ಜೂನ್ನಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿಕೊಳ್ಳಲಾರಂಭಿಸಿತ್ತು. ಸೋಂಕಿನ ಕುರಿತು ಜನಜಾಗೃತಿ ಕೊರತೆ ಎದ್ದು ಕಾಣುತ್ತಿತ್ತು. ಆದರೆ, ಈಗ ಜನರು ಜಾಗೃತರಾಗಿದ್ದರೂ ಸೋಂಕು ಹರಡುವಿಕೆ ಸೆಪ್ಟೆಂಬರ್ನಲ್ಲಿಯೂ ವ್ಯಾಪಕವಾಯಿತು. ಇದೇ ವೇಳೆ, ಸೋಂಕು ಪತ್ತೆ ಕಾರ್ಯಾಚರಣೆಯನ್ನು ಜಿಲ್ಲೆಯಲ್ಲಿ ಮೂರು ಪಟ್ಟು ಹೆಚ್ಚಿಸಲಾಗಿದೆ. ಇದರಿಂದ ಗಂಟಲು ದ್ರವ ಮಾದರಿಗಳ ಸಂಗ್ರಹ, ಪಾಜಿಟಿವ್ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆಯೂ ನಿರೀಕ್ಷೆ ಮೀರಿ ಅಧಿಕವಾಗಿದೆ. ಪ್ರತಿಯೊಂದು ಹಂತಗಳಲ್ಲಿ ಕೋವಿಡ್ ನಿಯಂತ್ರಣದ ಕ್ರಮಗಳು ಜಾರಿಯಾಗುತ್ತಿವೆ. ವ್ಯಾಪಕ ಕಾರ್ಯಾಚರಣೆಯ ಫಲದಿಂದಾಗಿ ಅಕ್ಟೋಬರ್ 1 ರಿಂದ 14 ರವರೆಗೂ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯ ಕಡಿಮೆಯಾಗಿದೆ. ಸಾವುಗಳು ಇಳಿಮುಖವಾಗಿದ್ದು, ಕೋವಿಡ್ ಆಸ್ಪತ್ರೆಗೆ ದಾಖಲಾದವರು ಗುಣಮುಖವಾಗಿ ವಾಪಸಾಗುತ್ತಿದ್ದಾರೆ.