ಹೊಟೇಲ್, ರೆಸ್ಟೊರೆಂಟ್, ಖಾನಾವಳಿ ಹಾಗೂ ಮದ್ಯದ ಅಂಗಡಿಗಳು ಪಾರ್ಸಲ್ ಕೊಡುವುದಕ್ಕೆ ಮಧ್ಯಾಹ್ನದವರೆಗೂ ಅವಕಾಶ ನೀಡಲಾಗಿತ್ತು. ಖಾಸಗಿ ವಾಹನ, ಸರ್ಕಾರಿ ಬಸ್ಸುಗಳು ಹಾಗೂ ಆಟೋಗಳ ಸಂಚಾರ ಇದ್ದರೂ ಸಾಕಷ್ಟು ಜನರು ಇರಲಿಲ್ಲ. ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಚಾರ ಹೊರಡಲು ಬಸ್ಸುಗಳು ಸಜ್ಜಾಗಿದ್ದರೂ ಪ್ರಯಾಣಿಕರಿಲ್ಲದೆ, ಕಾಯುತ್ತಿದ್ದ ದೃಶ್ಯ ಕಂಡುಬಂತು.