<p><strong>ಕವಿತಾಳ</strong>: ಹತ್ತಿ ಬೆಳೆಗೆ ಕೀಟ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿರೇಹಣಿಗಿ ಗ್ರಾಮದ ಬಸವರಾಜ ಸ್ವಾಮಿ ಅವರ ಜಮೀನಿಗೆ ಕೃಷಿ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.</p>.<p>‘ಹತ್ತಿ ಬೆಳೆಗೆ ಒಣಕೆ ಬಂಡಿ ಹುಳು ಕಾಟ’ ಶೀರ್ಷಿಕೆಯಡಿ ʼಪ್ರಜಾವಾಣಿʼಯ ಭಾನುವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>‘ಒಣ ಭೂಮಿ ಬೆಳೆಗಳಲ್ಲಿ ಸಾಮಾನ್ಯವಾಗಿ ಈ ಸಮಸ್ಯೆ ಕಂಡು ಬರುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಕೀಟ ನಿಯಂತ್ರಣಕ್ಕೆ ರಾಸಾಯನಿಕ ಸಿಂಪಡಿಸುವಂತೆ ಸಲಹೆ ನೀಡಲಾಗಿದೆ’ ಎಂದು ಕೃಷಿ ಸಹಾಯಕ ಅಧಿಕಾರಿ ಶಿವಶರಣ ಭೋವಿ ತಿಳಿಸಿದರು.</p>.<p>ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರಜ್ವಲಕುಮಾರ, ರೈತ ಬಸವರಾಜಸ್ವಾಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.</p>.<div><blockquote>ಒಣಕೆ ಬಂಡಿ ಹುಳು ಬೆಳೆಗೆ ಬಹುತೇಕ ಹಾನಿ ಮಾಡುವುದಿಲ್ಲ. ನೈಸರ್ಗಿಕ ಆಹಾರ ಸಿಗದೆ ಹತ್ತಿ ಮೊಳಕೆಗೆ ಹಾನಿ ಮಾಡಿರುವ ಸಾಧ್ಯತೆ ಇದೆ. ಸಂಪೂರ್ಣ ಬೆಳೆ ನಾಶಪಡಿಸುವ ಅಗತ್ಯವಿಲ್ಲ </blockquote><span class="attribution">ಶಿವಶರಣ ಭೋವಿ, ಸಹಾಯಕ ಕೃಷಿ ಅಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ</strong>: ಹತ್ತಿ ಬೆಳೆಗೆ ಕೀಟ ಬಾಧೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಿರೇಹಣಿಗಿ ಗ್ರಾಮದ ಬಸವರಾಜ ಸ್ವಾಮಿ ಅವರ ಜಮೀನಿಗೆ ಕೃಷಿ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.</p>.<p>‘ಹತ್ತಿ ಬೆಳೆಗೆ ಒಣಕೆ ಬಂಡಿ ಹುಳು ಕಾಟ’ ಶೀರ್ಷಿಕೆಯಡಿ ʼಪ್ರಜಾವಾಣಿʼಯ ಭಾನುವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.</p>.<p>‘ಒಣ ಭೂಮಿ ಬೆಳೆಗಳಲ್ಲಿ ಸಾಮಾನ್ಯವಾಗಿ ಈ ಸಮಸ್ಯೆ ಕಂಡು ಬರುತ್ತದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಕೀಟ ನಿಯಂತ್ರಣಕ್ಕೆ ರಾಸಾಯನಿಕ ಸಿಂಪಡಿಸುವಂತೆ ಸಲಹೆ ನೀಡಲಾಗಿದೆ’ ಎಂದು ಕೃಷಿ ಸಹಾಯಕ ಅಧಿಕಾರಿ ಶಿವಶರಣ ಭೋವಿ ತಿಳಿಸಿದರು.</p>.<p>ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಪ್ರಜ್ವಲಕುಮಾರ, ರೈತ ಬಸವರಾಜಸ್ವಾಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.</p>.<div><blockquote>ಒಣಕೆ ಬಂಡಿ ಹುಳು ಬೆಳೆಗೆ ಬಹುತೇಕ ಹಾನಿ ಮಾಡುವುದಿಲ್ಲ. ನೈಸರ್ಗಿಕ ಆಹಾರ ಸಿಗದೆ ಹತ್ತಿ ಮೊಳಕೆಗೆ ಹಾನಿ ಮಾಡಿರುವ ಸಾಧ್ಯತೆ ಇದೆ. ಸಂಪೂರ್ಣ ಬೆಳೆ ನಾಶಪಡಿಸುವ ಅಗತ್ಯವಿಲ್ಲ </blockquote><span class="attribution">ಶಿವಶರಣ ಭೋವಿ, ಸಹಾಯಕ ಕೃಷಿ ಅಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>