಯ ನಿಷೇಧ ಮಾಡಿದ ಮ್ಯಾಲ್, ಒಂದೆರಡು ದಿನ ಕೈ, ಕಾಲು ನೋವು ಅದಾಂಗ ಅನಿಸಿತ್ತು. ಈಗೇನೂ ಸಮಸ್ಯೆಯಿಲ್ಲ. ಆರಾಮ ಇದ್ದೀನಿ’ ಎಂದು ಹೇಳಿದರು.